ಕೊಳ್ಳೇಗಾಲ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ಪೋಸ್ಟ್ ತೆರೆದಿದ್ದು, ಪೊಲೀಸರು ಬಸ್ಗಳ ಸಂಚಾರದ ಮೇಲು ನಿಗಾ ವಹಿಸಿದ್ದಾರೆ. ಕೊಳ್ಳೇಗಾಲ ಕ್ಷೇತ್ರದ ದಾಸನಪುರ ಗ್ರಾಮ, ಟಗರಪುರ ಹೊರವಲಯದಲ್ಲಿರುವ ಮೂಗೂರು ಕ್ರಾಸ್, ಉಮ್ಮತ್ತೂರು ಗ್ರಾಮದ ಬಳಿ ಚೆಕ್ಪೊಸ್ಟ್ಗಳನ್ನು ತೆರೆಯಲಾಗಿದೆ. ದಾಖಲೆ ಇಲ್ಲದ ಹಣ ಸಾಗಣೆ, ಮದ್ಯ ಹಾಗೂ ಚುನಾವಣೆಯಲ್ಲಿ ಹಂಚಲು ಸಾಗಿಸುವ ಉಡುಗೊರೆಗಳ ಮೇಲೆ ನಿಗಾ ವಹಿಸಿದ್ದಾರೆ. ಚೆಕ್ಪೋಸ್ಟ್ ದಾಟಿ ಬರುವ ಲಾರಿ, ಕಾರು, ಆಟೋ, ಬಸ್, ಬೈಕ್ ಇನ್ನಿತರ ವಾಹನಗಳ ಬಗ್ಗೆ ಮೇಲೆ ಹದ್ದಿನ ಕಣ್ಣಿಟ್ಟು ಪರಿಶೀಲನೆ ನಡೆಸುತ್ತಿದೆ. ಬಸ್ಗಳ ಮೇಲೂ ನಿಗಾ ವಹಿಸಲಾಗಿದ್ದು. ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲೇ ದಾಸನಪುರ ಚೆಕ್ಪೋಸ್ಟ್ನಲ್ಲಿ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಲಕ್ಷ ರೂ. ಅನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೇ ಚೆಕ್ಪೋಸ್ಟ್ನಲ್ಲಿ ಮದ್ಯ ಸಾಗಣೆ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿ ಮದ್ಯವನ್ನು ಜಪ್ತಿ ಮಾಡಿದ್ದರು.