More

    ಉನ್ನತ ಗುರಿ ಸಾಧನೆಗೆ ಮುಂದಾಗಿ

    ಮುದ್ದೇಬಿಹಾಳ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಮಾಡುವ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವತ್ತ ಕಠಿಣ ಪ್ರಯತ್ನ ಮಾಡಬೇಕು ಎಂದು ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನ ಭಾರತಿ ಶ್ರೀಗಳು ಹೇಳಿದರು.
    ತಾಲೂಕಿನ ತಂಗಡಗಿಯ ಹಡಪದ ಅಪ್ಪಣ್ಣ ಸಂಸ್ಥಾನ ಮಠದಲ್ಲಿ ಬಸವ ಪ್ರತಿಷ್ಠಾನ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುನಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಗ್ರಾಮೀಣ ಪ್ರದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎಂಬುದಕ್ಕೆ ಇಂದು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳೇ ನಿದರ್ಶನವಾಗಿದ್ದಾರೆ ಎಂದರು.
    ಧನ್ನೂರ ಮುರಾರ್ಜಿ ದೇಸಾಯಿ ಶಾಲೆಯ ಶಿಕ್ಷಕ ಎಸ್.ಕೆ. ಹಡಲಗೇರಿ ಮಾತನಾಡಿ, ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಬಸವ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಸಿದ್ದಣ್ಣ ಹೊಳಿ, ರಮೇಶ ಲಿಂಗದಳ್ಳಿ ಮಾತನಾಡಿದರು. ವಿದ್ಯಾರ್ಥಿಗಳಾದ ಪಲ್ಲವಿ ಇಸ್ಲಾಂಪೂರ, ಸೌಮ್ಯಾ ಹುಂಡೇಕಾರ, ಕವಿತಾ ಹಂಗರಗಿ, ಶಶಿಧರ ಹೊಳಿ ಅವರನ್ನು ಸನ್ಮಾನಿಸಲಾಯಿತು.
    ತಾಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಮರೋಳ, ಸ್ನೇಹಸಿರಿ ಬಳಗದ ಸಂಚಾಲಕ ಬಸವರಾಜ ನಿಡಗುಂದಿ, ಬಸವರಾಜ ಇಸ್ಲಾಂಪೂರ, ಸಮಿತಿ ಪ್ರಮುಖರಾದ ಮಹಾಂತಪ್ಪ ಹುಲ್ಲಳ್ಳಿ, ಚರಲಿಂಗಪ್ಪ ಬಿದರಕುಂದಿ, ಬಸವರಾಜ ಸಜ್ಜನ, ಸಂಗಣ್ಣ ದೇವರಮನಿ, ಅನ್ನದಾಸ್ವಾಮಿ ತೆಗ್ಗಿನಮಠ, ಮುರುಗೇಶ ಹುಂಡೇಕಾರ, ಚಂದ್ರು ಹಡಪದ, ಹಣಮಂತ್ರಾಯ ಹೊಳಿ, ಅಶೋಕ ತಂಗಡಗಿ, ಎಂ.ಪಿ. ಹೊಳಿ, ಜಿ.ಜಿ. ಮೋಟಗಿ, ಬಸವರಾಜ ಗಡೇದ, ಶರಣಪ್ಪ ಹೊಳಿ, ಬಸವರಾಜ ಡೊಂಗರಗಾವಿ, ಸುಭಾಷ ಹುದ್ದಾರ, ಶಿವಪುತ್ರ ಶಾಸೀ ಇದ್ದರು. ಎಸ್.ಎಸ್. ಪೂಜಾರಿ ಸ್ವಾಗತಿಸಿದರು. ಸಂಗಯ್ಯ ಗಣಾಚಾರಿ ನಿರೂಪಿಸಿದರು. ಸಿದ್ದಣ್ಣ ಹೊಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts