ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕಾಂಗ್ರೆಸ್ನ ಅಧಿಕೃತ ‘x’ಎಕ್ಸ್ ಖಾತೆಯಲ್ಲಿ ತನ್ನ ಬಗ್ಗೆ ಆಕ್ಷೇಪಾರ್ಹ ವಿಷಯವನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಿ ಗಡ್ಕರಿ ಈ ನೋಟಿಸ್ ಕಳುಹಿಸಿದ್ದಾರೆ.
ನೋಟಿಸ್ನಲ್ಲಿ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಲಿಖಿತವಾಗಿ ಕ್ಷಮೆಯಾಚಿಸುವಂತೆ ಕೇಳಲಾಗಿದೆ.
ಇದನ್ನೂ ಓದಿ: ತಮಿಳು ಕಲಿಯುತ್ತಿರುವ ಕನ್ನಡದ ನಟಿ! ಕಾರಣ ಹೀಗಿದೆ ನೋಡಿ..
ಸಂದರ್ಶನವೊಂದರಲ್ಲಿ ಗಡ್ಕರಿ ಹೇಳಿದ್ದ ವಿಷಯಗಳನ್ನು ಮರೆಮಾಚಿ, ಅದನ್ನು ತಿರುಚಿ ನಂತರ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಅಸಲಿ ವಿಷಯಗಳನ್ನು ಮರೆಮಾಚಲಾಗಿದೆ ಎಂದು ಗಡ್ಕರಿ ವಕೀಲ ಹೇಳಿದ್ದಾರೆ.
ಮೊದಲು ನನ್ನ ಸಂದರ್ಶನದ ತಿಉಚಿದ ವೀಡಿಯೊವನ್ನು ಎಕ್ಸ್ ನಿಂದ ತೆಗೆದುಹಾರಬೇಕು. ನಂತರ ಮೂರು ದಿನಗಳಲ್ಲಿ ಲಿಖಿತ ಕ್ಷಮೆಯಾಚಿಸಬೇಕು ಎಂದು ನೋಟಿಸ್ನಲ್ಲಿ ಒತ್ತಾಯಿಸಿದ್ದಾರೆ. ನೋಟಿಸ್ ಸ್ವೀಕರಿಸಿದ 24 ಗಂಟೆಗಳಲ್ಲಿ ಈ ರೀತಿ ಮಾಡದಿದ್ದರೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಇದಕ್ಕೆ ನೀವೇ ಹೊಣೆಯಾಗುತ್ತೀರಿ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ವೀಡಿಯೊದಲ್ಲಿದೆ?: ಕಾಂಗ್ರೆಸ್ ಹಂಚಿಕೊಂಡಿರುವ ವೀಡಿಯೋ ನಿತಿನ್ ಗಡ್ಕರಿ ಸಂದರ್ಶನವಾಗಿದ್ದು, ವಾಸ್ತವವಾಗಿ ಅವರು ದೇಶದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾಗಿದೆ. ಅವರ ಸಂದರ್ಶನದ ಒಂದು ಸಣ್ಣ ಭಾಗವನ್ನು ಕಾಂಗ್ರೆಸ್ ಪಕ್ಷ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಹಿಂದಿಯಲ್ಲಿ ಶೀರ್ಷಿಕೆ ನೀಡಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ಕಾಂಗ್ರೆಸ್, ‘ಇಂದು ಹಳ್ಳಿ, ಕಾರ್ಮಿಕರು ಮತ್ತು ರೈತರು ದುಃಖಿತರಾಗಿದ್ದಾರೆ. ಗ್ರಾಮಗಳಲ್ಲಿ ಉತ್ತಮ ರಸ್ತೆಗಳಿಲ್ಲ, ಕುಡಿಯಲು ನೀರಿಲ್ಲ, ಉತ್ತಮ ಆಸ್ಪತ್ರೆಗಳಿಲ್ಲ, ಉತ್ತಮ ಶಾಲೆಗಳಿಲ್ಲ ಎಂದು ಮೋದಿ ಸರ್ಕಾರ ಮತ್ತು ಸಚಿವ ಗಡ್ಕರಿ ವಿರುದ್ಧ ಆರೋಪಿಸಿ ಪೋಸ್ಟ್ ಮಾಡಿದೆ.
ರಿಷಬ್ ಶೆಟ್ಟಿ, ಜೂ.ಎನ್ಟಿಆರ್, ಪ್ರಶಾಂತ್ ನೀಲ್ ಒಂದೇ ಕಡೆ.. ಏನಿದು ಕಥೆ?