ಮಂಡ್ಯ: ಸ್ಕೂಟರ್ಗೆ ಅಡ್ಡಬಂದಿದ್ದಕ್ಕೆ ಬಾಲಕಿ ಎಂಬುದನ್ನು ನೋಡದೆ ಮಂಡ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ.ಬಿ. ರಮೇಶ್ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ರಮೇಶ್ ಹಲ್ಲೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವಿಡಿಯೋವನ್ನು ಸಾಹಿತಿ ಹಾಗೂ ಪತ್ರಕರ್ತ ಡಾ. ಎನ್. ಜಗದೀಶ್ ಕೊಪ್ಪ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಈ ವಿಡಿಯೋವನ್ನು ಕಲೆ ಹಾಕಿ, ಜಿಲ್ಲಾ ಪೊಲೀಸ್ ವರಿ಼ಷ್ಠಾಧಿಕಾರಿಗೆ ದೂರು ಸಲ್ಲಿಸುತ್ತಿದ್ದೀನಿ. ಇಂತಹ ಅಯೋಗ್ಯರು ಕೇವಲ ಕ.ಸಾ.ಪ. ಮಾತ್ರವಲ್ಲದೆ, ಸಾರ್ವಜನಿಕ ಕ್ಷೇತ್ರದಲ್ಲಿ ಇರಲು ಯೋಗ್ಯರಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ದೂರು ನೀಡುವಂತೆ ಜನಶಕ್ತಿ ಸಂಘಟನೆಯ ಸಿ. ಕುಮಾರಿ ಅವರಿಗೂ ಆಗ್ರಹಿಸಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ರಮೇಶ್ ವಿರುದ್ಧ ಕಾಮೆಂಟ್ಗಳ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ. ಎಲ್ಲರು ಒಗ್ಗಟ್ಟು ಪ್ರದರ್ಶನ ಮಾಡಿ ಇವನ ಮೇಲೆ ಕಾನೂನು ಕ್ರಮ ಜರುಗಿಸೋಣ ಎಂದು ನೆಟ್ಟಿಗರೊಬ್ಬರು ಕರೆ ನೀಡಿದ್ದಾರೆ. ಇಷ್ಟೊಂದು ಕ್ರೌರ್ಯ, ಮೊದಲು ಅವರನ್ನು ಒದ್ದು ಒಳಗೆ ಹಾಕಲಿ, ಇವನು ಮನುಷ್ಯನಾ? ದುಷ್ಟನನ್ನು ಕಿತ್ತೊಗೆಯಿರಿ, ಇಂಥವರನ್ನು ಕಸಾಪ ಒಳಗೆ ಸೇರಿಸಿದ್ದು ಯಾರು? ರಣ ಹೇಡಿ, ನೀಚನಿಗೆ ಶಿಕ್ಷೆ ಆಗಲಿ ಎಂದೆಲ್ಲ ಕಾಮೆಂಟ್ ಮೂಲಕ ನೆಟ್ಟಿಗರು ರಮೇಶ್ ವಿರುದ್ಧ ಧ್ವನಿಗೂಡಿಸಿದ್ದಾರೆ.
ಚುನಾವಣಾ ಬಾಂಡ್ ಕೇಸ್: ಗಡುವು ವಿಸ್ತರಣೆ ಕೋರಿದ SBI ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ
ಗುಟ್ಟಾಗಿ 2ನೇ ಮದುವೆಯಾದ ರಾಖಿ ಸಾವಂತ್ ಮಾಜಿ ಪತಿ ಆದಿಲ್! ಯಾರು ಈ ಸೋಮಿ ಖಾನ್?