ತಿರುವನಂತಪುರಂ: ಕೇರಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಂಬಿತವಾಗಿದ್ದ ಮೆಟ್ರೊಮ್ಯಾನ್ ಈ. ಶ್ರೀಧರನ್ ಸಕ್ರಿಯ ರಾಜಕಾರಣವನ್ನು ತೊರೆಯುತ್ತಿರುವುದಾಗಿ ಇಂದು ಘೋಷಿಸಿದ್ದಾರೆ. ಭಾರತೀಯ ಜನತಾ ಪಕ್ಷವನ್ನು ಸೇರಿ ಒಂದು ವರ್ಷ ಕಳೆಯುವುದಕ್ಕೂ ಮುಂಚೆಯೇ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಕೇರಳದ ಮಲಪ್ಪುರಂನಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ ಶ್ರೀಧರನ್, ನಾನು ಯಾವಾಗಲೂ ರಾಜಕಾರಣಿಯಾಗಿರಲಿಲ್ಲ. ಆದರೆ ರಾಜಕೀಯದಲ್ಲಿ ಸಕ್ರಿಯವಾಗಿರುವುದಿಲ್ಲ ಎಂದ ಮಾತ್ರಕ್ಕೆ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ ಎಂದರ್ಥವಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಲುವೆಗೆ ಬಿದ್ದ ಟ್ರ್ಯಾಕ್ಟರ್ ಪಲ್ಟಿ; ಜಮೀನಿಗೆ ಹೊರಟ ಚಾಲಕ ಸ್ಥಳದಲ್ಲೇ ಸಾವು…
ಕಳೆದ ಏಪ್ರಿಲ್ನಲ್ಲಿ ನಡೆದ ಚುನಾವಣೆಯಲ್ಲಿ ಪಲಕ್ಕಾಡ್ ವಿಧಾನಸಭಾ ಕ್ಷೇತ್ರಕ್ಕಾಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಧರನ್ ಅವರನ್ನು ಕೇರಳದ ಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಆದರೆ ಬಳಿಕ ಅವರು ಶಾಸಕ ಶಫಿ ಪರಂಬಿಲ್ ವಿರುದ್ಧ 3,859 ಮತಗಳಿಂದ ಪರಾಭವ ಕಂಡಿದ್ದರು.
ಇದನ್ನೂ ಓದಿ: ಯುವಕನ ಬರ್ಬರ ಕೊಲೆ: ಕರೆ ಮಾಡಿ ಕರೆಸಿಕೊಂಡು ಚಾಕುವಿನಿಂದ ಚುಚ್ಚಿದ್ರು, ಹಳ್ಳಕ್ಕೆ ತಳ್ಳಿ ತಲೆ ಮೇಲೆ ಕಲ್ಲು ಹಾಕಿದ್ರು..
ನಾನು ಸೋತಾಗ ಬೇಸರವಾಗಿತ್ತು. ಆದರೆ, ಆ ಸಮಯ ಈಗ ಕಳೆದಿದೆ. ನನಗೀಗ 90 ವರ್ಷ. ರಾಜಕೀಯದಲ್ಲಿ ಹೆಚ್ಚು ತೊಡಗಿಕೊಳ್ಳುವುದು ಅಪಾಯಕಾರಿ. ನನ್ನ ನೆಲದ ಸೇವೆ ಮಾಡಲು ನನಗೆ ರಾಜಕೀಯದ ಅಗತ್ಯವಿಲ್ಲ. ಮೂರು ಟ್ರಸ್ಟ್ಗಳ ಮೂಲಕ ನಾನಾಗಲೇ ಅದನ್ನು ಮಾಡುತ್ತಿದ್ದೇನೆ ಎಂದು ಶ್ರೀಧರನ್ ತಿಳಿಸಿದ್ದಾರೆ.