More

    ಒಂದು ಕಾಲದಲ್ಲಿ ಬ್ಯೂಟಿ ಸ್ಟಾರ್​ ಆಗಿದ್ದ ಈ ನಟಿ ಇಂದು 100 ರೂಪಾಯಿಗೂ ಪರದಾಟ!

    ಮುಂಬೈ: ಚಿತ್ರರಂಗದಲ್ಲಿ ಅವಕಾಶಗಳಿಗೆ ಮಿತಿಯೇ ಇಲ್ಲ. ಸಾಕಷ್ಟು ನಟ-ನಟಿಯರು ಬಣ್ಣದ ಜಗತ್ತಿಗೆ ಎಂಟ್ರಿ ಕೊಡುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಾರೆ. ಆದರೆ, ಈ ವರ್ಣರಂಜಿತ ಪ್ರಪಂಚದಲ್ಲಿ ಬದುಕುವುದು ಅಂದರೆ ಅದು ಸುಲಭದ ಕೆಲಸವಲ್ಲ. ಅದೃಷ್ಟ ಇರಬೇಕು. ಕೆಲವರಿಗೆ ಅವಕಾಶಗಳು ಸಿಕ್ಕಿ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡುತ್ತಾರೆ. ಇನ್ನು ಕೆಲವರು ಹೇಳ ಹೆಸರಿಲ್ಲದೇ ಹೋಗುತ್ತಾರೆ. ಕೆಲವರಿಗೆ ಸ್ಟಾರ್​ ನಟರೊಂದಿಗೆ ನಟಿಸುವ ಅವಕಾಶ ಸಿಕ್ಕಿ, ವೃತ್ತಿ ಜೀವನದಲ್ಲಿ ಒಂದೊಳ್ಳೆ ಬೂಸ್ಟ್ ಸಿಕ್ಕಿದರು ಕೂಡ ವಿಧಿಯಾಟದ ಮುಂದೆ ಮರೆಯಾಗಿ ಬಿಡುತ್ತಾರೆ. ಒಂದಾನೊಂದು ಕಾಲದಲ್ಲಿ ಟಾಪ್ ಹೀರೋಯಿನ್​ಗಳಾಗಿ ಜನಪ್ರಿಯರಾಗಿದ್ದ ಕೆಲವರು ಈಗ ಗುರುತಿಸಲಾಗದಷ್ಟು ಬದಲಾಗಿದ್ದು, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಲ್ಲಿ ಈ ನಾಯಕಿ ಕೂಡ ಒಬ್ಬರು. ಒಂದು ಕಾಲದಲ್ಲಿ ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಎದುರು ನಟಿಸಿದ್ದ ಈ ಬ್ಯೂಟಿಫುಲ್ ನಟಿ ಈಗ 100 ರೂಪಾಯಿ ಸಂಪಾದಿಸುತ್ತಿದ್ದು, ಆರೋಗ್ಯ ಸಮಸ್ಯೆ ಹಿನ್ನೆಲೆ ನೆರವು ಕೋರಿದ್ದಾರೆ.

    ಬಾಲಿವುಡ್‌ನಲ್ಲಿ ಭರವಸೆಯ ಆರಂಭವನ್ನು ಮಾಡಿದ ನಟಿಯ ಬಗ್ಗೆ ನಾವಿಂದು ಮಾತನಾಡುತ್ತೇವೆ. ಈ ನಟಿಯ ವೃತ್ತಿಜೀವನವು ಅಲ್ಪಕಾಲಿಕವಾಗಿತ್ತು. ಕೆಲವು ಅನಿರೀಕ್ಷಿತರ ಘಟನೆಗಳು ಜೀವನದ ಅತ್ಯಂತ ಕಷ್ಟಕರವಾದ ಕಷ್ಟಗಳನ್ನು ಎದುರಿಸುವಂತೆ ಮಾಡಿತು. ಈ ಜನಪ್ರಿಯ ನಟಿಗೆ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ನೀಡಲು ಹಣವಿಲ್ಲ. ಹೌದು, ನಾವು ಪೂಜಾ ದದ್ವಾಲ್ ಅವರ ಸವಾಲಿನ ಜೀವನದ ಬಗ್ಗೆ ಮಾತನಾಡುತ್ತಿದ್ದೇವೆ.

    1977, ಜನವರಿ 5ರಂದು ಜನಿಸಿದ ಪೂಜಾ ಮುಂಬೈ ಮೂಲದವರು. ಪೂಜಾ ತನ್ನ ಶಾಲಾ ಕಾಲೇಜು ಶಿಕ್ಷಣವನ್ನು ಮುಂಬೈನಲ್ಲಿ ಮುಗಿಸಿದರು. ಬಾಲ್ಯದಿಂದಲೂ ಪೂಜಾಗೆ ನಟನೆಯತ್ತ ಒಲವಿತ್ತು. ತನ್ನ ಕೌಶಲ್ಯವನ್ನು ತೀಕ್ಷ್ಣಗೊಳಿಸಲು ಪೂಜಾ ನಟನಾ ಸಂಸ್ಥೆಯನ್ನು ಸೇರಿಕೊಂಡಳು ಮತ್ತು ಶಾಲೆಯ ನಂತರ, ಅವಳು ತನ್ನ ಅಧ್ಯಯನದೊಂದಿಗೆ ನಟನಾ ತರಗತಿಗಳನ್ನು ನಿರ್ವಹಿಸುತ್ತಿದ್ದಳು. ಒಂದು ದಿನ, ತನ್ನ ಆಕ್ಟಿಂಗ್ ಕ್ಲಾಸ್ ಸಮಯದಲ್ಲಿ, ಪೂಜಾಗೆ ಸಿನಿಮಾದ ಆಫರ್ ಬಂದಿತು. 17ನೇ ವಯಸ್ಸಿನಲ್ಲಿ ಪೂಜಾ ಅವರು ಸಲ್ಮಾನ್ ಖಾನ್ ಜೊತೆಗಿನ ಆಕ್ಷನ್ ಚಿತ್ರ, ವೀರಗತಿ (1995) ಯಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿದರು. ಇದು ಅವರ ಜೀವನದ ಮರೆಯಲಾಗದ ದಿನ. ಆದರೆ, ವೀರಗತಿ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಮಕಾಡೆ ಮಲಗಿದ್ದು, ಪೂಜಾಗೆ ತುಂಬಾನೇ ನೋವು ತಂದಿತು. ಏಕೆಂದರೆ, ಒಂದು ಒಳ್ಳೆಯ ಓಪನಿಂಗ್​ ಪೂಜಾಗೆ ಸಿಗಲಿಲ್ಲ. ವೀರಗತಿ ನಂತರ, ಪೂಜಾ ಇತರ ಕೆಲವು ಚಿತ್ರಗಳಿಗೆ ಸಹಿ ಹಾಕಿದರು. ಆದರೆ, ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ.

    ಪೂಜಾಗೆ ಸಿನಿಮಾಗಳಲ್ಲಿ ಉತ್ತಮ ಅವಕಾಶಗಳು ಸಿಗದ ಕಾರಣ ಕಿರುತೆರೆಗೆ ಜಿಗಿದರು. ಆಶಿಕಿ (1999) ಮತ್ತು ಘರಾನಾ (2001) ಎಂಬ ಎರಡು ಜನಪ್ರಿಯ ಕಾರ್ಯಕ್ರಮಗಳಲ್ಲಿ ನಟಿಸಿದಳು. ಎರಡು ಹಿಟ್ ಶೋಗಳಲ್ಲಿ ನಟಿಸಿದ್ದರೂ ಪೂಜಾಗೆ ಸಿನಿಮಾಗಳಿಂದ ಆಸಕ್ತಿಕರ ಆಫರ್​ಗಳು ಬರುತ್ತಿರಲಿಲ್ಲ. ಹೀಗಾಗಿ ಜೀವನದಲ್ಲಿ ಸೆಟಲ್ ಆಗಲು ನಿರ್ಧರಿಸಿದರು. ಪೂಜಾ ಮದುವೆಯಾಗಿ ಪತಿಯೊಂದಿಗೆ ಗೋವಾಕ್ಕೆ ಶಿಫ್ಟ್ ಆದರು. ಗೋವಾದಲ್ಲಿ, ಪೂಜಾ ತನ್ನ ಗಂಡನ ಕ್ಯಾಸಿನೊವನ್ನು ಸಹ ನಿರ್ವಹಿಸುತ್ತಿದ್ದರು.

    2018ರಲ್ಲಿ ಪೂಜಾ ಅನಾರೋಗ್ಯಕ್ಕೆ ಒಳಗಾದರು ಮತ್ತು ಅಸ್ವಸ್ಥರಾದರು. ಆರೋಗ್ಯ ತಪಾಸಣೆಯ ನಂತರ ಆಕೆಗೆ ತೀವ್ರ ಕ್ಷಯರೋಗ ಇರುವುದು ಪತ್ತೆಯಾಯಿತು. ಪೂಜಾ ಅವರ ಆರೋಗ್ಯದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೂಜಾ ಅವರ ಪತಿ ಮತ್ತು ಅತ್ತೆ ಸಂಬಂಧವನ್ನು ಕಡಿದುಕೊಂಡರು. ಮುಂಬೈನಲ್ಲಿ ಒಂಟಿಯಾಗಿ ಬಿಟ್ಟ ಹೋದರು. ಆ ಸಮಯದಲ್ಲಿ ಪೂಜಾಗೆ ಜೀವನದಲ್ಲಿ ಏನೂ ಇರಲಿಲ್ಲ, ಉತ್ತಮ ಆರೋಗ್ಯ, ಹಣ, ಕೆಲಸ ಅಥವಾ ಕುಟುಂಬವೂ ಇರಲಿಲ್ಲ.

    ಈ ಸಂಕಷ್ಟದ ಸಮಯದಲ್ಲಿ ಪೂಜಾಳ ಹಿತೈಷಿ ರಾಜಿಂದರ್ ಸಿಂಗ್, ಪೂಜಾಳನ್ನು ಮತ್ತೆ ಮುಂಬೈಗೆ ಕರೆತಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಈ ಹಂತದಲ್ಲಿ, ಪೂಜಾ ತನ್ನ ದೇಹದ ತೂಕವನ್ನು ತೀವ್ರವಾಗಿ ಕಳೆದುಕೊಂಡರು. ತನ್ನ ಕಷ್ಟದ ಸಮಯದಲ್ಲಿ ಸಲ್ಮಾನ್ ಖಾನ್, ರವಿ ಕಿಶನ್ ಮತ್ತು ರಾಜಿಂದರ್ ಸಿಂಗ್ ಈ ಮೂವರು ಮಾತ್ರ ತನಗೆ ಸಹಾಯ ಮಾಡಿದ್ದಾರೆ ಎಂದು ಪೂಜಾ ಉಲ್ಲೇಖಿಸಿದ್ದಾರೆ. ಯೂಟ್ಯೂಬ್‌ನಲ್ಲಿ ವಿಡಿಯೋ ಸಂದೇಶದ ಮೂಲಕ ಪೂಜಾ ಸಲ್ಮಾನ್‌ನಿಂದ ಹಣಕಾಸಿನ ನೆರವು ಕೋರಿದರು. ಇದನ್ನು ನೋಡಿದ ಸಲ್ಮಾನ್, ಮುಂದಿನ ಆರು ತಿಂಗಳ ಕಾಲ ಅವರು ಅವಳ ಚಿಕಿತ್ಸೆಯನ್ನು ವೆಚ್ಚವನ್ನು ನೋಡಿಕೊಂಡರು.

    ಪೂಜಾ ಮತ್ತೆ ಸಿನಿಮಾಗೆ ವಾಪಸ್​​ ಬರಲು ಬಯಸಿದ್ದರು. ಮೊದಲೇ ಕಷ್ಟದಲ್ಲಿದ್ದ ಕುಟುಂಬ ವಸತಿ ಕಟ್ಟಡದ 10X10 ಅಳತೆಯ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದರು. ಬಾಡಿಗೆ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಹೀಗಾಗಿ ಸಣ್ಣಪುಟ್ಟ ಕೆಲಸ ಮಾಡಲು ಆರಂಭಿಸಿದರು. 2020ರಲ್ಲಿ ಪೂಜಾ ಪಂಜಾಬಿ ಚಿತ್ರ ಶುಕರನ: ಗುರು ನಾನಕ್ ದೇವ್ ಜಿ ಕಾ ಸಿನಿಮಾ ಮೂಲಕ ನಟನೆಯಲ್ಲಿ ಪುನರಾಗಮನ ಮಾಡಿದರು. ದುಃಖಕರವೆಂದರೆ, ಈ ಚಿತ್ರವು ಫ್ಲಾಪ್ ಆಯಿತು ಮತ್ತು ಪೂಜಾ ಅವರ ಪುನರಾಗಮನವು ಸಹ ವಿಶೇಷ ಗಮನ ಸೆಳೆಯಲಿಲ್ಲ. ಇಂದು ಕೂಡ ಪೂಜಾ ವಸತಿ ಕಟ್ಟಡದ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ. ತನ್ನ ಬದುಕು ಸಾಗಿಸಲು ಟಿಫಿನ್ ಸೇವೆ ಸಹ ನಡೆಸುತ್ತಿದ್ದಾಳೆ. ಒಂದಲ್ಲ ಒಂದು ದಿನ ಪೂರ್ಣ ಬಲದಿಂದ ಹಿಂತಿರುಗುವ ಭರವಸೆಯಲ್ಲಿದ್ದಾಳೆ ಪೂಜಾ. (ಏಜೆನ್ಸೀಸ್​)

    ಕೇಜ್ರಿವಾಲ್ ಬಂಧನ; ಅಬಕಾರಿ ನೀತಿ ಹಗರಣದಲ್ಲಿ ಇ.ಡಿ.ಯಿಂದ ಲಾಕ್

    ವಿರಾಮದ ಬಳಿಕ ದಿಗ್ಗಜರ ಸಮಾಗಮಕ್ಕೆ ವೇದಿಕೆ ಸಜ್ಜು: ಹೇಗಿದೆ ಆರ್‌ಸಿಬಿ-ಸಿಎಸ್‌ಕೆ ಆಡುವ ಹನ್ನೊಂದರ ಬಳಗ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts