More

    ಆಯ್ತು ಬನ್ನಿ ಅಂದ್ರಂತೆ ಮನುರಂಜನ್ ರವಿಚಂದ್ರನ್​, ಅಭಿಮಾನಿಗಳಿಗೆ ಖುಷಿಯೋ ಖುಷಿ…

    ಬೆಂಗಳೂರು: ಕಳೆದ ಒಂದೆರಡು ವರ್ಷಗಳಿಂದ ಕರೊನಾ ಬಹುತೇಕ ಎಲ್ಲವನ್ನೂ ತಡೆದಿದೆ. ಅದೆಷ್ಟೋ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಅದರಲ್ಲಿ ಸಿನಿಮಾ ಸ್ಟಾರ್​ಗಳ ಜನ್ಮದಿನಾಚರಣೆ ಕೂಡ ಸೇರಿದೆ. ಕಳೆದ ಎರಡು ವರ್ಷಗಳಿಂದ ಬಹುತೇಕ ಎಲ್ಲ ಸಿನಿಮಾ ಸ್ಟಾರ್​ಗಳು ಎಂದಿನಂತೆ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿಲ್ಲ.

    ಸಿನಿಮಾ ಸ್ಟಾರ್​​ಗಳ ಪಾಲಿಗೆ ಜನ್ಮದಿನವೆಂದರೆ ಕಲಾವಿದ ಹಾಗೂ ಅಭಿಮಾನಿಗಳ ಸಮಾಗಮದ ದಿನದಂತೆ. ಅಂದು ರಾಜ್ಯದ ಮೂಲೆಮೂಲೆಗಳಿಂದ ಅದೆಷ್ಟೋ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಅವರ ಮನೆ ಮುಂದೆ ಜಮಾಯಿಸುತ್ತಾರೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಹೀಗೆ ಸಾರ್ವಜನಿಕವಾಗಿ ಜನ್ಮದಿನ ಆಚರಿಸಿಕೊಳ್ಳದ ಸ್ಟಾರ್​ನಟರು ಮನೆ ಬಳಿಗೆ ಬರದಂತೆ ಅಭಿಮಾನಿಗಳಿಗೂ ಕಳೆದೆರಡು ವರ್ಷಗಳಲ್ಲಿ ಮನವಿ ಮಾಡಿಕೊಂಡಿದ್ದರು.

    ಇದನ್ನೂ ಓದಿ: ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

    ಆದರೆ ಇದೀಗ ರವಿಚಂದ್ರನ್​ ಪುತ್ರ ಮನುರಂಜನ್ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜತೆ ಮನೆ ಬಳಿಯೇ ಆಚರಿಸಿಕೊಳ್ಳಲು ಒಪ್ಪಿದ್ದಾರಂತೆ. ‘ಅಭಿಮಾನಿಗಳ ಪ್ರೀತಿಗೆ ಮಣಿದ ಯಂಗ್ ಕ್ರೇಜಿ ಸ್ಟಾರ್ ಅಭಿಮಾನಿಗಳ ಜತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಒಪ್ಪಿದ್ದಾರೆ. ಡಿ. 11ರಂದು ರಾಜಾಜಿನಗರ ರವಿಕಲಾ ನಿವಾಸದಲ್ಲಿ ಈ ಜನ್ಮದಿನಾಚರಣೆ ನಡೆಯಲಿದೆ. ಎಲ್ಲ ಅಭಿಮಾನಿಗಳು ಬರಬಹುದು’ ಎಂದು ರವಿಚಂದ್ರನ್ ಮತ್ತು ಮನುರಂಜನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

    ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅಪಘಾತ!

    26 ಮಕ್ಕಳಿದ್ದ ಶಾಲಾ ಬಸ್​ ಅಪಘಾತ; ದಾರಿ ತಪ್ಪಿ ಹೊಲದ ಏರಿಗೆ ಡಿಕ್ಕಿ ಹೊಡೆದ ಬಸ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts