More

    ಸಲಾಂ ಮಾಡದ ಸಿಟ್ಟಿಗೆ ಕಪಾಳಕ್ಕೆ ಹೊಡೆದು, ಕೊಲೆಯಾಗಿ ಹೋದ!

    ಬೆಂಗಳೂರು: ಸಲಾಂ ಮಾಡದೇ ಇದ್ದುದಕ್ಕೆ ಆರಂಭವಾದ ಜಗಳ, ಕೊಲೆಯಲ್ಲಿ ಪರ‌್ಯವಸಾನಗೊಂಡಿದೆ.

    ಸಮೋಸಾ ಖರೀದಿಸಲು ಹೋದಾಗ ರೌಡಿ ಮುಜಾಹಿದ್ದೀನ್ , ಸಲಾಂ ಹೊಡೆಯುವಂತೆ ಬೆದರಿಸಿ ಜಾಫರ್ ಎಂಬಾತನ ಕಪಾಳಕ್ಕೆ ಹೊಡೆದಿದ್ದ. ಇದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ಜಾರ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿ.ಜೆ. ಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಜಾಫರ್ ಎಂಬಾತ ರಮ್ಜಾನ್ ಉಪವಾಸ ಬಿಡುವ ಸಂದರ್ಭದಲ್ಲಿ ಸಮೋಸಾ ಖರೀದಿಸಲು ಶುಕ್ರವಾರ (ಮೇ 15) ಸಂಜೆ ಶಾಂಪುರ ಗೇಟ್ ಸಮೀಪ ಅಂಗಡಿಗೆ ತೆರಳಿದ್ದ. ಸಮೋಸಾ ಖರೀದಿಸುತ್ತಿದ್ದಾಗ ಅಲ್ಲಿಗೆ ಬಂದ ಕಾಡುಗೊಂಡನಹಳ್ಳಿ ಠಾಣೆಯ ರೌಡಿಶೀಟರ್ ಮುಜಾಹಿದ್ದೀನ್, ‘ನಾನು ಯಾರು ಗೊತ್ತಾ? ಈ ಏರಿಯಾ ರೌಡಿ. ನನಗೆ ಸಲಾಂ ಹೊಡೆಯಬೇಕು’ ಎಂದು ಬೆದರಿಸಿದ್ದ.

    ಇದನ್ನೂ ಓದಿರಿ ತಲೆ ಮರೆಸಿಕೊಂಡಿದ್ದ ಕುಖ್ಯಾತ ರೌಡಿ ಉಗುಳಿ ಸಿಕ್ಕಿಬಿದ್ದ!

    ಸಲಾಂ ಹೊಡೆಯಲು ನಿರಾಕರಿಸಿದ್ದಕ್ಕೆ ಏಕಾಏಕಿ ಜಗಳ ತೆಗೆದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಜಗಳ ವಿಕೋಪಕ್ಕೆ ತಿರುಗಿತ್ತು.

    ಈ ವೇಳೆ ರೌಡಿ ಮುಜಾಹಿದ್ದೀನ್ ಆಕ್ರೋಶಗೊಂಡು, ಜಾಫರ್‌ನ ಕಪಾಳಕ್ಕೆ ಹೊಡೆದ. ಜಾಫರ್‌ಗೂ ಸಿಟ್ಟು ಬಂತು. ಅಲ್ಲೇ ತಳ್ಳುಗಾಡಿಯಲ್ಲಿ ಇಟ್ಟಿದ್ದ ಚೂರಿಯನ್ನು ತೆಗೆದುಕೊಂಡು ಬಂದು ಮುಜಾಹಿದ್ದೀನ್ ಮೇಲೆ ಹಲ್ಲೆ ನಡೆಸಿದ. ಮುಜಾಹಿದೀನ್ ಅಲ್ಲೇ ಗಾಯಗೊಂಡು ಮೃತಪಟ್ಟ. ಈ ವಿಷಯವನ್ನು ಜಾಫರ್‌ನೇ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

    ನಗರ ನಕ್ಸಲರು ಮತ್ತು ಜಿಹಾದಿಗಳ ಹಿಂದೆ ಹೋದ ಹಿಂದೂ ಯುವತಿಯ ದುರಂತ ಕಥೆ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts