ನವದೆಹಲಿ: ತಾನು ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ಕೊಟ್ಟಿದ್ದ ಮಹಿಳೆಯಿಂದಲೇ ರಕ್ಷಾಬಂಧನದ ದಿನ ರಾಖಿ ಕಟ್ಟಿಸಿಕೊಳ್ಳುವಂತೆ ಯುವಕನೊಬ್ಬನಿಗೆ ಮಧ್ಯಪ್ರದೇಶ ಹೈಕೋರ್ಟ್ ಶಿಕ್ಷೆ ನೀಡಿದೆ. ಅಲ್ಲದೆ, ಸಹೋದರಿಯರಿಗೆ ಕೊಡುವಂತೆ ಈ ಸಹೋದರಿಗೆ 11 ಸಾವಿರ ರೂ. ನಗದನ್ನು ಉಡುಗೊರೆಯಾಗಿ ಕೊಡುವಂತೆ ಸೂಚಿಸಿದೆ.
ಮಧ್ಯಪ್ರದೇಶ ಹೈಕೋರ್ಟ್ನ ನ್ಯಾಯಮೂರ್ತಿ ರೋಹಿತ್ ಆರ್ಯ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದೆ. ಜು.30ರಂದು ಈ ಆದೇಶ ನೀಡಿದ್ದ ನ್ಯಾಯಪೀಠ, ವಿಕ್ರಮ್ ಭಾಗ್ರಿ ಎಂಬಾತನಿಗೆ ಷರತ್ತುಬದ್ಧ ಜಾಮೀನು ಕೂಡ ಕೊಟ್ಟಿತ್ತು.
ವಿವಾಹಿತನಾಗಿರುವ ವಿಕ್ರಮ್ ಭಾಗ್ರಿ ತನ್ನ ಪತ್ನಿಯೊಂದಿಗೆ ದೂರುದಾರರ ಮನೆಗೆ ರಕ್ಷಾಬಂಧನದ ದಿನ ಭೇಟಿ ಕೊಡಬೇಕು. ಬೆಳಗ್ಗೆ 11 ಗಂಟೆಗೆ ಒಂದು ಬಾಕ್ಸ್ ಸಿಹಿತಿಂಡಿಗಳನ್ನು ಕೊಂಡೊಯ್ದು, ರಾಖಿ ಕಟ್ಟುವಂತೆ ಸಹೋದರಿಗೆ ಮನವಿ ಮಾಡಬೇಕು. ಜೀವನದುದ್ದಕ್ಕೂ ಸಂಕಷ್ಟ ಕಾಲದಲ್ಲಿ ಅಗತ್ಯ ನೆರವು ನೀಡುವುದಾಗಿ ಆ ಸಹೋದರಿಗೆ ಭರವಸೆ ನೀಡಬೇಕು. ಬಳಿಕ ರಾಖಿ ಕಟ್ಟಿಸಿಕೊಂಡು, 11 ಸಾವಿರ ರೂ. ನಗದು ಉಡುಗೊರೆ ಕೊಟ್ಟು ಬರಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ಹೊಲ ಗದ್ದೆಗಳಿಗೆ ತೆರಳುತ್ತಿರುವ ಕರೊನಾ ಸೋಂಕಿತರ ದ್ವಿತೀಯ ಸಂಪರ್ಕಿತರು
ಅಲ್ಲದೆ, ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯ ಪುತ್ರನಿಗೆ ಬಟ್ಟೆ ಮತ್ತು ಸಿಹಿ ತಿಂಡಿಗಳನ್ನು ಖರೀದಿಸಲು 5 ಸಾವಿರ ರೂಪಾಯಿಗಳನ್ನು ಕೊಡಬೇಕು ಎಂದು ಸೂಚಿಸಿ, 50 ಸಾವಿರ ರೂ. ಮೊತ್ತದ ವೈಯಕ್ತಿಕ ಜಾಮೀನಿನ ಜತೆಗೆ ಇಷ್ಟೇ ಮೊತ್ತದ ಸಾಲ್ವೆಂಟ್ ಶ್ಯೂರಿಟಿಯನ್ನೂ ಕೊಡಬೇಕು ಎಂದು ಸೂಚಿಸಿ ವಿಕ್ರಮ್ ಭಾಗ್ರಿಗೆ ಜಾಮೀನು ಮಂಜೂರು ಮಾಡಿತ್ತು.
ವಿಕ್ರಮ್ ಭಾಗ್ರಿ ಉಜ್ಜೈನ್ನಲ್ಲಿರುವ 30 ವರ್ಷದ ಮಹಿಳೆಯ ಮನೆಗೆ ಏ.20ರಂದು ನುಗ್ಗಿ, ಅವರ ಶೀಲಭಂಗ ಮಾಡುವ ಉದ್ದೇಶದಿಂದ ಮೈಕೈ ಮುಟ್ಟಿ ಕಿರುಕುಳ ಕೊಟ್ಟಿದ್ದ ಎನ್ನಲಾಗಿದೆ.
ನನ್ನ ಗೆಳೆಯರೊಂದಿಗೆ ಸೆಕ್ಸ್ ಮಾಡು ಎಂದು ಹೆಂಡತಿಗೆ ಕಿರುಕುಳ ನೀಡಿದ್ದೇಕೆ?