More

    ಮಕ್ಕಳಿಬ್ಬರ ಪ್ರಾಣ ಉಳಿಸಿ ಸಾವಿಗೀಡಾದ ತಾಯಿ!; ಆಗಿದ್ದೇನು?

    ತುಮಕೂರು: ಒಬ್ಬರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹೋಗಿ ಇಬ್ಬರು-ಮೂವರೂ ಸಾವಿಗೀಡಾದ ಪ್ರಕರಣ ನಿನ್ನೆ ಹಾಗೂ ಮೊನ್ನೆ ನಡೆದಿದೆ. ಇಂದು ಕೂಡ ಅಂಥದ್ದೇ ಪ್ರಕರಣ ನಡೆದಿದ್ದರೂ ಇವತ್ತು ಮತ್ತೊಂದು ರೀತಿಯ ದುರಂತ ಸಂಭವಿಸಿದೆ.

    ಶಿರಾ ತಾಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ಈ ದುರಂತ ನಡೆದಿದೆ. ಮಕ್ಕಳಿಬ್ಬರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹೋದ ತಾಯಿ, ಅವರಿಬ್ಬರನ್ನು ರಕ್ಷಿಸಿದರೂ ತಾವು ಸಾವಿಗೀಡಾಗಿದ್ದಾರೆ. ಮನು (30) ಸಾವಿಗೀಡಾದ ತಾಯಿ. ಇವರು ಬಟ್ಟೆ ಒಗೆಯಲೆಂದು ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ಇದನ್ನೂ ಓದಿ: ಒಂದು ಪ್ರಾಣದ ರಕ್ಷಣೆಯ ಯತ್ನದಲ್ಲಿ ಹೋಯ್ತು ಎರಡು ಜೀವ!

    ಕೆರೆ ದಡದಲ್ಲಿ ಆಟವಾಡುತ್ತಿದ್ದ ಮಕ್ಕಳು ನೀರಿಗಿಳಿದು ಮುಳುಗಲಾರಂಭಿಸಿದ್ದನ್ನು ಗಮನಿಸಿದ ತಾಯಿ ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಮಕ್ಕಳಿಬ್ಬರನ್ನು ರಕ್ಷಣೆ ಮಾಡಿದ ಈಕೆ ಈಜು ಬರದ ಕಾರಣಕ್ಕೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. ಮಕ್ಕಳಿಬ್ಬರಿಗೆ ಶಿರಾ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ತಮ್ಮನನ್ನು ಉಳಿಸಲು ಹೋದ ಅಕ್ಕ, ಅವರಿಬ್ಬರನ್ನು ರಕ್ಷಿಸಲು ಹೋದ ಅಮ್ಮ: ಕೊನೆಗೆ ಮೂವರೂ ಬದುಕಲಿಲ್ಲ!; ಆಗಿದ್ದೇನು?

    ನಮ್ಮೂರಲ್ಲಿ ಸರ್ಕಾರಿ ವೈದ್ಯರೇ ಉಳಿಯಲ್ಲ.. ನೋಡಿ ಎಂಥ ಪರಿಸ್ಥಿತಿ!: ಸಿಎಂ ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts