More

    ದಲಿತರಿಗೆ ದಾರಿದೀಪವಾಗಿದ್ದ ಪ್ರಸಾದ್

    ಸರಗೂರು: ಸಂಸದ ವಿ.ಶ್ರೀನಿವಾಸಪ್ರಸಾದ್ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳು ಹಾಗೂ ವರ್ತಕರ ಮಂಡಳಿ ವತಿಯಿಂದ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಲಾಯಿತು.


    ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ಶ್ರೀನಿವಾಸಪ್ರಸಾದ್ ಅವರು ಸರಗೂರು ತಾಲೂಕು ಅಭಿವೃದ್ಧಿಗೆ ಮುಂದಾಗಿದ್ದರು. ದೀನ ದಲಿತರಿಗೆ ದಾರಿ ದೀಪವಾಗಿದ್ದರು. ಶಿಕ್ಷಣಕ್ಕೆ ಹೆಚ್ಚಿನ ಸಹಕಾರ ನೀಡುತ್ತಿದ್ದರು. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ರೂಢಿಸಿಕೊಂಡಿದ್ದರು. ಅವರ ದಾರಿಯಲ್ಲಿ ಯುವ ಪೀಳಿಗೆ ಸಾಗುತ್ತಿದೆ ಎಂದರು.


    ತಾಲೂಕಿನ ಎರಡು ಗ್ರಾಮಗಳಲ್ಲಿ ಗಲಭೆ ಉಂಟಾಗಿದ್ದ ಸಂದರ್ಭದಲ್ಲಿ ದಲಿತರಿಗೆ ಅನ್ಯಾಯವಾದಾಗ ಸಂಧಾನ ಸಭೆ ಮಾಡಿ ಎಲ್ಲವನ್ನು ಸರಿಪಡಿಸಿದ್ದರು. ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದವರು ಎಂದು ನೆನೆದರು.


    ವರ್ತಕರ ಮಂಡಳಿ ಅಧ್ಯಕ್ಷ ಶ್ರೀನಿವಾಸ, ಆದಿಕರ್ನಾಟಕ ಮಹಾಸಭಾ ಪ್ರಧಾನ ಕಾರ್ಯದರ್ಶಿ ಚನ್ನಿಪುರ ಮಲ್ಲೇಶ್, ಇದಿಯಪ್ಪ, ಭೀಮಯ್ಯ, ಜವರಯ್ಯ, ಸರಗೂರು ಕೃಷ್ಣ, ನಾಗಯ್ಯ ಹಳಿಯೂರು ಹಾಜರಿದ್ದರು. ಮುಳ್ಳೂರು, ಮಸಹಳ್ಳಿ, ಸರಗೂರು ಟೌನ್, ಸಿ ಜಿ ಹಳ್ಳಿ, ನರಸೀಪುರ, ಹಳಿಯೂರು ಗ್ರಾಮಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts