ಮೊಳಕಾಲ್ಮೂರು: ಖಾಸಗಿ ಬಸ್ ನಿಲ್ದಾಣದಲ್ಲಿ ನಾಯಕನಹಟ್ಟಿ ತಿಪ್ಪೇಸ್ವಾಮಿ ಭಕ್ತರು ಉಚಿತ ಮಜ್ಜಿಗೆ ವಿತರಣೆ ಕಾರ್ಯ ಆರಂಭಿಸಿದರು.
ತಿಪ್ಪೇಸ್ವಾಮಿ ಜಾತ್ರೆ ದಿನವಾದ ಗುರುವಾರ ಸೇವಾ ಕಾರ್ಯಕ್ಕೆ ಸಿದ್ದಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರಿಂದ ಚಾಲನೆ ಕೊಡಿಸಿದರು.
ಎ.ಎಸ್.ಗೋಪಾಲಕೃಷ್ಣ, ಶ್ಯಾಮಲಾಬಾಯಿ ಅವರು ಈ ಸೇವಾ ಕಾರ್ಯ ಕೈಗೊಂಡಿದ್ದು, ನಾಯಕನಹಟ್ಟಿ ತಿಪ್ಪೇಶನ ರಥೋತ್ಸವ ದಿನದಿಂದ ಬೇಸಿಗೆ ಕೊನೆವರೆಗೂ ಮಜ್ಜಿಗೆ ವಿತರಣೆ ಮಾಡಲಾಗುತ್ತದೆ.
ಮುಖಂಡರಾದ ಬಿ.ಜಿ.ಸೂರ್ಯನಾರಾಯಣ, ವೇಣುಗೋಪಾಲ್, ಸಾಕ್ರೆ ರಾಮಕೃಷ್ಣ, ವಾಂಜ್ರೆ ಶಿವಾಜಿ, ನರಸಿಂಗರಾವ್, ಪಪಂ ಸದಸ್ಯೆ ಶುಭಾ, ವೆಂಕಟೇಶ್, ವಿನಯ್ ಕುಮಾರ್, ಕಾಂತರಾಜ್ ಇದ್ದರು.