ಬೆಂಗಳೂರು: ವಿಜಯ್ ಕುಮಾರ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಸದ್ಯಕ್ಕೆ ಎರಡು ದೊಡ್ಡ ಬಜೆಟ್ನ ಚಿತ್ರಗಳನ್ನು ನಿರ್ಮಿಸುತ್ತಿದೆ. ಒಂದು ಯಶ್ ಅಭಿನಯದ ‘ಕೆಜಿಎಫ್ 2’. ಇನ್ನೊಂದು ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’. ಈ ಪೈಕಿ ‘ಯುವರತ್ನ’ ಚಿತ್ರದ ಚಿತ್ರೀಕರಣ ಮುಗಿದಿದ್ದರೆ, ‘ಕೆಜಿಎಫ್ 2’ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ಮುಗಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಲಿಪಿಕಾರ ಗುಣಭದ್ರನ ಪೂರ್ವಜ ಸಮಂತಭದ್ರನ ಅವತಾರದಲ್ಲಿ ರವಿಚಂದ್ರನ್!
ಈ ಮಧ್ಯೆ, ಹೊಂಬಾಳೆ ಫಿಲಂಸ್ ಸದ್ಯದಲ್ಲೇ ಇನ್ನೊಂದು ಹೊಸ ಚಿತ್ರವನ್ನು ಘೋಷಿಸುವುದಾಗಿ ಹೇಳಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಸುದ್ದಿ ಹರಿದಾಡುತ್ತಿದ್ದು, ಅದರಂತೆ ಡಿಸೆಂಬರ್ 02ರಂದು ಅಂದರೆ, ಬುಧವಾರ ಮಧ್ಯಾಹ್ನ 02.09ಕ್ಕೆ ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.
ಸದ್ಯಕ್ಕೆ ಈ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಮತ್ತು ಯಾರೆಲ್ಲಾ ಇರುತ್ತಾರೆ ಎಂಬ ವಿಷಯ ಬಹಿರಂಗಗೊಳ್ಳದಿದ್ದರೂ, ಇದು ಸಹ ‘ಕೆಜಿಎಫ್’ ತರಹ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಎಂಬ ಸುಳಿವನ್ನು ಚಿತ್ರದ ಘೋಷಣಾ ಪೋಸ್ಟರ್ನಲ್ಲಿ ನೀಡಲಾಗಿದೆ. ಈ ಪೋಸ್ಟರ್ನಲ್ಲಿ ಇದು ಸಹ ಇನ್ನೊಂದು ಇಂಡಿಯನ್ ಸಿನಿಮಾ ಆಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಐಂದ್ರಿತಾ- ದಿಗಂತ್ ಎಷ್ಟು ವರ್ಷದ ಬಳಿಕ ಒಟ್ಟಿಗೆ ನಟಿಸ್ತಿದ್ದಾರೆ ಗೊತ್ತ?; ಈ ಜೋಡಿಗೆ ಕಿಚ್ಚನ ಹಾರೈಕೆಯೂ ಸಿಕ್ಕಿದೆ
‘ಕೆಜಿಎಫ್ 1’, ‘ಕೆಜಿಎಫ್ 2’ ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರಗಳಾಗಿದ್ದು, ‘ಯುವರತ್ನ’ ಚಿತ್ರವು ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಹೊಂಬಾಳೆ ಫಿಲಂಸ್ನ ಹೊಸ ಚಿತ್ರ ಸಹ ಇನ್ನೊಂದು ಬಿಗ್ ಬಜೆಟ್ನ ಮತ್ತು ದೊಡ್ಡ ತಾರಾಗಣದ ಚಿತ್ರವಾಗುವುದರ ಜತೆಗೆ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿರುವುದು ವಿಶೇಷ.
ಕನ್ನಡದಲ್ಲಿ ರಚಿತಾ ರಾಮ್ ಮಾಡಲಿರುವ ಪಾತ್ರ ಬಾಲಿವುಡ್ನಲ್ಲಿ ಜಾನ್ವಿ ಕಪೂರ್ಗೆ