More

    ಫೆಬ್ರವರಿಯಲ್ಲಿ ಸುಶಾಂತ್​ ಕುಟುಂಬದಿಂದ ಯಾವುದೇ ದೂರು ದಾಖಲಾಗಿಲ್ಲ; ಮುಂಬೈ ಪೊಲೀಸ್​

    ಸುಶಾಂತ್​ ಸಿಂಗ್​ ಸಾವಿನ ತನಿಖೆ ಮಗ್ಗಲು ಬದಲಿಸುತ್ತಿದ್ದಂತೆ, ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ರಿಯಾ ವಿರುದ್ಧ ಪಾಟ್ನಾದ ರಾಜೀವ್​ ನಗರ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದ ಸುಶಾಂತ್​ ತಂದೆ ಕೆಕೆ ಸಿಂಗ್​, ಕಳೆದ ನಾಲ್ಕು ತಿಂಗಳ ಹಿಂದೆಯೇ ಸುಶಾಂತ್​ ಜೀವಕ್ಕೆ ಆಪತ್ತಿದೆ ಎಂದು ಮುಂಬೈನಲ್ಲಿ ದೂರು ನೀಡಿದ್ದರು. ಇದೀಗ ಅವರ ಆ ಹೇಳಿಕೆಯನ್ನು ಬಾಂದ್ರಾ ಪೊಲೀಸರು ತಳ್ಳಿ ಹಾಕಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಒಡೆತನದ ಫಾರ್ಮ್​ಹೌಸ್​ನಲ್ಲಿ ರಿಯಾ ಕುಟುಂಬದಿಂದ ಹೋಮ- ಹವನ!

    ಫೆಬ್ರವರಿ 25ರಂದು ಕೆಕೆ ಸಿಂಗ್​, ಸುಶಾಂತ್​ ಮೊದಲಿನಂತಿಲ್ಲ, ಅವನ ಜೀವಕ್ಕೆ ಆಪತ್ತು ಬಂದೊದಗಿದೆ ಎಂದು ಬಾಂದ್ರಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹೇಳಿಕೆಯನ್ನು ಪರಿಶೀಲಿಸದೇ ಸುಶಾಂತ್​ ಕುಟುಂಬದಿಂದ ಯಾವುದೇ ದೂರನ್ನು ಸ್ವೀಕರಿಸಿಲ್ಲ ಎಂದು ಹೇಳಿದೆ.

    ಇದನ್ನೂ ಓದಿ: ಚಿರು ಸಿನಿಮಾಗಳ ಡಬ್ಬಿಂಗ್​ನಲ್ಲಿ ಧ್ರುವ ಸರ್ಜಾ ಭಾಗಿಯಾಗುವುದು ಯಾವಾಗಿನಿಂದ?

    ಈ ಸಂಬಂಧ ರಜಪೂತ್​ ಕುಟುಂಬದ ಐಪಿಎಸ್​ ಅಧಿಕಾರಿ ಓ.ಪಿ ಸಿಂಗ್​ ಸಹ ದೂರು ನೀಡಿರುವ ಬಗ್ಗೆ ದಾಖಲಾಗಿಗಿರುವ ಒಂದಷ್ಟು ವಾಟ್ಸಾಪ್​ ಮೆಸೆಜ್​ಗಳನ್ನು ಮುಂಬೈ ಪೊಲೀಸರಿಗೆ ರವಾನಿಸಿದ್ದಾರೆ. ಇದರ ಮೇಲೂ, ನಮಗೆ ಸುಶಾಂತ್​ಗೆ ಸಂಬಂಧಿಸಿದಂತೆ ಯಾವುದೇ ಲಿಖಿತ ದೂರು ಫೆಬ್ರವರಿ 15ರಂದು ದಾಖಲಾಗಿಲ್ಲ. (ಏಜೆನ್ಸೀಸ್​)

    ಸುಶಾಂತ್​ ಸತ್ತಿದ್ದು ನಿಮ್ಮಂತವರಿಂದಲೇ … ಕರೀನಾಗೆ ಕಂಗನಾ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts