ಬಳ್ಳಾರಿ: ಅರಣ್ಯ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಚಿವರು ಶುಕ್ರವಾರ ಸ್ವಯಂ ಪ್ರೇರಿತರಾಗಿ ಕೋವಿಡ್-19 ಟೆಸ್ಟ್ ಮಾಡಿಸಿದ್ದರು. ಶನಿವಾರ ರಾತ್ರಿ ವರದಿ ಬಂದಿದ್ದು, ಆನಂದ್ ಸಿಂಗ್ಗೆ ಕರೊನಾ ಸೋಂಕು ಧೃಡವಾಗಿದೆ.
ಯಾವುದೇ ರೋಗದ ಲಕ್ಷಣಗಳಿಲ್ಲದೇ ಕರೊನಾ ಧೃಡವಾಗಿದ್ದು, ಎ ಸಿಂಪ್ಟಮ್ಯಾಟಿಕ್ ಕೇಸ್ ಆಗಿರುವುದರಿಂದ ಸಿಂಗ್ ತಮ್ಮ ಹೊಸಪೇಟೆ ಮನೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ. ಪಾಸಿಟಿವ್ ಬಂದಿರೋದು ನಿಜ. ಆದರೆ ಸಿಂಗ್ ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಆನಂದ್ ಸಿಂಗ್ ಕರೊನಾ ಸೋಂಕಿತರ ವಾರ್ಡ್ ಒಳಗೆ ಹೋಗಿ ಬಂದಿದ್ದರು. ಅಲ್ಲದೇ ಅವರ ಕಾರು ಚಾಲಕನಿಗೂ ಕರೊನಾ ಧೃಡವಾಗಿತ್ತು. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಮೊದಲ ಕರೊನಾ ಶಂಕಿತ ಪ್ರಕರಣ: ಸೋಂಕು ತಡೆಯಲು ಕಿಮ್ ಕಠಿಣ ನಿರ್ಧಾರ!
ನಿಶ್ಚಿತಾರ್ಥದಲ್ಲಿ ತೆಲುಗು ನಟ ನಿತಿನ್ ಧರಿಸಿದ್ದ ಕುರ್ತಾ ಬೆಲೆ ಕೇಳಿದ್ರೆ ಶಾಕ್ ಆಗೋದು ಖಂಡಿತ!