ಬೆಂಗಳೂರು: ಸ್ಯಾಂಡಲ್ವುಡ್ ನಟ, ನಿಖಿಲ್ ಕುಮಾರಸ್ವಾಮಿ ಅವರ ಪುತ್ರ ಅವ್ಯಾನ್ ದೇವ್ಗೆ ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಕೃಷ್ಣನ ಉಡುಗೆ ತೊಡಿಸಿ, ತೆಗೆಸಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ಇದನ್ನೂ ಓದಿ: ಸೆ.15ರಂದು ನಗರದಲ್ಲಿ ಸಂವಿಧಾನ ಓದು: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ
ಸೆಪ್ಟಂಬರ್ 06 ರಂದು ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅದ್ದೂರಿಯಾಗಿ ಸಂಭ್ರಮಿಸಲಾಯಿತು. ಕೃಷ್ಣಾಷ್ಟಮಿ ಹಿನ್ನೆಲೆ ತಮ್ಮ ಪುತ್ರ ಅವ್ಯಾನ್ ದೇವ್ಗೆ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿ, ವಿಶೇಷವಾಗಿ ಕೃಷ್ಣನ ಉಡುಗೆಯನ್ನು ತೊಡಿಸಿ, ಫೋಟೋಶೂಟ್ ಮಾಡಿಸಿದ್ದಾರೆ. ಕೃಷ್ಣನಾಗಿ ಮಿಂಚಿದ ಅವ್ಯಾನ್ ದೇವ್ ಫೋಟೋಸ್ ಇಲ್ಲಿವೆ ನೋಡಿ..
ತಮ್ಮ ಸಾಮಾಜಿಕ ಜಾಲತಾಣದ ಖಾತೆ ಇನ್ಸ್ಟಾಗ್ರಾಮ್ನಲ್ಲಿ ಮಗನ ಫೋಟೋಸ್ ಹಂಚಿಕೊಂಡ ನಟ ನಿಖಿಲ್, ಕೃಷ್ಣಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದು, ಎಲ್ಲರಿಗೂ ಶುಭಕೋರಿದ್ದರು. ನಿಖಿಲ್ ಕುಮಾರಸ್ವಾಮಿ ಪುತ್ರ ಕಷ್ಣನಾಗಿ ಮಿಂಚಿದ ಫೋಟೋಸ್ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿದ್ದಾರೆ.