More

    ಪತ್ನಿಗೆ ಮೆಸೇಜ್ ಮಾಡಿದ್ದ ಅನ್ಯಕೋಮಿನ ಯುವಕನ ಕಣ್ಣು ಕಿತ್ತು, ಕೊಚ್ಚಿ ಕೊಲೆಗೈದ ಅರ್ಚಕ

    ರಾಯಚೂರು: ಪತ್ನಿಗೆ ಮೆಸೇಜ್‌ ಮಾಡಿದ್ದಕ್ಕೆ ಸಿಟ್ಟಾದ ಪೂಜಾರಿ, ಮುಸ್ಲಿಂ ಯುವಕನ ಕಣ್ಣು ಕಿತ್ತಿ, ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ರಾಯಚೂರಿನ ತುಗ್ಗಲದಿನ್ನಿ ಗ್ರಾಮದಲ್ಲಿ ನಡೆದಿದೆ.

    ಖಾದರ್ ಭಾಷಾ (28) ಕೊಲೆಯಾದವನು. ಮಾರುತಿ ಕೊಲೆ ಆರೋಪಿ. ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾನೆ. ಆಂಜನೇಯ ಗುಡಿ ಪೂಜಾರಿಯ ಪತ್ನಿಗೆ ಮುಸ್ಲಿಂ ಯುವಕ ಮೆಸೇಜ್ ಮಾಡಿದ್ದಕ್ಕೆ ಹತ್ಯೆ ನಡೆದಿದೆ ಎನ್ನಲಾಗಿದೆ.

    ನಡೆದಿದ್ದೇನು?: ಇಬ್ಬರೂ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ನಿವಾಸಿಗಳಾಗಿದ್ದಾರೆ. ಮಾರುತಿ ಅರ್ಚಕ ಆಗಿದ್ದನು. ಇವನ ಪತ್ನಿಯ ಮೇಲೆ ಖಾದರ್‌ ಭಾಷಾ ಕಣ್ಣು ಹಾಕಿದ್ದ ಎನ್ನುವ ಅನುಮಾನ ಮಾರುತಿಗೆ ಇತ್ತು. ಖಾದರ್ ಭಾಷಾ ಪತ್ನಿಗೆ ಮೇಸೆಜ್​ ಮಾಡಿದ್ದಾನೆ ಎಂದು ಕೋಪಗೊಂಡ ಮಾರುತಿ ಖಾದರ್‌ ಭಾಷಾನ ಕಣ್ಣು ಕಿತ್ತು ಹಾಕಿ, ಮುಖದ ಗುರುತು ಸಿಗದಂತೆ ಕೊಚ್ಚಿ ಕೊಲೆ ಮಾಡಲಾಗಿದೆ. ಮಾರುತಿ ಕೊಲೆಗೈದು ತಾನೇ ಖುದ್ದಾಗಿ ಠಾಣೆಗೆ ಬಂದು ಶರಣಾಗತಿ ಆಗಿದ್ದಾನೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    ಮಂಗಳವಾರ ಬೆಳಗ್ಗೆ 9 ಗಂಟೆಗೆ ಸುಮಾರಿಗೆ ತುಗ್ಗಲದಿನ್ನಿ ಗ್ರಾಮದಲ್ಲಿ ಕೃತ್ಯ ನಡೆದಿದೆ. ಕೊಲೆಯಲ್ಲಿ 6 ರಿಂದ 7 ಜನ ಭಾಗಿಯಾಗಿರುವ ಶಂಕೆ ಇದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತಸಿಕ್ತವಾಗಿ ಬಿದ್ದಿದ್ದ ಖಾದರ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ನನ್ನ ಮಾತು ಕೇಳದೆ ಗಂಡ ರಾತ್ರೋರಾತ್ರಿ 2 ಕೋಟಿ ರೂ. ಕಳೆದುಕೊಂಡಿದ್ದಾರೆ: ನಟಿ ತುಳಸಿ

    ಐಶ್ವರ್ಯ ಫಸ್ಟ್​ನೈಟ್​​ ದಿನ ಮಂಚವೇ ಮುರಿದು ಹೋಗಿತ್ತು; ಮಧುಚಂದ್ರದ ಅಜ್ಞಾತ ಸ್ಟೋರಿ ರಿವೀಲ್…

    ಬಿಳಿ ಅಲ್ಲ, ನೀಲಿ ಅಕ್ಕಿ; ಓ ದೇವರೇ…ರೈಸ್​​ ಬಾತ್​ ಬಣ್ಣ ನೋಡಿ…

    ನನ್ನನ್ನು ಮುಟ್ಟಬೇಡಿ ಎಂದು ನಟನೆ ಮೇಲೆ ರೆಗಿದ್ದ ನಟಿ; ಧಕ್‌ ಧಕ್‌ ಬೆಡಗಿ ಮೈ ನಡುಗಿತ್ತು, ಕೈ ಬೆವರಿತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts