ನವದೆಹಲಿ: ಪತಂಜಲಿ ಸಂಸ್ಥೆ ಕರೊನಾ ವೈರಸ್ಗೆ ಔಷಧಿ ಕಂಡು ಹಿಡಿದಿದ್ದು, ಜೂ.23ರಂದು ಕರೊನಿಲ್ ಕಿಟ್ ಬಿಡುಗಡೆ ಮಾಡಿದ್ದು, ಕೇವಲ 7 ದಿನಗಳಲ್ಲಿ ಸೋಂಕಿನಿಂದ ಗುಣಮುಖರಾಗಬಹುದು ಎಂದು ಹೇಳಿದ್ದೆಲ್ಲ ದೇಶದಲ್ಲಿ ಬಹುದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.
ಅಲ್ಲದೆ ಕೇಂದ್ರ ಸರ್ಕಾರ ಆಯುಷ್ ಇಲಾಖೆ ಈ ಔಷಧಿಯಿಂದ ಅಂತರ ಕಾಯ್ದುಕೊಂಡು , ಕರೊನಿಲ್ ಕಿಟ್ನ ಕ್ಲಿನಿಕಲ್ ಟೆಸ್ಟ್ನ ಎಲ್ಲ ದಾಖಲೆಗಳನ್ನೂ ಕಳಿಸಿ, ಅಲ್ಲಿಯವರೆಗೂ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಖಡಕ್ ಸೂಚನೆ ನೀಡಿತ್ತು. ಅದಾದ ಬಳಿಕ ಬಾಬಾ ರಾಮ್ ದೇವ್, ಪತಂಜಲಿ ಸಂಸ್ಥೆಯ ಸಿಇಒ ಸೇರಿ ಒಟ್ಟು ಐವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಆದರೆ ಈಗ..ಪತಂಜಲಿ ಸಂಸ್ಥೆ ಸಂಪೂರ್ಣ ಯೂ ಟರ್ನ್ ತೆಗೆದುಕೊಂಡಿದೆ. ಕರೊನಿಲ್ ಕಿಟ್ಗೆ ಸಂಬಂಧಪಟ್ಟಂತೆ ಉತ್ತರಾಖಂಡ ಔಷಧಿ ಇಲಾಖೆ ಪತಂಜಲಿ ಸಂಸ್ಥೆಗೆ ನೀಡಿದ್ದ ನೋಟಿಸ್ಗೆ ಉತ್ತರಿಸಿದ ಸಿಇಒ ಆಚಾರ್ಯ ಬಾಲಕೃಷ್ಣ ಅವರು, ಕರೊನಿಲ್ನಿಂದ ಕರೊನಾ ಸೋಂಕು ಕಡಿಮೆಯಾಗುತ್ತದೆ ಎಂದು ನಾವು ಯಾವತ್ತೂ ಹೇಳಿಲ್ಲ. ನಾವು ಕರೊನಾ ಸೋಂಕಿಗೆ ಔಷಧಿ ಕಂಡು ಹಿಡಿದಿದ್ದೇವೆ. ಅದನ್ನು ಕ್ಲಿನಿಕಲ್ ಟ್ರಯಲ್ಗೆ ಒಳಪಡಿಸಿದ್ದೇವೆ. ಆಗ ಕೆಲವು ಕರೊನಾ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದಷ್ಟೇ ಹೇಳಿದ್ದೇವೆ. ಅದರಲ್ಲಿ ಗೊಂದಲ ಬೇಡ ಎಂದು ಉತ್ತರಿಸಿದ್ದಾರೆ. (ಏಜೆನ್ಸೀಸ್)
ಕರೊನಾ ಲಸಿಕೆ ಮೊದಲಿಗೆ ಸಿಗೋದು ಯಾರಿಗೆ? ಪ್ರಧಾನಿ ಮೋದಿಯೇ ಸಿದ್ಧಪಡಿಸಿದ್ದಾರೆ ವಿತರಣಾ ಯೋಜನೆ ರೂಪುರೇಷೆ…!