More

    ಬುಧವಾರ ಹೊಸ ಚಿತ್ರ ಘೋಷಿಸಲಿರುವ ಹೊಂಬಾಳೆ ಫಿಲಂಸ್​ …

    ಬೆಂಗಳೂರು: ವಿಜಯ್​ ಕುಮಾರ್​ ಕಿರಗಂದೂರು ಅವರ ಹೊಂಬಾಳೆ ಫಿಲಂಸ್​ ಸದ್ಯಕ್ಕೆ ಎರಡು ದೊಡ್ಡ ಬಜೆಟ್​ನ ಚಿತ್ರಗಳನ್ನು ನಿರ್ಮಿಸುತ್ತಿದೆ. ಒಂದು ಯಶ್​ ಅಭಿನಯದ ‘ಕೆಜಿಎಫ್​ 2’. ಇನ್ನೊಂದು ಪುನೀತ್​ ರಾಜಕುಮಾರ್​ ಅಭಿನಯದ ‘ಯುವರತ್ನ’. ಈ ಪೈಕಿ ‘ಯುವರತ್ನ’ ಚಿತ್ರದ ಚಿತ್ರೀಕರಣ ಮುಗಿದಿದ್ದರೆ, ‘ಕೆಜಿಎಫ್​ 2’ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ಮುಗಿಯುವ ಸಾಧ್ಯತೆ ಇದೆ.

    ಇದನ್ನೂ ಓದಿ: ಲಿಪಿಕಾರ ಗುಣಭದ್ರನ ಪೂರ್ವಜ ಸಮಂತಭದ್ರನ ಅವತಾರದಲ್ಲಿ ರವಿಚಂದ್ರನ್!

    ಈ ಮಧ್ಯೆ, ಹೊಂಬಾಳೆ ಫಿಲಂಸ್​ ಸದ್ಯದಲ್ಲೇ ಇನ್ನೊಂದು ಹೊಸ ಚಿತ್ರವನ್ನು ಘೋಷಿಸುವುದಾಗಿ ಹೇಳಿದೆ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಈಗಾಗಲೇ ಸುದ್ದಿ ಹರಿದಾಡುತ್ತಿದ್ದು, ಅದರಂತೆ ಡಿಸೆಂಬರ್​ 02ರಂದು ಅಂದರೆ, ಬುಧವಾರ ಮಧ್ಯಾಹ್ನ 02.09ಕ್ಕೆ ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.

    ಸದ್ಯಕ್ಕೆ ಈ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಮತ್ತು ಯಾರೆಲ್ಲಾ ಇರುತ್ತಾರೆ ಎಂಬ ವಿಷಯ ಬಹಿರಂಗಗೊಳ್ಳದಿದ್ದರೂ, ಇದು ಸಹ ‘ಕೆಜಿಎಫ್​’ ತರಹ ಪ್ಯಾನ್​ ಇಂಡಿಯಾ ಸಿನಿಮಾ ಆಗಲಿದೆ ಎಂಬ ಸುಳಿವನ್ನು ಚಿತ್ರದ ಘೋಷಣಾ ಪೋಸ್ಟರ್​ನಲ್ಲಿ ನೀಡಲಾಗಿದೆ. ಈ ಪೋಸ್ಟರ್​ನಲ್ಲಿ ಇದು ಸಹ ಇನ್ನೊಂದು ಇಂಡಿಯನ್​ ಸಿನಿಮಾ ಆಗಲಿದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಐಂದ್ರಿತಾ- ದಿಗಂತ್​ ಎಷ್ಟು ವರ್ಷದ ಬಳಿಕ ಒಟ್ಟಿಗೆ ನಟಿಸ್ತಿದ್ದಾರೆ ಗೊತ್ತ?; ಈ ಜೋಡಿಗೆ ಕಿಚ್ಚನ ಹಾರೈಕೆಯೂ ಸಿಕ್ಕಿದೆ

    ‘ಕೆಜಿಎಫ್​ 1’, ‘ಕೆಜಿಎಫ್​ 2’ ಚಿತ್ರಗಳು ಪ್ಯಾನ್​ ಇಂಡಿಯಾ ಚಿತ್ರಗಳಾಗಿದ್ದು, ‘ಯುವರತ್ನ’ ಚಿತ್ರವು ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಹೊಂಬಾಳೆ ಫಿಲಂಸ್​ನ ಹೊಸ ಚಿತ್ರ ಸಹ ಇನ್ನೊಂದು ಬಿಗ್​ ಬಜೆಟ್​ನ ಮತ್ತು ದೊಡ್ಡ ತಾರಾಗಣದ ಚಿತ್ರವಾಗುವುದರ ಜತೆಗೆ ಪ್ಯಾನ್​ ಇಂಡಿಯಾ ಸಿನಿಮಾ ಆಗುತ್ತಿರುವುದು ವಿಶೇಷ.

    ಕನ್ನಡದಲ್ಲಿ ರಚಿತಾ ರಾಮ್​ ಮಾಡಲಿರುವ ಪಾತ್ರ ಬಾಲಿವುಡ್​ನಲ್ಲಿ ಜಾನ್ವಿ ಕಪೂರ್​ಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts