ಮಾರಣಾಂತಿಕ ಕರೊನಾ ವೈರಸ್ ಕಳೆದ 7 ತಿಂಗಳಿಂದಲೂ ಹರಡುತ್ತಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರ ಪ್ರಾಣ ಕಸಿದಿದೆ. ಕೋಟ್ಯಂತರ ಜನರಿಗೆ ಬಾಧಿಸುತ್ತಿದೆ. ಬಹುತೇಕ ರಾಷ್ಟ್ರಗಳು ಕೊವಿಡ್-19ರಿಂದ ನಲುಗುತ್ತಿವೆ.
ಇಂಥ ಮಾರಕ ವೈರಸ್ಗೆ ಇನ್ನೂ ಲಸಿಕೆ ಕಂಡು ಹಿಡಿಯಲು ಆಗಿಲ್ಲ. ಔಷಧಿಯೂ ಸಿಗುತ್ತಿಲ್ಲ. ಕರೊನಾ ಪ್ರಾರಂಭವಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟೋ ಮನೆ ಮದ್ದುಗಳ ಬಗೆಗಿನ ಪೋಸ್ಟ್ಗಳು ಹರಿದಾಡುತ್ತಿವೆ. ಇದನ್ನು ಉಪಯೋಗಿಸಿದರೆ ಕರೊನಾ ಬರುವುದಿಲ್ಲ…ಅದನ್ನು ಬಳಸಿದರೆ ಕರೊನಾ ಕೆಲವೇ ಘಂಟೆಗಳಲ್ಲಿ ಮಾಯವಾಗುತ್ತದೆ ಎಂಬಿತ್ಯಾದಿ ಹಲವು ಬರಹಗಳು ಓಡಾಡುತ್ತಿದ್ದವು.
ಇತ್ತೀಚೆಗೆ ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ಗಳಲ್ಲಿ ಒಂದು ಹೊಸ ಪೋಸ್ಟ್ ವೈರಲ್ ಆಗುತ್ತಿದೆ. ಇಸ್ರೇಲ್ನಲ್ಲಿ ಕರೊನಾದಿಂದ ಒಬ್ಬರೇ ಒಬ್ಬರೂ ಸತ್ತಿಲ್ಲ. ಅದಕ್ಕೆ ಕಾರಣ ಅವರು ಚಹಾದಲ್ಲಿ ಬೇಕಿಂಗ್ ಸೋಡಾ ಮತ್ತು ಲಿಂಬು ಬೆರೆಸಿ ಕುಡಿಯುತ್ತಿದ್ದಾರೆ. ಈ ಮಿಶ್ರಣ ಕರೊನಾ ವೈರಸ್ನ್ನು ಕೊಲ್ಲುತ್ತಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿದೆ. ಹಾಗಾಗಿ ಇಸ್ರೇಲ್ ಜನರಿಗೆ ಸೋಂಕು ಜಾಸ್ತಿ ಬಾಧಿಸುತ್ತಿಲ್ಲ ಎಂಬ ಸಂದೇಶವುಳ್ಳ ಬರಹದ ಪೋಸ್ಟ್ ಇದು.
