More

    ಗಮನ ಸೆಳೆಯುತ್ತಿವೆ ಸಖಿಸೌರಭ, ಮಾದರಿ ಮತಗಟ್ಟೆ

    ಗುಂಡ್ಲುಪೇಟೆ : ಲೋಕಸಭಾ ಚುನಾವಣೆಗೆ ಈ ಬಾರಿ ಶಿಂಡನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದೇಗಾಲದಲ್ಲಿ ಸಖಿಸೌರಭ(ಪಿಂಕ್)ಮತಗಟ್ಟೆ ತೆರೆದಿದ್ದರೆ, ಬಂಡೀಪುರ ಕಾಡಂಚಿನ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿಯನಪುರ ಕಾಲನಿಯಲ್ಲಿ ಬುಡಕಟ್ಟು ಜನರಿಗೆ ಮಾದರಿ ಮತಗಟ್ಟೆ ತೆರೆಯಲಾಗಿದೆ.

    ಈ ಬಾರಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಂದೇಗಾಲ, ಅಗತಗೌಡನಹಳ್ಳಿ ಹಾಗೂ ಅಣ್ಣೂರು ಗ್ರಾಮಗಳಲ್ಲಿ ಆಯಾಯ ಗ್ರಾಮಪಂಚಾಯಿತಿಗಳ ನೆರವಿನಿಂದ ಸಖಿಸೌರಭ ಮತಗಟ್ಟೆ ತೆರೆಯಲಾಗಿದೆ. ಇಷ್ಟು ವರ್ಷ ಗಿರಿಜನರನ್ನು ಮತಗಟ್ಟೆಗೆ ಆಕರ್ಷಿಸುವ ಸಲುವಾಗಿ ಮದ್ದೂರು ಕಾಲನಿಯ ಗಿರಿಜನ ಆಶ್ರಮಶಾಲೆಯಲ್ಲಿ ಮಾತ್ರ ಸಿದ್ಧಪಡಿಸುತ್ತಿದ್ದ ಬುಡಕಟ್ಟು ಮತಗಟ್ಟೆಯ ಜತೆಗೆ ಈ ಬಾರಿ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿಯನಪುರ ಕಾಲನಿಯಲ್ಲಿಯೂ ಮಾದರಿ ಮತಗಟ್ಟೆ ತೆರೆಯಲಾಗಿದೆ.

    ಮತಗಟ್ಟೆಯಲ್ಲಿ ಬುಡಕಟ್ಟು ಜನರು ತಯಾರಿಸುವ ಖಾದ್ಯಗಳು ಹಾಗೂ ಉತ್ಪನ್ನಗಳ ಮಾರಾಟ ಮಳಿಗೆಯನ್ನು ತೆರೆಯಲಾಗಿದೆ. ಪ್ರಕೃತಿ ಆರಾಧಕರಾದ ಬುಡಕಟ್ಟು ಜನರನ್ನು ಕಡ್ಡಾಯವಾಗಿ ಮತಗಟ್ಟೆಗೆ ಆಕರ್ಷಿಸುವ ಸಲುವಾಗಿ ಮರದ ಕೆಳಗೆ ಮೂರ್ತಿಯನ್ನಿರಿಸಿ ಮರದ ಸೊಪ್ಪುಗಳಿಂದ ಸಣ್ಣ ದೇವಾಲಯವನ್ನೂ ನಿರ್ಮಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts