More

    ತಲೆ ಮರೆಸಿಕೊಂಡಿದ್ದ ಕುಖ್ಯಾತ ರೌಡಿ ಉಗುಳಿ ಸಿಕ್ಕಿಬಿದ್ದ!

    ಹುಬ್ಬಳ್ಳಿ: ಪೊಲೀಸರಿಂದ ತಲೆಮರೆಸಿಕೊಂಡು ಊರುಬಿಟ್ಟಿದ್ದ ಕುಖ್ಯಾತ ರೌಡಿ, ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಕೊಲೆ‌ ಪ್ರಕರಣ ಪ್ರಮುಖ ಆರೋಪಿ ಸಲೀಂ ಬಳ್ಳಾರಿ ಎಂಬಾತ ಇಲ್ಲಿನ ನೇಕಾರ ನಗರದ ಹೋಟೆಲ್​ವೊಂದರಲ್ಲಿ ಊಟಕ್ಕೆಂದು ಬಂದು ತಾನೇ ಸೃಷ್ಟಿಸಿಕೊಂಡ ಅವಾಂತರದಿಂದಾಗಿ ಸಿಕ್ಕಿಬಿದ್ದಿದ್ದಾನೆ.

    ಕಂಠಪೂರ್ತಿ ಕುಡಿದಿದ್ದ ಈತ ಶುಕ್ರವಾರ ತಡ ರಾತ್ರಿ ಊಟಕ್ಕೆಂದು ಹೋಟೆಲ್ ಬಳಿ ಹೋಗಿದ್ದಾನೆ. ಲಾಕ್​ಡೌನ್​ ಹಿನ್ನೆಲೆ ಊಟ ಲಭ್ಯ ಇಲ್ಲ ಎಂದು ಮಾಲೀಕರು ತಿಳಿಸಿದರಾದರೂ ಕುಪಿತಗೊಂಡ ಸಲೀಂ ಬಳ್ಳಾರಿ, ಹೋಟೆಲ್​ಗೆ ಎಂಜಲು ಉಗಿದು ಅಸಭ್ಯವಾಗಿ ವರ್ತಿಸುತ್ತಿದ್ದ. ವಾಂತಿ ಮಾಡಿಕೊಂಡು ಕೂಗಾಡುತ್ತಿದ್ದ. ಈತನ ಹುಚ್ಚಾಟಕ್ಕೆ ಬೇಸತ್ತ ಹೋಟೆಲ್​ ಮಾಲೀಕ ಮತ್ತು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.

    ಇದನ್ನೂ ಓದಿ ಹೋಟೆಲ್​ಗೆ ಕನ್ನ ಹಾಕಿದವರು ಹಸಿವನ್ನಷ್ಟೇ ತೀರಿಸಿಕೊಂಡರು…!

    ಸಾರ್ವಜನಿಕ ಸ್ಥಳದಲ್ಲಿ ‌ಎಂಜಲು ಉಗಿಯುತ್ತಿದ್ದವನನ್ನು ವಶಕ್ಕೆ ಪಡೆಯಲೆಂದು ಸ್ಥಳಕ್ಕೆ ಬಂದ ಪೊಲೀಸರಿಗೆ ಆ ವ್ಯಕ್ತಿ ಸುಪಾರಿ ಕಿಲ್ಲರ್ ಸಲೀಂ ಬಳ್ಳಾರಿ ಎಂಬುದು ಗೊತ್ತಾಗುತ್ತದೆ. ಈತನ ಮೇಲೆ ಹಲವು ಪ್ರಕರಣಗಳಿದ್ದು, ಪೊಲೀಸರಿಂದ ತಲೆಮರೆಸಿಕೊಂಡು ನೇಕಾರ ನಗರದಲ್ಲಿ ಮನೆ ಮಾಡಿಕೊಂಡಿದ್ದ. ಕುಡಿದ ಅಮಲಿನಲ್ಲಿ ಊಟ, ತಿಂಡಿ ಕೊಡಿ ಎಂದು ಹೋಟೆಲ್​ಗಳ ಬಳಿ ಹೋಗಿ ಕೇಳುತ್ತಿದ್ದ. ಲಾಕ್​ಡೌನ್​ ಹಿನ್ನೆಲೆ ಈಗ ಊಟ ಲಭ್ಯವಿಲ್ಲ ಎಂದಾಗ ರೊಚ್ಚಿಗೆದ್ದು ಎಂಜಲು ಉಗಿದು ಬಯ್ಯುತ್ತಿದ್ದ. ಸ್ಥಳಕ್ಕೆ ಬಂದಿದ್ದ ಕಸಬಾಪೇಟೆ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆದೊಯ್ದರು.

    ಇದನ್ನೂ ಓದಿ ಮಹಿಳೆ ಹೊತ್ತೊಯ್ದು ಅರೆಬರೆ ತಿಂದು ಬೀಸಾಡಿದ ಚಿರತೆ: ರುಂಡ-ಮುಂಡ ಬೇರೆ ಬೇರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts