ಬೆಂಗಳೂರು: ದೇಶ-ವಿದೇಶದಲ್ಲೂ ಜನಜನಿತವಾಗಿರುವ ಕಾಫಿ ಡೇ ಸಂಸ್ಥೆಯ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಅಗಲಿಕೆ ಬಳಿಕ, ಇದೀಗ ಆ ಸಂಸ್ಥೆಗೆ ಹೊಸ ಸಿಇಒ ನೇಮಕವಾಗಿದ್ದಾರೆ. ಈ ಮೂಲಕ ಕಾಫಿ ಡೇ ಎಂಟರ್ಪ್ರೈಸಸ್ ಚುಕ್ಕಾಣಿಯನ್ನು ಮಹಿಳೆಯೊಬ್ಬರು ಹಿಡಿದಿದ್ದಾರೆ.
ಹೌದು.. ‘ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್’ನ ನೂತನ ಸಿಇಒ ಆಗಿ ಮಾಳವಿಕಾ ಹೆಗ್ಡೆ ನೇಮಕವಾಗಿದ್ದಾರೆ. ಅಂದಹಾಗೆ ಈ ಮಾಳವಿಕಾ ಬೇರೆ ಯಾರೂ ಅಲ್ಲ.. ಸಿದ್ಧಾರ್ಥ ಹೆಗ್ಡೆ ಅವರ ಪತ್ನಿ, ಅರ್ಥಾತ್ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಪುತ್ರಿ. ಕಂಪನಿಯ ನಿರ್ದೇಶಕ ಮಂಡಳಿಯು ಸಿ.ಎಚ್.ವಸುಂಧರಾ ದೇವಿ, ಗಿರಿ ದೇವನೂರ್, ಮೋಹನ್ ರಾಘವೇಂದ್ರ ಕೊಂಡಿ ಅವರನ್ನು ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಿದೆ.
ಸಿದ್ಧಾರ್ಥ ಅವರು 2019ರ ಆಗಸ್ಟ್ನಲ್ಲಿ ಮಂಗಳೂರಿನಲ್ಲಿ ನೇತ್ರಾವತಿ ಸೇತುವೆ ಮೇಲೆ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದು, ಬಳಿಕ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಿದ್ಧಾರ್ಥ ಅಗಲಿಕೆಯ ಸಮಯದಲ್ಲಿ ಕಂಪನಿ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ದೊಡ್ಡ ಮಟ್ಟದ ಸಾಲವೂ ಇದೆ. (ಏಜೆನ್ಸೀಸ್)
ಚಳಿಗಾಲದ ಅಧಿವೇಶನ: ಮಧ್ಯೆ ಗ್ಲಾಸು.. ಸದನದಲ್ಲೇ ‘ಗಡಿ ಮೀರಿದ’ ಶಾಸಕರು; ಇಲ್ಲಿವೆ ನೋಡಿ ಫೋಟೋಗಳು!
VIDEO| ಪೊಲೀಸರು ನನ್ನ ಚಪ್ಪಲಿ ಕದ್ದಿದ್ದಾರೆ! ಹೋರಾಟ ನಿರತ ರೈತ ಮಹಿಳೆಯ ಆರೋಪ ಹೇಗಿದೆ ನೋಡಿ