ಬೆಂಗಳೂರು: ಈ ಗುರುವಾರ ಶಿವರಾತ್ರಿ ಹಬ್ಬವಿದೆ. ನಾವಂತೂ ಆ ಹಬ್ಬವನ್ನ ಮಾಡಲ್ಲ, ಒಳ್ಳೆ ಮಾಂಸ ತಂದು ಬಾಡೂಟ ಮಾಡೋಣ ಎಂದು ನೀವೇನಾದರೂ ಪ್ಲಾನ್ ಹಾಕಿಕೊಂಡಿದ್ದರೆ ಅದನ್ನು ಮರೆತುಬಿಡಿ. ಏಕೆಂದರೆ ಗುರುವಾರದಂದು ಬೆಂಗಳೂರಿನಲ್ಲಿ ಯಾವುದೇ ಮಾಂಸದಂಗಡಿ ತೆರೆಯುವಂತಿಲ್ಲ ಎಂದು ಬಿಬಿಎಂಪಿ ಆದೇಶ ಹೊರಡಿಸಿಬಿಟ್ಟಿದೆ.
ಮಾರ್ಚ್ 11ರಂದು ಮಹಾ ಶಿವರಾತ್ರಿ ಹಬ್ಬವಿರುವ ಪ್ರಯುಕ್ತ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಯಾರಾದರೂ ಮಾಂಸ ತಿನ್ನಲೇಬೇಕೆಂದುಕೊಂಡಿದ್ದರೆ ಅವರು ಇಂದೇ ಹೋಗಿ ಮಾಂಸ ಖರೀದಿಸಿ ತಂದು ಮನೆಯಲ್ಲಿಟ್ಟುಕೊಳ್ಳಬಹುದಾಗಿದೆ. (ಏಜೆನ್ಸೀಸ್)
VIDEO: ನನ್ನನ್ನು ಕೊಂದುಬಿಡಿ… ಪ್ಲೀಸ್ ಮಕ್ಕಳನ್ನು ಬಿಟ್ಟುಬಿಡಿ- ಮಂಡಿಯೂರಿ ಕುಳಿತ ಸಿಸ್ಟರ್!
ಉತ್ತರಾಖಂಡ ಸಿಎಂ ಸ್ಥಾನಕ್ಕೆ ತಿರತ್ ಸಿಂಗ್ ರಾವತ್ ಆಯ್ಕೆ: ಸಂಜೆ 4ಕ್ಕೆ ಪ್ರಮಾಣ ವಚನ ಸ್ವೀಕಾರ