ತಿಪಟೂರು: ಕರೊನಾ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಎಲ್ಲ ಉದ್ಯಮದ ಮೇಲೂ ಇದರ ಪ್ರಭಾವ ಬೀರಿದ್ದು, ಈಗಾಗಲೇ ಬಹುತೇಕ ಕಂಪನಿಗಳು ನಷ್ಟ ಸರಿದೂಗಿಸಲು ಉದ್ಯಮಿಗಳನ್ನು ಕೆಲಸದಿಂದ ತಗೆದು ಹಾಕಿವೆ. ಸಣ್ಣ-ಪುಟ್ಟ ಕಂಪನಿಗಳು, ವ್ಯಾಪಾರ ಮಳಿಗೆಗಳು ಬಾಗಿಲು ಹಾಕಿವೆ, ರೈತ ಬೆಳೆದ ಬೆಳೆಗೂ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟ ಉಂಟಾಗುತ್ತಿದೆ. ಇದೀಗ ಹೈನೋದ್ಯಮದ ಮೇಲೂ ಕರೊನಾ ಛಾಯೆ ಆವರಿಸಿದ್ದು, ರೈತರಿಂದ ಖರೀದಿಸುವ ಹಾಲಿನ ದರವೂ ಕುಸಿತ ಕಂಡಿದೆ.
ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ತುಮಕೂರು ಹಾಲು ಒಕ್ಕೂಟ (ತುಮುಲ್), ಆ.16ರಿಂದ ಮತ್ತೆ 2 ರೂಪಾಯಿ ಕಡಿತಗೊಳಿಸಿದೆ. ಫೆಬ್ರವರಿಯಲ್ಲಿ ಪ್ರತಿ ಲೀಟರ್ಗೆ 28.50 ರೂಪಾಯಿ ನೀಡುತ್ತಿದ್ದ ತುಮುಲ್, ಮಾರ್ಚ್ನಲ್ಲಿ 1 ರೂ. ಇಳಿಕೆ ಮಾಡಿತ್ತು. ಏಪ್ರಿಲ್ ಮತ್ತು ಮೇ ನಲ್ಲಿ ಮತ್ತೆ 2.50 ರೂ. ಕಡಿತಗೊಳಿಸಿತ್ತು. ಆದರೂ ಮತ್ತೆ ಆ.16ರಿಂದ 2 ರೂಪಾಯಿ ಕಡಿಮೆ ಮಾಡಿದೆ. ಈವರೆಗೆ ಒಟ್ಟಾರೆ 5.50 ರೂ. ಇಳಿಕೆಯಾಗಿದ್ದು, ಪ್ರತಿ ಲೀಟರ್ ಹಾಲು ಖರೀದಿ ದರ 23 ರೂಪಾಯಿಗೆ ಇಳಿದಿದೆ.
ಇದನ್ನೂ ಓದಿರಿ ಸರ್ಕಾರ ನನಗೆ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ; ಅಖಂಡ ಶ್ರೀನಿವಾಸ ಮೂರ್ತಿ
ಸದ್ಯ ತುಮುಲ್ಗೆ ಪ್ರತಿನಿತ್ಯ 8.54 ಲಕ್ಷ ಲೀಟರ್ ಹಾಲು ಹರಿದುಬರುತ್ತಿದೆ. ಕರೊನಾಕ್ಕೆ ಮುಂಚೆ 2 ಲಕ್ಷ ಲೀಟರ್ ಹಾಲನ್ನು ಮುಂಬೈಗೆ ರವಾನೆ ಮಾಡಲಾಗುತ್ತಿತ್ತು. ಈಗ 50 ಸಾವಿರ ಲೀಟರ್ಗೆ ಕುಸಿದಿದೆ. ಬೆಂಗಳೂರಿಗೆ 1.65 ಲಕ್ಷ ಲೀಟರ್ ಹಾಲು ಪೂರೈಸಲಾಗುತ್ತಿದೆ. ತುಮಕೂರಿಗೆ 1.15 ಲಕ್ಷ ಲೀಟರ್ ಹಾಲಿನ ಪೈಕಿ 1 ಲಕ್ಷ ಲೀಟರ್ ಹಾಲು ಮಾತ್ರವೇ ಮಾರಾಟವಾಗುತ್ತಿದೆ. ಮಾರ್ಚ್ ನಿಂದ ಇಲ್ಲಿಯವರೆಗೆ ಒಕ್ಕೂಟ ಅಂದಾಜು 23 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ನಷ್ಟಭರಿಸಲಾಗದೆ ಹೈರಾಣಾಗಿರುವ ತುಮುಲ್, ರೈತರಿಂದ ಹಾಲು ಖರೀದಿ ದರವನ್ನು ಸತತವಾಗಿ ಕಡಿಮೆ ಮಾಡುತ್ತಲೇ ಇದೆ. ಹಾಲಿಗೆ ಬೇಡಿಕೆ ಹೆಚ್ಚಾದರೆ ದರ ಯಥಾಸ್ಥಿತಿ ಆಗಲಿದೆ ಎಂದು ತುಮುಲ್ ತಿಳಿಸಿದೆ.
ಕಾಂಗ್ರೆಸ್ ವಿರುದ್ಧ ಅಖಂಡ ಶ್ರೀನಿವಾಸ್ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!