ನವದೆಹಲಿ : ಕೋವಿಡ್ 19 ವಿರುದ್ಧ ಭಾರತ ಇನ್ನೂ ಸಾಮೂಹಿಕ ರೋಗನಿರೋಧಕತೆ(ಹರ್ಡ್ ಇಮ್ಯುನಿಟಿ) ಸಾಧಿಸಿಲ್ಲ. ವೈರಸ್ ಸೋಂಕಿನ ಹೊಸ ಅಲೆಗಳ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಖಾಯಿಲೆಯನ್ನು ನಿಯಂತ್ರಣದಲ್ಲಿಡುವಲ್ಲಿ ಮುಂದಿನ 125 ದಿನಗಳು ತುಂಬಾ ಮಹತ್ವದ್ದಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾ ಗೋಷ್ಠಿಯಲ್ಲಿ ಇಂದು ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್ ಅವರು, “ಈಗ ಸೋಂಕು ಹರಡದಂತೆ ತಡೆಗಟ್ಟುವುದು ಬಹಳ ಮುಖ್ಯ ಮತ್ತು ಇದು ಕೋವಿಡ್-ಸೂಕ್ತ ನಡವಳಿಕೆಯನ್ನು ಅಳವಡಿಸಿಕೊಂಡರೆ ಮಾತ್ರ ಸಾಧ್ಯ” ಎಂದಿದ್ದಾರೆ.
ಇದನ್ನೂ ಓದಿ: ನಿಂತಿಲ್ಲ ಚೀನಾ ಹೂಡಿಕೆ ಆ್ಯಪ್ ಹಾವಳಿ; ಅಧಿಕ ಲಾಭಾಂಶದ ಹೆಸರಿನಲ್ಲಿ 1.75 ಲಕ್ಷ ರೂ. ವಂಚನೆ
ಮುಂದಿನ 125 ದಿನಗಳು ಭಾರತದ ಕರೊನಾ ವಿರುದ್ಧದ ಹೋರಾಟದಲ್ಲಿ ಬಹಳ ಮಹತ್ವದ್ದಾಗಿದೆ. ಸೋಂಕು ಹರಡದಂತೆ ತಡೆಯಬೇಕು. ಕೋವಿಡ್ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ವಲಯದಲ್ಲಿ ಉಳಿಯಬೇಕು ಎಂದು ಡಾ. ಪೌಲ್ ಹೇಳಿದ್ದಾರೆ. (ಏಜೆನ್ಸೀಸ್)
ಕರೊನಾ ಆತಂಕದಲ್ಲಿ ಕನ್ವರ್ ಯಾತ್ರೆ: ಆರೋಗ್ಯ, ಬದುಕುವ ಹಕ್ಕು ಪರಮೋಚ್ಛ ಎಂದ ಸುಪ್ರೀಂ ಕೋರ್ಟ್
ಮಕ್ಕಳಿಗೆ ಕರೊನಾ ಲಸಿಕೆ : ‘ಮುಗಿಯುವ ಹಂತದಲ್ಲಿ ಕ್ಲಿನಿಕಲ್ ಟ್ರಯಲ್ಸ್’