ಕರೊನಾ ಇಷ್ಟು ಸಿಂಪಲ್ ಆಗಿ ಹೋಗುವುದು ಸತ್ಯವಾ? ಬಿಸಿಬಿಸಿ ಚಹಾಕ್ಕೆ ಬೇಕಿಂಗ್ ಸೋಡಾ, ಲಿಂಬು ಸೇರಿಸಿ ಪ್ರತಿದಿನ ಮಧ್ಯಾಹ್ನ ಕುಡಿದರೆ ಕರೊನಾ ಬರುವುದಿಲ್ಲವಾ? ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶುರುವಾದ ಬೆನ್ನಲ್ಲೇ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ಈ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದೆ. ಅದರಲ್ಲಿ ಸತ್ಯ ಬಯಲಾಗಿದೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್ ಸರ್ಜಾ ಸಿಟ್ಟು…
ಮೊದಲನೇದಾಗಿ ಇಸ್ರೇಲ್ನಲ್ಲಿ ಕೊವಿಡ್-19 ನಿಂದ ಯಾರೂ ಸತ್ತಿಲ್ಲ ಎಂಬುದೇ ಸುಳ್ಳು. ಅಲ್ಲಿ ಇದುವರೆಗೆ 299ಮಂದಿ ಕರೊನಾಕ್ಕೆ ಬಲಿಯಾಗಿದ್ದಾರೆ. 18,268 ಜನ ಕರೊನಾ ಸೋಂಕಿತರು ಇದ್ದಾರೆ ಜಾನ್ ಹಾಪ್ಕಿನ್ಸ್ ವರದಿಯಲ್ಲಿ ಉಲ್ಲೇಖವಾಗಿದೆ. ಹಾಗೇ ಬಿಸಿ ಚಹಾಕ್ಕೆ ಲಿಂಬು, ಬೇಕಿಂಗ್ ಸೋಡಾ ಮಿಶ್ರಣ ಮಾಡಿಕೊಂಡು ಕುಡಿದರೆ ವೈರಸ್ ಸಾಯುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದು ಇಂಡಿಯಾ ಟುಡೆ ಫ್ಯಾಕ್ಟ್ಚೆಕ್ನಲ್ಲಿ ಬಯಲಾಗಿದೆ. ಆದರೆ ಈ ಸುಳ್ಳನ್ನೊಳಗೊಂಡ ಪೋಸ್ಟ್ ಮಾತ್ರ ಹಲವರ ಫೇಸ್ಬುಕ್ನಲ್ಲಿ ವೈರಲ್ ಆಗುತ್ತಿದೆ.
ಬಿಸಿ ಚಹಾಕ್ಕೆ ಲಿಂಬು, ಬೇಕಿಂಗ್ ಸೋಡಾ ಹಾಕಿ ಕುಡಿಯುವುದರಿಂದ ದೇಹದ ಇಮ್ಯೂನ್ ಸಿಸ್ಟಮ್ ಹೆಚ್ಚಾಗುತ್ತದೆ ಎಂಬುದಕ್ಕೂ ವೈಜ್ಞಾನಿಕ ಪುರಾವೆಗಳಿಲ್ಲ. ಇದನ್ನೂ ಓದಿ: ವಿದೇಶಿ ಮಹಿಳೆಯೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆ ಹೋಗಿದ್ದವನಿಗೆ ಅಲ್ಲೇ ಕಾದಿತ್ತು ಸಾವು
ಲಿಂಬುವಿನಲ್ಲಿ ವಿಟಾಮಿನ್ ಸಿ ಇದೆ. ಸಾಮಾನ್ಯ ಶೀತ, ಕೆಮ್ಮಿನ ವಿರುದ್ಧ ಲಿಂಬು ಪರಿಣಾಮಾತ್ಮಕವಾಗಿ ಹೋರಾಡಬಲ್ಲದು ಎಂಬುದು ಅನೇಕರ ನಂಬಿಕೆ. ಆದರೆ ಶ್ವಾಸಕೋಶಕ್ಕೆ ದಾಳಿ ಇಡುವ ಕರೊನಾ ವಿರುದ್ಧ ಇದೆಷ್ಟು ಪರಿಣಾಮಕಾರಿ ಎಂಬುದನ್ನು ಇದುವರೆಗೂ ಯಾರೂ ನಿಖರ ಕಾರಣಕೊಟ್ಟು ತಿಳಿಸಿಲ್ಲ. (ಏಜೆನ್ಸೀಸ್)
ಅನ್ಯ ಜಾತಿಯವನೊಂದಿಗೆ ಸರಸ-ಸಲ್ಲಾಪ ನಡೆಸಿ ಬಸಿರಾದ ಮಗಳನ್ನು ತಂದೆ-ತಾಯಿಯೇ ಕೊಂದುಬಿಟ್ಟರು…