ಬಾಗಲಕೋಟೆ: ಕರೊನಾ ಸೋಂಕು ಅನೇಕರನ್ನು ಬಲಿ ತೆಗೆದುಕೊಂಡಿದೆ. ಎರಡನೇ ಅಲೆಯಲ್ಲಂತೂ ಮಧ್ಯಮ ವಯಸ್ಸಿನವರನ್ನೇ ಹೆಚ್ಚಾಗಿ ಬಲಿ ತೆಗೆದುಕೊಳ್ಳಲಾರಂಭಿಸಿದೆ. ಅದೇ ರೀತಿ ಇದೀಗ ಬಾಗಲಕೋಟೆಯ ಮುಧೋಳ ನಗರಸಭೆ ಅಧ್ಯಕ್ಷನೂ ಕೂಡ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾನೆ.
ಮುಧೋಳ ನಗರಸಭೆ ಅಧ್ಯಕ್ಷ ಸಂಜು(ಸಿದ್ದನಾಥ) ಮಾನೆ ಮೃತ ದುರ್ದೈವಿ. 32 ವರ್ಷದ ಸಂಜುಗೆ ಕೆಲ ದಿನಗಳ ಹಿಂದೆ ಸೋಂಕು ದೃಢವಾಗಿತ್ತು. ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಆತ ಭಾನುವಾರದಂದು ಕೊನೆಯುಸಿರೆಳದಿದ್ದಾನೆ.
ಸಂಜು ನಗರ ಸಭೆ ಅಧ್ಯಕ್ಷ ಎನ್ನುವುದರ ಜತೆ ರಾಷ್ಟ್ರಮಟ್ಟದ ಕುಸ್ತಿಪಟು ಕೂಡ ಆಗಿದ್ದ. ಆದರೆ ಆ ಕುಸ್ತಿಪಟುವನ್ನೇ ಮಹಾಮಾರಿ ಬಲಿ ತೆಗೆದುಕೊಂಡುಬಿಟ್ಟಿದೆ. ಸದೃಢ ದೇಹ ಅಥವಾ ಆರೋಗ್ಯವಿದ್ದರೆ ಸೋಂಕು ತಗುಲುವುದಿಲ್ಲ ಎನ್ನುವುದು ಮತ್ತೊಮ್ಮೆ ಸುಳ್ಳಾಗಿದೆ.
ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?
ನರ್ಸ್ ಕೆನ್ನೆಗೆ ಹೊಡೆದ ವೈರಲ್ ವಿಡಿಯೋದಲ್ಲಿದ್ದ ಡಾಕ್ಟರ್ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?
ನಿಂತಿದ್ದ ಆ್ಯಂಬುಲೆನ್ಸ್ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!
ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