ಅಮಿತಾಬ್ ಬಚ್ಚನ್ ಕರೊನಾಕ್ಕೆ ತುತ್ತಾಗಿ ಹತ್ತು ದಿನ ಕಳೆಯುತ್ತ ಬಂತು. ಇಂದಿಗೂ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ ಪುತ್ರ ಅಭಿಷೇಕ್ ಬಚ್ಚನ್ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಜತೆಗೆ ಇಡೀ ಬಚ್ಚನ್ ಫ್ಯಾಮಿಲಿ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಬಗ್ಗೆಯೂ ಆಸ್ಪತ್ರೆ ವೈದ್ಯರು ಹೇಳಿಕೊಂಡಿದ್ದರು. ಹೀಗಿರುವಾಗಲೇ ಗುರುವಾರ ಹರಿದಾಡಿದ ಸುದ್ದಿಯೊಂದು ಬಚ್ಚನ್ಗೆ ಕೋಪ ತರಿಸಿದೆ. ಏನದು ಸುದ್ದಿ?
ಇದನ್ನೂ ಓದಿ: ಕರೊನಾದಿಂದ ದೊಡ್ಡ ಪಾಠ ಕಲಿಯುವಂತಾಯಿತು
ಹೌದು, ಅಮಿತಾಬ್ ಕರೊನಾ ಪರೀಕ್ಷೆ ನೆಗೆಟಿವ್ ಬಂದಿದೆ. ಇನ್ನೇನು ಮನೆ ಸೇರಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿದ ಅಮಿತಾಬ್, ಇದು ಸುಳ್ಳು, ಬೇಜವಾಬ್ದಾರಿ, ಸತ್ಯಕ್ಕೆ ದೂರವಾದ ಮಾತು ಎಂದು ಟ್ವಿಟ್ ಮಾಡಿ ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗೆ ಗುದ್ದು ನೀಡಿದ್ದರು.
ಇದನ್ನೂ ಓದಿ: ಅಭಿಮಾನ ಹೆಚ್ಚಾಗಿದ್ದೇ ಸಮಸ್ಯೆ ಆಯ್ತು!: ಫೇಕ್ ಅಭಿಮಾನಿಗಳಿಂದ ದೀಪಿಕಾ, ಪ್ರಿಯಾಂಕಾಗೆ ಸಂಕಷ್ಟ
ಸದ್ಯ ಅಮಿತಾಬ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆಯೂ ಆಸ್ಪತ್ರೆಯೂ ಅಷ್ಟೇ ಗೌಪ್ಯತೆ ಕಾಯ್ದುಕೊಂಡಿದ್ದು, ಕುಟುಂಬಕ್ಕೂ ಎಲ್ಲಿಯೂ ಹೇಳಿಕೊಳ್ಳದಂತೆ ಆದೇಶಿಸಲಾಗಿದೆ. ಇನ್ನು ಕೆಲ ದಿನಗಳಲ್ಲಿ ಅಭಿಷೇಕ್ ಮತ್ತು ಅಮಿತಾಬ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗುತ್ತಿದ್ದು, ಅದಾದ ಬಳಿಕ ಐಶ್ವರ್ಯಾ ಮತ್ತು ಆರಾಧ್ಯಾ ಮನೆ ಸೇರಿಕೊಳ್ಳಲಿದ್ದಾರೆ. (ಏಜೆನ್ಸೀಸ್)