ನವದೆಹಲಿ: ನಿರ್ಭಯಾ ಗ್ಯಾಂಗ್ರೇಪ್ ಮತ್ತು ಕೊಲೆ ಅಪರಾಧಿಗಳನ್ನು ಇಂದು ಬೆಳಗ್ಗೆ 5.30ರಲ್ಲಿ ಗಲ್ಲಿಗೇರಿಸಲಾಗಿದೆ. ಈ ಮೂಲಕ 2012ರಲ್ಲಿ ನಡೆದ ಕರಾಳ ಘಟನೆಗೆ ಏಳು ವರ್ಷದ ಸುದೀರ್ಘ ಕಾನೂನು ಹೊರಾಟ ನಡುವೆ ತಡವಾದರೂ ಅಂತಿಮವಾಗಿ ನ್ಯಾಯ ದೊರಕಿದ್ದು, ಇದು ಅತ್ಯಾಚಾರಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ.
ನಾಲ್ವರು ಆರೋಪಿಗಳನ್ನು ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಹ್ಯಾಂಗ್ಮನ್ ಪವನ್ ಜಲ್ಲಾದ್ ನೇಣಿಗೇರಿಸಿದ್ದಾರೆ. ಇದರ ನಡುವೆ ನಿರ್ಭಯಾ ಅಪರಾಧಿಗಳ ಜೈಲು ಜೀವನದ ಕೆಲವು ಆಸಕ್ತಿ ವಿಷಯಗಳು ಬಹಿರಂಗವಾಗಿವೆ.
ನಾಲ್ವರು ಅಪರಾಧಿಗಳಲ್ಲಿ ಮೂವರು ತಮ್ಮ ಜೈಲು ವಾಸದ ಅವಧಿಯಲ್ಲಿ ಒಟ್ಟು 1,37,000 ರೂ. ಸಂಪಾದನೆ ಮಾಡಿದ್ದಾರೆ. ಕಳೆದ 7 ವರ್ಷಗಳ ಜೈಲು ವಾಸದ ಅವಧಿಯಲ್ಲಿ ಮುಕೇಶ್ ಯಾವುದೇ ಕೂಲಿ ಕೆಲಸವನ್ನು ಆಯ್ದುಕೊಂಡಿಲ್ಲ. ಇದನ್ನು ಹೊರತುಪಡಿಸಿದರೆ, ಅಕ್ಷಯ್ 69,000 ರೂ., ಪವನ್ 29,000 ರೂ. ಮತ್ತು ವಿನಯ್ 39,000 ರೂ. ಸಂಪಾದಿಸಿದ್ದಾರೆ ಎಂದು ಜೈಲು ಮೂಲಗಳು ಮಾಹಿತಿ ನೀಡಿವೆ.
ಇದಲ್ಲದೆ, ನಾಲ್ವರು ಅಪರಾಧಿಗಳು ಒಟ್ಟು 23 ಬಾರಿ ಜೈಲು ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಅಪರಾಧಿ ವಿನಯ್ ಜೈಲು ನಿಯಮ ಉಲ್ಲಂಘನೆ ಅಡಿಯಲ್ಲಿ 11 ಬಾರಿ ಶಿಕ್ಷೆಗೆ ಗುರಿಯಾಗಿದ್ದಾರೆ. ಅಕ್ಷಯ್ ಒಂದು ಬಾರಿಯಾದರೆ, ಮುಕೇಶ್ 3 ಹಾಗೂ ಪವನ್ 8 ಬಾರಿ ಜೈಲು ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೈಲಿನಲ್ಲಿರುವಾಗಲೇ 2016ರಲ್ಲಿ ಮುಕೇಶ್, ಪವನ್ ಮತ್ತು ಅಕ್ಷಯ್ 10ನೇ ತರಗತಿಗೆ ಪ್ರವೇಶ ಪಡೆದು ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸಿದ್ದರೂ ಉತ್ತೀರ್ಣರಾಗಿಲ್ಲ. ವಿನಯ್ 2015ರಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ನೀಡಿದರೂ ಅದನ್ನು ಪೂರ್ಣಗೊಳಿಸಿಲ್ಲ. (ಏಜೆನ್ಸೀಸ್)
ನೇಣಿಗೇರುವ ಮುನ್ನ ಇಡೀ ರಾತ್ರಿ ನಾಲ್ವರು ಅಪರಾಧಿಗಳ ವರ್ತನೆ ಹೇಗಿತ್ತು? ಅಧಿಕಾರಿಗಳು ಹೇಳಿದ್ದೇನು?
ಅಪರಾಧಿಗಳನ್ನು ನೇಣಿಗೇರಿಸಿದ ಬೆನ್ನಲ್ಲೇ ನಿರ್ಭಯಾ ತಂದೆ ನೀಡಿದ ಪ್ರತಿಕ್ರಿಯೆ ಇದಾಗಿತ್ತು…
ನಿರ್ಭಯಾ ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು: ತಾಯಿ ಆಶಾದೇವಿ ಅವರ ಮೊದಲ ಪ್ರತಿಕ್ರಿಯೆ ಇದಾಗಿತ್ತು..