More

    ಶ್ರೀಶೈಲಂನಲ್ಲಿರುವ ತೆಲಂಗಾಣ ಪವರ್ ಸ್ಟೇಷನ್​ನಲ್ಲಿ ಭಾರಿ ಬೆಂಕಿ ದುರಂತ: 9 ಜನ ಸಿಲುಕಿರುವ ಶಂಕೆ

    ಹೈದರಾಬಾದ್​: ಶ್ರೀಶೈಲಂನಲ್ಲಿರುವ ತೆಲಂಗಾಣದ ಪವರ್ ಸ್ಟೇಷನ್ ಒಂದರಲ್ಲಿ ಗುರುವಾರ ತಡರಾತ್ರಿ ಭಾರಿ ಬೆಂಕಿ ಅನಾಹುತ ಸಂಭವಿಸಿದೆ. ಕೆಲವರು ಅಲ್ಲಿ ಸಿಲುಕಿಕೊಂಡಿರುವ ಶಂಕೆ ಇದ್ದು, ರಕ್ಷಣಾ ಪರಿಹಾರ ಕಾರ್ಯ ನಡೆದಿದೆ. ಆರಂಭಿಕ ಮಾಹಿತಿಗಳ ಪ್ರಕಾರ ಶಾರ್ಟ್​ ಸರ್ಕೀಟ್ ಸಂಭವಿಸಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.

    ತೆಲಂಗಾಣದ ನಾಗರಕುರ್ನೂಲ್ ಜಿಲ್ಲೆಯ ಶ್ರೀಶೈಲಂನಲ್ಲಿರುವ ಟಿಎಸ್​ ಗೆನ್ಕೋ ಹೈಡೆಲ್ ಪವರ್ ಸ್ಟೇಷನ್​ನಲ್ಲಿ ಈ ದುರಂತ ಸಂಭವಿಸಿದೆ. ಅಗ್ನಿ ದುರಂತ ಸಂಭವಿಸಿದ ವೇಳೆ ಅಲ್ಲಿ 17 ಜನರಿದ್ದರು ಎಂದು ಹೇಳಲಾಗುತ್ತಿದ್ದು, ಅವರ ಪೈಕಿ 10 ಜನ ಸ್ಥಳದಿಂದ ಸುರಕ್ಷಿತವಾಗಿ ಸುರಂಗದ ಮೂಲಕ ಹೊರಬಿದ್ದಿದ್ದಾರೆ. ಟಿಎಸ್​ ಗೆನ್ಕೋ ಕಂಪನಿಯ ಆರು ನೌಕರರು ಮತ್ತು ಖಾಸಗಿ ಕಂಪನಿಯ ಮೂರು ನೌಕರರು ಅಲ್ಲಿ ಸಿಲುಕಿಕೊಂಡಿದ್ದಾರೆ.

    ಇದನ್ನೂ ಓದಿ: PHOTOS: ಟ್ರೆಡಿಷನಲ್​ ಲುಕ್​ನಲ್ಲಿ ಕಾವ್ಯಾ ಗೌಡ ಮಿಂಚಿಂಗ್​; ಹೊಸ ಫೋಟೋಶೂಟ್​ ಹೇಗಿದೆ ನೋಡಿ

    ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಸಿಲುಕಿದ್ದವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ತೆಲಂಗಾಣ ಸಚಿವ ಜಗದೀಶ ರೆಡ್ಡಿ ಮತ್ತು ಟಿಎಸ್​ ಗೆನ್ಕೋ ಕಂಪನಿಯ ಸಿಎಂಡಿ ಪ್ರಭಾಕರ ರಾವ್ ಸ್ಥಳಕ್ಕೆ ತಲುಪಿದ್ದು ರಕ್ಷಣಾ ಕಾರ್ಯದ ಉಸ್ತುವಾರಿ ಗಮನಿಸುತ್ತಿದ್ದಾರೆ. (ಏಜೆನ್ಸೀಸ್)

    ಆರೋಗ್ಯ ಸಚಿವ ಶ್ರೀರಾಮುಲು ಅವರ ತಾಯಿ ದೈವಾಧೀನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts