More

    ನಾಡಿಗೆ ಮಠ, ಮಂದಿರಗಳ ಕೊಡುಗೆ ಅಪಾರ

    ಶಿಕಾರಿಪುರ: ನಾಡಿಗೆ ಮಠ, ಮಂದಿರಗಳ ಕೊಡುಗೆ ಅಪಾರ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ತೊಗರ್ಸಿಯ ಮಳೆ ಹಿರೇಮಠ, ಪಂಚವಣ್ಣಿಗೆ ಮಠಗಳ ನಿರ್ಮಾಣ ಕಾಮಗಾರಿ ವೀಕ್ಷಿಸಿ ಉಭಯ ಶ್ರೀಗಳೊಂದಿಗೆ ಮಾತನಾಡಿದ ಅವರು, ನಾಡಿನ ಜನತೆ ಮತ್ತು ಗುರುಗಳ ಅನುಗ್ರಹದಿಂದ ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಸರ್ಕಾರ ಜನಪರ ಕಾರ್ಯಗಳನ್ನು ಮಾಡುತ್ತಿದ್ದು ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆ ಮಂಜೂರಾಗಿದೆ. ಇದರಿಂದ ತಾಲೂಕಿನ ಐದು ಹೋಬಳಿಗಳ ರೈತರಿಗೆ ಅನುಕೂಲವಾಗಲಿದೆ ಎಂದರು.

    ತಾಲೂಕಿನಲ್ಲಿ ಎರಡು ರಾಜ್ಯ ಹೆದ್ದಾರಿಗಳು, ರೈಲ್ವೆ ಯೋಜನೆ, ಕೆಎಸ್​ಆರ್​ಟಿಸಿ ಡಿಪೋ, ಬಸ್ ನಿಲ್ದಾಣ ಮುಂತಾದ ಕಾಮಗಾರಿಗಳು ನಡೆಯುತ್ತಿವೆ. ನಾಡಿನಲ್ಲಿ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭಗೊಂಡಿದೆ. ಶಿವಮೊಗ್ಗ ಜಿಲ್ಲೆ ಮತ್ತು ಶಿಕಾರಿಪುರ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿಯಾಗಿಸಬೇಕು ಎಂಬ ತಂದೆ ಯಡಿಯೂರಪ್ಪ ಅವರ ಸಂಕಲ್ಪ ಕಾರ್ಯರೂಪಕ್ಕೆ ಬರುತ್ತಿದೆ ಎಂದು ಹೇಳಿದರು.

    ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಯಡಿಯೂರಪ್ಪನವರ ಆತ್ಮಬಲ ಅದ್ಭುತವಾಗಿದೆ. ಅವರ ಆಡಳಿತದಲ್ಲಿ ನಾಡಿನ ಮಠ ಮಂದಿರಗಳು ಜೀಣೋದ್ದಾರವಾಗಿವೆ, ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಸರಿ ಸಮಾನವಾಗಿ ಸೌಲಭ್ಯಗಳ್ನು ನೀಡಿದ್ದಾರೆ. ಅವರ ನಿರಂತರ ಸೇವೆ ಈ ನಾಡಿಗೆ ಅಗತ್ಯವಿದೆ. ಅವರಿಗೆ ದೈವಾನುಗ್ರಹ, ಗುರುಗಳ ಅನುಗ್ರಹವಿದೆ. ಆದ್ದರಿಂದ ಅವರ ಕೆಲಸದಲ್ಲಿ ಯಶಸ್ಸು, ಕೀರ್ತಿ ದೊರೆಯುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts