More

    ಸುಶಾಂತ್​ ಸತ್ತಿದ್ದು ನಿಮ್ಮಂತವರಿಂದಲೇ … ಕರೀನಾಗೆ ಕಂಗನಾ ತಿರುಗೇಟು

    ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ ನೆಪೋಟಿಸಂ (ಸ್ವಜನಪಕ್ಷಪಾತ) ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಆ ಬಿಸಿ ಕರೀನಾ ಕಪೂರ್​ಗೂ ತಟ್ಟಿದೆ.

    ಇತ್ತೀಚೆಗೆ ಒಂದು ಸಂದರ್ಶನವೊಂದರಲ್ಲಿ ಕರೀನಾ, ನೆಪೋಟಿಸಂ ಬಗ್ಗೆ ಮಾತನಾಡಿದ್ದರು. ‘ಚಿತ್ರರಂಗದಲ್ಲಿ ನೆಪೋಟಿಸಂನಿಂದ ಮಾತ್ರ 20 ವರ್ಷಗಳ ಕಾಲ ಉಳಿಯೋಕೆ ಸಾಧ್ಯವೇ ಇಲ್ಲ. ಇಷ್ಟು ದೀರ್ಘ ಕಾಲ ಇಲ್ಲಿ ಬಾಳಬೇಕು ಎಂದರೆ ಪ್ರತಿಭೆ ಮುಖ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಒಡೆತನದ ಫಾರ್ಮ್​ಹೌಸ್​ನಲ್ಲಿ ರಿಯಾ ಕುಟುಂಬದಿಂದ ಹೋಮ- ಹವನ!

    ಇದನ್ನು ಓದಿ ಕಂಗನಾಗೆ ಸಿಕ್ಕಾಪಟ್ಟೆ ಸಿಟ್ಟು ಬಂದುಬಿಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಜನಪ್ರಿಯತೆ ಮತ್ತು ಯಶಸ್ಸು ಸಿಕ್ಕ ನಂತರ ನೀವೆಲ್ಲಾ ಬಾಲಿವುಡ್​ನ ಬುಲ್ಲಿವುಡ್​ನ್ನಾಗಿ ಮಾಡುತ್ತೀರಾ ಎಂದು ಜನರಿಗೆ ಗೊತ್ತಿರಲಿಲ್ಲ.

    ತಕ್ಷಣವೇ ಟ್ವಿಟರ್​ನಲ್ಲಿ ಕರೀನಾಗೆ ಆರು ಪ್ರಶ್ನೆಗಳನ್ನು ಕಂಗನಾ ಕೇಳಿದ್ದಾರೆ. ಇದಕ್ಕೆ ಉತ್ತರಿಸುವುದಕ್ಕೆ ಹೇಳಿದ್ದಾರೆ.

    1) ನಿಮ್ಮ ಬೆಸ್ಟ್​ ಫ್ರೆಂಡ್​, ಕಂಗನಾಗೆ ಚಿತ್ರರಂಗ ಬಿಟ್ಟು ಹೋಗು ಅಂತ ಹೇಳಿದ್ದ್ಯಾಕೆ?
    2) ಸುಶಾಂತ್​ಗೆ ದೊಡ್ಡ ದೊಡ್ಡ ಪ್ರೊಡಕ್ಷನ್​ ಹೌಸ್​ಗಳ ಚಿತ್ರಗಳಲ್ಲಿ ಯಾಕೆ ಕೆಲಸ ಸಿಗುತ್ತಿರಲಿಲ್ಲ.
    3) ಕಂಗನಾಗೆ ಮಾಟಗಾತಿ ಮತ್ತು ಸುಶಾಂತ್​ಗೆ ರೇಪಿಸ್ಟ್​ ಎಂದು ಪಟ್ಟ ಕಟ್ಟಿದ್ದ್ಯಾಕೆ?
    4) ಕಂಗನಾ ಮತ್ತು ಸುಶಾಂತ್​ ಇಬ್ಬರಿಗೂ ಬೈಪೋಲಾರ್​ನಂತಹ ಮಾನಸಿಕ ಖಾಯಿಲೆ ಇದೆ ಎಂದು ಬಿಂಬಿಸುತ್ತಿರುವುದ್ಯಾಕೆ?
    5) ನಿಮ್ಮ ತರಹವೇ ನೆಪೋಟಿಂನಿಂದ ಬೆಳೆದ ನಟನೊಬ್ಬ, ನಟಿಯೊಬ್ಬಳಿಗೆ ಮದುವೆಯಾಗುವುದಾಗಿ ಪ್ರಾಮಿಸ್​ ಮಾಡಿ, ಕೊನೆಗೆ ಅವಳ ಮೇಲೆ ಕ್ರಿಮಿನಲ್​ ಕೇಸ್​ ಹಾಕಿದ್ದು ಯಾಕೆ?
    6) ಕಂಗನಾ ಮತ್ತು ಸುಶಾಂತ್​ ಇಬ್ಬರನ್ನೂ ಚಿತ್ರರಂಗ ದೂರವಿಟ್ಟಿದ್ದು ಯಾಕೆ? ಇಬ್ಬರಿಗೂ ಯಾವುದೇ ಪಾರ್ಟಿಗೆ ಆಹ್ವಾನ ಇಲ್ಲದಿರುವ ಜತೆಗೆ ಅವರ ಹುಟ್ಟುಹಬ್ಬಕ್ಕೆ ಯಾರೊಬ್ಬರೂ ವಿಶ್​ ಮಾಡುವುದಿಲ್ಲವೇಕೆ?

    ಇದನ್ನೂ ಓದಿ: ಚಿರು ಸಿನಿಮಾಗಳ ಡಬ್ಬಿಂಗ್​ನಲ್ಲಿ ಧ್ರುವ ಸರ್ಜಾ ಭಾಗಿಯಾಗುವುದು ಯಾವಾಗಿನಿಂದ?

    ಹೀಗೆ ಆರು ಪ್ರಶ್ನೆಗಳನ್ನು ಹಾಕಿರುವ ಕಂಗನಾ ಅವರ ತಂಡ, ಸುಶಾಂತ್​ ಸತ್ತಿದ್ದು ನಿಮ್ಮಂತವರಿಂದಲೇ ಎಂದು ಹೇಳಿದೆ. ‘ನೆಪೋಟಿಸಂನಿಂದಾಗಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಪ್ರತಿಭೆಗಳೇ, ವಿಷಯವನ್ನು ಬದಲಾಯಿಸುವುದಕ್ಕೆ ಪ್ರಯತ್ನಿಸಬೇಡಿ. ನಮಗೆ ನಿಮ್ಮ ಯಶಸ್ಸು ಮತ್ತು ಜನಪ್ರಿಯತೆಯ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ನಮ್ಮಂತವರನ್ನು ನೀವು ನೋಡುವ ರೀತಿಯಲ್ಲಿ. ಸುಶಾಂತ್​ ಸತ್ತಿದ್ದು ನಿಮ್ಮಂತವರ ಕಿರುಕುಳದಿಂದಾಗಿ. ತಮಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂದು ಸುಶಾಂತ್ ಹೇಳಿಕೊಂಡಿದ್ದರು. ಜತೆಗೆ ತಮ್ಮನ್ನು ರೇಪಿಸ್ಟ್​ ಎಂದು ಕರೆದಿದ್ದರ ಬಗ್ಗೆ ಬಹಳ ಬೇಸರಿಸಿಕೊಂಡಿದ್ದರು. ಈ ವಿಷಯದ ಬಗ್ಗೆ ಮೊದಲು ಮಾತಾಡೋಣ. ಅದು ಬಿಟ್ಟು ವಿಷಯ ಬದಲಾಯಿಸುವ ಪ್ರಯತ್ನ ಮಾಡಬೇಡಿ’ ಎಂದು ಹೇಳಿದ್ದಾರೆ.

    ತಾಪ್ಸಿಗೆ ಹಾರೈಸಿದ್ದಕ್ಕೆ ಹೃತಿಕ್​ ಕಾಲೆಳೆದ ಕಂಗನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts