More

    ಗೃಹಿಣಿಯ ಉಸಿರುಗಟ್ಟಿಸಿ ಕೊಲೆ

    ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಮೀಪ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಗೃಹಿಣಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
    ಬೆಟ್ಟದಾಸನಪುರದ ಸಾಯಿ ಶಕ್ತಿ ಬಡಾವಣೆ ಗಂಗಾ ಬ್ಲಾಕ್ ನಿವಾಸಿ ನೀಲಂ(30) ಮೃತ ಗೃಹಿಣಿ. ಉತ್ತರ ಪ್ರದೇಶ ಮೂಲದ ಪ್ರಜುಂ ಮತ್ತು ನೀಲಂ ದಂಪತಿ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, 7 ವರ್ಷದ ಮಗನ ಜತೆಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಜತೆಗೆ ನೀಲಂ ಸಹೋದರ ಪಂಕಜ್ ಸಹ ಆಶ್ರಯ ಪಡೆದಿದ್ದ. ಹಾರ್ಡ್‌ವೇರ್ ಅಂಗಡಿಯಲ್ಲಿ ಪತಿ ಕೆಲಸಕ್ಕೆ ಹೋಗುತ್ತಿದ್ದು, ಪುತ್ರ ಮನೆ ಸಮೀಪದ ಶಾಲೆಗೆ ಹೋಗುತ್ತಿದ್ದ. ನೀಲಂ, ಗೃಹಿಣಿಯಾಗಿದ್ದರು.

    ಗುರುವಾರ ಎಂದಿನಂತೆ ಪತಿ ಕೆಲಸಕ್ಕೆ ಹೋಗಿದ್ದು, ಪುತ್ರ ಶಾಲೆಗೆ ಹೋಗಿದ್ದ. ಪಂಕಜ್ ಕೆಲಸ ನಿಮಿಕ್ತ ಹೊರಗೆ ಹೋಗಿದ್ದ. ಮಧ್ಯಾಹ್ನ 12.30ರಲ್ಲಿ ತರಗತಿ ಮುಗಿಸಿಕೊಂಡು ಪುತ್ರ ಮನೆಗೆ ಬಂದಾಗ ಬಾಗಿಲು ಓಪನ್ ಆಗಿತ್ತು. ಬೆಡ್ ಮೇಲೆ ನೀಲಂ ಮಲಗಿದ್ದಳು. ಎಚ್ಚರಗೊಳಿಸಲು ಪ್ರಯತ್ನಿಸಿದ ಪುತ್ರ, ಕೊನೆಗೆ ತಾಯಿ ಮೊಬೈಲ್‌ನಿಂದ ತಂದೆ ಕಾಲ್ ಮಾಡಿ ವಿಷಯ ತಿಳಿಸಿದ್ದ. ಗಾಬರಿಗೊಂಡ ಪತಿ, ಮನೆ ಸಮೀಪದಲ್ಲಿ ಇದ್ದ ಪಂಕಜ್‌ಗೆ ಕಾಲ್ ಮಾಡಿ ಮನೆ ಹತ್ತಿರ ಹೋಗುವಂತೆ ಸೂಚಿಸಿದ್ದ. ಮನೆಗೆ ಬಂದು ಪಂಕಜ್ ನೋಡಿದಾಗ ನೀಲಂ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ.

    ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮತ್ತು ವೈಟ್‌ಫೀಲ್ಡ್ ಡಿಸಿಪಿ ಸಿ.ಕೆ. ಬಾಬಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಶ್ವಾನದಳ ಮತ್ತು ಎ್ಎಸ್‌ಎಲ್ ತಂಡ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಸುತ್ತಮುತ್ತ ಸಿಸಿ ಕ್ಯಾಮರಾ ಮತ್ತು ಮೊಬೈಲ್ ಕರೆಗಳ ಮಾಹಿತಿ ಕಲೆ ಹಾಕಿ ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

    ಪ್ರಾಥಮಿಕ ಮಾಹಿತಿ ಪ್ರಕಾರ ಪರಿಚಿತ ವ್ಯಕ್ತಿಗಳೇ ಒಳಗೆ ಹೋಗಿ ನೀಲಂನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಅನುಮಾನ ವ್ಯಕ್ತವಾಗಿದೆ. ಲಾಭಕ್ಕಾಗಿ ಕೊಲೆ ನಡೆದಿಲ್ಲ. ವೈಯಕ್ತಿಕ ಕಾರಣಕ್ಕೆ ಕೃತ್ಯ ನಡೆದಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts