More

    ರೋಗ ಲಕ್ಷಣಗಳಿಲ್ಲದಿದ್ರೂ ಸಚಿವ ಆನಂದ್​ ಸಿಂಗ್​ಗೆ ಕರೊನಾ ಸೋಂಕು ದೃಢ

    ಬಳ್ಳಾರಿ: ಅರಣ್ಯ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಆನಂದ್​ ಸಿಂಗ್​ ಅವರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಸಚಿವರು ಶುಕ್ರವಾರ ಸ್ವಯಂ ಪ್ರೇರಿತರಾಗಿ ಕೋವಿಡ್​-19 ಟೆಸ್ಟ್ ಮಾಡಿಸಿದ್ದರು. ಶನಿವಾರ ರಾತ್ರಿ ವರದಿ ಬಂದಿದ್ದು, ಆನಂದ್ ಸಿಂಗ್​ಗೆ ಕರೊನಾ ಸೋಂಕು ಧೃಡವಾಗಿದೆ.

    ಇದನ್ನೂ ಓದಿ: ಮಾಸ್ಕ್​ ಎಲ್ಲಿ ಎಂದಿದ್ದಕ್ಕೆ ಮಹಿಳೆ ಜತೆ ಅಸಭ್ಯ ವರ್ತನೆ: ಜನ ಬರ್ತಿದ್ದಂತೆ ಸಿನಿಮೀಯ ಶೈಲಿಯಲ್ಲಿ ಯುವಕರು ಪರಾರಿ

    ಯಾವುದೇ ರೋಗದ ಲಕ್ಷಣಗಳಿಲ್ಲದೇ ಕರೊನಾ ಧೃಡವಾಗಿದ್ದು, ಎ ಸಿಂಪ್ಟಮ್ಯಾಟಿಕ್ ಕೇಸ್ ಆಗಿರುವುದರಿಂದ ಸಿಂಗ್ ತಮ್ಮ ಹೊಸಪೇಟೆ​ ಮನೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ. ಪಾಸಿಟಿವ್ ಬಂದಿರೋದು ನಿಜ. ಆದರೆ ಸಿಂಗ್ ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

    ಇತ್ತೀಚೆಗೆ ಆನಂದ್ ಸಿಂಗ್ ಕರೊನಾ ಸೋಂಕಿತರ ವಾರ್ಡ್ ಒಳಗೆ ಹೋಗಿ ಬಂದಿದ್ದರು. ಅಲ್ಲದೇ ಅವರ ಕಾರು ಚಾಲಕನಿಗೂ ಕರೊನಾ ಧೃಡವಾಗಿತ್ತು. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಮೊದಲ ಕರೊನಾ ಶಂಕಿತ ಪ್ರಕರಣ: ಸೋಂಕು ತಡೆಯಲು ಕಿಮ್​ ಕಠಿಣ ನಿರ್ಧಾರ!

    ನಿಶ್ಚಿತಾರ್ಥದಲ್ಲಿ ತೆಲುಗು ನಟ ನಿತಿನ್​ ಧರಿಸಿದ್ದ ಕುರ್ತಾ ಬೆಲೆ ಕೇಳಿದ್ರೆ ಶಾಕ್​ ಆಗೋದು ಖಂಡಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts