ಹೈದರಾಬಾದ್: ವಿವಾದಿತ ರಿಯಾಲಿಟಿ ಶೋ ಎಂದೇ ಖ್ಯಾತಿಯಾಗಿರುವ ಬಿಗ್ಬಾಸ್ ಶೋನ ನಾಲ್ಕನೇ ಆವೃತ್ತಿ ಇನ್ನು ಕೆಲವೇ ದಿನಗಳಲ್ಲಿ ತೆಲುಗಿನಲ್ಲಿಮ ಶುರುವಾಗಲಿದೆ. ಕಳೆದ ಬಾರಿ ಕಾರ್ಯಕ್ರಮ ನಿರೂಪಣೆ ಮಾಡಿದ್ದ ನಾಗಾರ್ಜುನ ಅವರೇ ಈ ಬಾರಿಯೂ ಶೋ ನಡೆಸಿಕೊಡುವ ಜವಬ್ದಾರಿಯನ್ನು ಹೊತ್ತಿದ್ದಾರೆ.
ಮೂಲಗಳ ಪ್ರಕಾರ ಈ ಬಾರಿ ತೆಲುಗು ಬಿಗ್ಬಾಸ್ ಮನೆಗೆ ಪ್ರಿಯಾ ವಾಡ್ಲಮನಿ, ಅಪೂರ್ವ, ಯಾಮಿನಿ ಭಾಸ್ಕರ್, ಕಿರುತೆರೆ ಕಲಾವಿದ ಸೈಯದ್ ಸೊಹೈಲ್, ಆ್ಯಂಕರ್ ಪ್ರಶಾಂತಿ, ಸಿಂಗರ್ ನೋಲ್ ಸೀನ್, ನಟರಾದ ನಂದು, ಕರಾಟೆ ಕಲ್ಯಾಣಿ, ಜಬರ್ದಸ್ತ್ ಅವಿನಾಶ್, ಯುಟ್ಯೂಬರ್ ಮೆಹ್ಬೂಬ್ ದಿಲ್ಸೆ, ಆ್ಯಂಕರ್ಗಳಾ ಜೋರ್ದಾರ್ ಸುಜಾತ, ಅರಿಯಾನ ಗ್ಲೋರಿ, ಅಖಿಲ್ ಸಾರ್ಥಕ್ ಮತ್ತು ನಟಿ ಪೂನಮ್ ಬಜ್ವಾ ಪ್ರವೇಶಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಹಬ್ಬದ ಸಂಭ್ರಮದ ಮಧ್ಯೆ ಊರಿನ ಹೊರಭಾಗದಲ್ಲಿ ಪತ್ತೆಯಾದ ಬ್ಯಾಗ್ ತೆರೆದ ಗ್ರಾಮಸ್ಥರಿಗೆ ಶಾಕ್!
ಕೆಲವು ದಿನಗಳ ಹಿಂದೆ ತೆಲುಗು ನಟ ತರುಣ್ ಸಹ ಸ್ಪರ್ಧಿಗಳಲ್ಲಿ ಒಬ್ಬರೆಂದು ವದಂತಿಯೊಂದು ಹರಿದಾಡಿತ್ತು. ಆದರೆ, ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ನಟ ಶೋನಲ್ಲಿ ಭಾಗವಹಿಸುತ್ತಿಲ್ಲ ಮತ್ತು ನನಗೆ ಆಸಕ್ತಿಯೂ ಇಲ್ಲ ಎಂದಿದ್ದಾರೆ.
ಅಂದಹಾಗೆ ನಾಲ್ಕನೇ ಆವೃತ್ತಿ ಮುಂದಿನ ತಿಂಗಳಿಂದ ಆರಂಭವಾಗಲಿದೆ. ಕರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿ ಶೋನಲ್ಲಿ ಕೆಲವು ಮಹತ್ವದ ಬದಲಾವಣೆಗಳು ಆಗಲಿವೆ. ಈಗಾಗಲೇ ಸ್ಪರ್ಧಿಗಳನ್ನು ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಇದೆ. ಅಚ್ಚರಿಯೆಂದರೆ ಈ ಬಾರಿ ಬಿಗ್ಬಾಸ್ ಮನೆ ಪ್ರವೇಶಿಸಲು ಟಾಲಿವುಡ್ ತಾರೆಯರಿಗೆ ಅನುಮತಿ ನೀಡುವುದಿಲ್ಲ ಎಂಬ ವರದಿಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?
ಕಳೆದ ಮೂರು ಶೋಗಳಲ್ಲಿ ಚಲನಚಿತ್ರ ನಟರು ತಮ್ಮ ಚಿತ್ರಗಳ ಪ್ರಚಾರಕ್ಕಾಗಿ ಬಿಗ್ಬಾಸ್ ಮನೆಗೆ ಪ್ರವೇಶಿಸಿ ನಿರೂಪಕರೊಂದಿಗೆ ಮಾತ್ರವಲ್ಲದೆ ಸ್ಪರ್ಧಿಗಳ ಜತೆಯಲ್ಲಿಯೂ ಸಂವಹನ ನಡೆಸುತ್ತಿದ್ದರು. ಆದರೆ, ಈ ಬಾರಿ ಈ ರೀತಿ ಯಾವುದೇ ಚಟುವಟಿಕೆ ನಡೆಯುವುದಿಲ್ಲ ಎಂದು ಹೇಳಲಾಗಿದೆ. (ಏಜೆನ್ಸೀಸ್)
ಸಂಪೂರ್ಣ ಕೋಮಾಕ್ಕೆ ಜಾರಿದ ಪ್ರಣಬ್ ಮುಖರ್ಜಿ; ಪರಿಸ್ಥಿತಿ ಬಿಗಡಾಯಿಸಿದೆ ಎಂದ ವೈದ್ಯರು