More

    ಪ್ರಕೃತಿಗೆ ಪೂರಕವಾಗಿ ಅಭಿವೃದ್ಧಿ

    ಪ್ರಕೃತಿಗೆ ಪೂರಕವಾಗಿ ಅಭಿವೃದ್ಧಿ

    ಬಣಕಲ್: ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

    ಮೂಡಿಗೆರೆಯ ಪ್ರವಾಸಿ ತಾಣಗಳಾದ ದೇವರಮನೆ, ಬಲ್ಲಾಳರಾಯನ ದುರ್ಗ, ನಿಡುವಾಳೆ ರಾಮೇಶ್ವರ ದೇವಸ್ಥಾನ ಹಾಗೂ ಜಾವಳಿ ಹೇಮಾವತಿ ನದಿ ಮೂಲಕ್ಕೆ ಭೇಟಿ ನೀಡಿ ಮಾತನಾಡಿದರು.

    ದೇವರಮನೆ ಕಾಲಬೈರವೇಶ್ವರ ದೇಗುಲ ಪುಷ್ಕರಿಣಿ ಜೀಣೋದ್ಧಾರಕ್ಕೆ 50 ಲಕ್ಷ, ಬಲ್ಲಾಳರಾಯನ ದುರ್ಗ ಕೋಟೆ ಸಂರಕ್ಷಣೆಗೆ 1 ಕೋಟಿ, ಹೇಮಾವತಿ ನದಿ ಉಗಮ ಸ್ಥಳ ಅಭಿವೃದ್ಧಿಗೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಬಲ್ಲಾಳರಾಯನ ದುರ್ಗ, ಬಲ್ಲಾಳರಾಯನ ದುರ್ಗದ ರಾಣಿ ಝುರಿ ಬಳಿ ತಾಂತ್ರಿಕ ವರದಿ ಆಧಾರಿಸಿ ಕಣಿವೆ ದೃಶ್ಯ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸಲಾಗುವುದು ಎಂದರು.

    ರಾಣಿ ಝುರಿಯಲ್ಲಿ ಕೇಬಲ್ ಕಾರ್ ಅಳವಡಿಸುವ ಚಿಂತನೆ ಇಲ್ಲ. ಅದು ಚಾರಣಕ್ಕೆ ಸೂಕ್ತ ಪ್ರದೇಶ. ಹೇಮಾವತಿ ನದಿಮೂಲದ ಕಲ್ಯಾಣಿಯ ಮೂಲಕ್ಕೆ ಧಕ್ಕೆ ಬಾರದಂತೆ ಅಭಿವೃದ್ಧಿಪಡಿಸಲಾಗುವುದು. ತಡೆಗೋಡೆ ನಿರ್ವಿುಸುವ ಬಗ್ಗೆ ಯೋಜನಾ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ನೂಲು ಹುಣ್ಣಿಮೆ ದಿನವಾದ ಭಾನುವಾರ ದೇವರಮನೆ ಶ್ರೀ ಕಾಲಬೈರವೇಶ್ವರ ದೇವಸ್ಥಾನದ ಅರ್ಚಕರು ಸಚಿವರು, ಶಾಸಕರು ಹಾಗೂ ದೇವಸ್ಥಾನಕ್ಕೆ ಬಂದಿದ್ದ ಜನಪ್ರತಿನಿಧಿಗಳಿಗೆ ನೂಲು ಕಟ್ಟಿದ್ದರು.

    ಶಾಸಕ ಎಂ.ಪಿ.ಕುಮಾರಸ್ವಾಮಿ, ತಾಪಂ ಅಧ್ಯಕ್ಷ ಕೆ.ಸಿ.ರತನ್, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಮುಖಂಡರಾದ ಬಿ.ಎಂ ಭರತ್, ಟಿ.ಎಂ ಗಜೇಂದ್ರ, ಅನೂಪ್​ಕುಮಾರ್, ಪಂಚಾಕ್ಷರಿ, ಬಿ.ಬಿ ಮಂಜುನಾಥ್, ಸಂಜಯ ಗೌಡ, ಪರೀಕ್ಷಿತ್ ಜಾವಳಿ, ಜಗದೀಶ್ ಗೌಡ, ಶಶಿಧರ್, ಜಗದೀಪ್, ಉಪವಿಭಾಗಾಧಿಕಾರಿ ನಾಗರಾಜ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ತಹಸೀಲ್ದಾರ್ ರಮೇಶ್, ಉಪವಲಯ ಸಂರಕ್ಷಣಾಧಿಕಾರಿ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ಮೋಹನ್, ಸಿಪಿಐ ಜಗನ್ನಾಥ್, ಪಿಎಸ್​ಐಗಳಾದ ಶ್ರೀನಾಥ್ ರೆಡ್ಡಿ, ಮೂರ್ತಿ ಇತರರಿದ್ದರು.

    ಅಳಲು ತೋಡಿಕೊಂಡ ನೆರೆ ಸಂತ್ರಸ್ತೆ: ಕಳೆದ ಮಳೆಗಾಲದಲ್ಲಿ ಮನೆ ಹಾನಿಯಾಗಿದ್ದು, ಅದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ಮನೆ ಕಟ್ಟಿಕೊಡಲು ಪರಿಹಾರ ನೀಡಿ ಎಂದು ದುರ್ಗದಹಳ್ಳಿಯ ನೆರೆಸಂತ್ರಸ್ತೆ ಲಕ್ಷ್ಮಮ್ಮ ಬಲ್ಲಾಳರಾಯನ ಕಡೆಗೆ ಸಾಗುತ್ತಿದ್ದ ಸಚಿವ ಸಿ.ಟಿ.ರವಿ ಅವರ ಕಾರು ತಡೆದು ಅಳಲು ತೋಡಿಕೊಂಡರು. ಕಾರು ನಿಲ್ಲಿಸಿ ನೆರೆ ಸಂತ್ರಸ್ತೆಯನ್ನು ಮಾತನಾಡಿಸಿದ ಸಚಿವರು, ಅಧಿಕಾರಿಗಳನ್ನು ಕರೆದು ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

    ಅಂತರ ಕಾಯ್ದುಕೊಳ್ಳದೆ ಸಂಚಾರ: ಸಚಿವ ಸಿ.ಟಿ ರವಿ ಅವರು ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣಗಳಿಗೆ ಲಾಕ್​ಡೌನ್ ದಿನದಂದೇ ಭೇಟಿ ನೀಡಿದ್ದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಭೇಟಿ ವೇಳೆ ಕಾರ್ಯಕರ್ತರು, ಸ್ಥಳೀಯ ಮುಖಂಡರು ಅಂತರ ಕಾಯ್ದುಕೊಳ್ಳದೆ ಗುಂಪು ಸೇರಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮಾಸ್ಕ್ ಧರಿಸದೆ ಓಡಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts