More

    ಇಂದು ಗಣೇಶ್​, ಯೋಗರಾಜ್​ ಭಟ್​ ಹುಟ್ಟುಹಬ್ಬವಂತೆ …

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್​ ಹುಟ್ಟುಹಾಕಿದ ‘ಮುಂಗಾರು ಮಳೆ’ ಚಿತ್ರ ಇಂದಿಗೆ 14 ವರ್ಷ ಪೂರೈಸಿ, 15ಕ್ಕೆ ಕಾಲಿಟ್ಟಿದೆ. 2006ರ ಡಿಸೆಂಬರ್​ 29ರಂದು ಈ ಚಿತ್ರ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಈ ಚಿತ್ರವು ನಿರ್ದೇಶಕ ಯೋಗರಾಜ್​ ಭಟ್​ ಮತ್ತು ನಟ ಗಣೇಶ್​ ಅವರ ವೃತ್ತಿಬದುಕಿಗೆ ದೊಡ್ಡ ತಿರುವು ನೀಡಿದ್ದಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥೆಗಳ ಹೊಸ ಟ್ರೆಂಡ್​ ಹುಟ್ಟುಹಾಕಿತ್ತು.

    ಇದನ್ನೂ ಓದಿ: 2024ಕ್ಕೆ ಆಂಧ್ರದ ಮುಖ್ಯಮಂತ್ರಿ ಆಗ್ತಾರಾ ಜ್ಯೂ ಎನ್​ಟಿಆರ್​?

    ಇದೀಗ ಚಿತ್ರವು 14 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಯೋಗರಾಜ್​ ಭಟ್​ ಮತ್ತು ಗಣೇಶ್ ಇಬ್ಬರೂ ನೆನಪಿಸಿಕೊಂಡಿದ್ದಾರೆ. ಚಿತ್ರಕ್ಕಷ್ಟೇ ಅಲ್ಲ, ತಮ್ಮಿಬ್ಬರಿಗೂ ಒಂದು ರೀತಿಯ ಹುಟ್ಟುಹಬ್ಬ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಮುಂಗಾರು ಮಳೆ, ಜನತೆ ಮತ್ತು ಜೀವನಕ್ಕೆ ಜೈಕಾರ ಹಾಕಿದ್ದಾರೆ.

    ಇದನ್ನೂ ಓದಿ: ಸಾಮಾನ್ಯ ಮನುಷ್ಯ ಎಷ್ಟು ಲಂಚ ಕೊಡಬೇಕು ಗೊತ್ತಾ? ಕಮಲ್​ ಹಾಸನ್​ ಹೇಳ್ತಾರೆ ಕೇಳಿ …

    ಪತ್ರ ಬರೆದು ಟ್ವೀಟ್​ ಮಾಡಿರುವ ಭಟ್​ ಮತ್ತು ಗಣೇಶ್, ‘ನಾವಿಬ್ಬರೂ, ಜೊತೆಗೆ ಇಡೀ ತಂದ ಅದೇ ತಾನೇ ಕಣ್ತೆರೆದ ಶಿಶುಗಳಂತೆ ‘ಮುಂಗಾರು ಮಳೆ’ ಚಿತ್ರ ಮಾಡಿ, ಜನತೆಗೆ ಅರ್ಪಿಸಿ ಇಂದಿಗೆ 14 ವರ್ಷಗಳಾಗಿವೆ. ಚಿತ್ರಕ್ಕಷ್ಟೇ ಅಲ್ಲದೇ, ನಮ್ಮಿಬ್ಬರಿಗೂ ಇದು ಒಂದು ರೀತಿಯ ಹುಟ್ಟುಹಬ್ಬ … ಕೆಲಸ ಕಲಿಸಿದ, ಬದುಕು ಕೊಟ್ಟ, ಪ್ರೀತಿ ತಿಳಿಸಿದ, ನಾಡು ನಲಿಸಿದ ಈ ಪ್ರೇಕ್ಷಕರ ಆಸ್ತಿಯಂತಹ ಮಹಾನ್​ ಚಿತ್ರಕ್ಕೆ ನಮ್ಮಿಬ್ಬರ ದೀರ್ಘದಂಡ ನಮನಗಳು. ಜೈ ಮುಂಗಾರು ಮಳೆ … ಜೈ ಜನತೆ … ಜೈ ಜೀವನ … – ನಿಮ್ಮವರು ಗಣಪ – ಯೋಗ್ರಾಜ್​ ಭಟ್​’ ಎಂದು ಹೇಳಿಕೊಂಡಿದ್ದಾರೆ.

    ರೈ ಮಕ್ಕಳ ಅನುಮತಿ ಇಲ್ಲದೆ ‘ಎಂಆರ್’ ಮುಂದುವರೆಸುವಂತಿಲ್ಲ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts