ನವದೆಹಲಿ: ಇಂದು (ಅ.28) ನಡೆದ ಗೃಹಮಂತ್ರಿಗಳ ಚಿಂತನ ಶಿಬಿರದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಅಪರಾಧಗಳು ನಡೆಯುವ ರೀತಿ ಈಗ ಬದಲಾಗುತ್ತಿವೆ. ಈ 5ಜಿ ಜಗತ್ತಿನಲ್ಲಿ ನಾವು ಇನ್ನಷ್ಟು ಎಚ್ಚರಿಕೆಯನ್ನು ವಹಿಸಬೇಕು’ ಎಂದರು.
‘ಹೊಸ ಯುಗದ ತಂತ್ರಜ್ಞಾನವನ್ನು ಬಳಸಿಕೊಂಡು ಫೇಶಿಯಲ್ ರೆಕಗ್ನಿಶನ್, ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರಕಗ್ನಿಶನ್, ಡ್ರೋನ್ ಹಾಗೂ ಸಿಸಿಟಿವಿ ತಂತ್ರಜ್ಞಾನ ಬಹಳಷ್ಟು ಅಭಿವೃದ್ಧಿ ಆಗಲಿದೆ’ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಮಾಹಿತಿ ನೀಡಿದರು.
‘ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಜಾಗೃತಿಯೂ ಅವಶ್ಯಕ. ಭಾರತದ ಕಾನೂನು ವ್ಯವಸ್ಥೆಯನ್ನು ನಾವು ಸ್ಮಾರ್ಟ್ ಮಾಡಬೇಕು. 5ಜಿ ತಂತ್ರಜ್ಞಾನ ಅಪರಾಧಗಳನ್ನು ತಡೆಯುವುದು ಮಾತ್ರವಲ್ಲ, ಪತ್ತೆದಾರಿಕೆಯಲ್ಲೂ ನೆರವಾಗಲಿದೆ’ ಎಂದು 5ಜಿಯ ಮಹತ್ವವನ್ನು ಪ್ರಧಾನಿ ಮೋದಿ ತಿಳಿಸಿದರು. (ಏಜೆನ್ಸೀಸ್)