More

    ಎನ್​ಡಿಎ ವಿರುದ್ಧ ಜನಾದೇಶ- ನಿತೀಶ್ ಪ್ರಮಾಣ ವಚನ ಸ್ವೀಕಾರಕ್ಕೆ ನಾವಿಲ್ಲ- ಆರ್​ಜೆಡಿ

    ಪಟನಾ: ಬಿಹಾರ ವಿಧಾನಸಭಾ ಚುನಾವಣೆ 2020ರ ಜನಾದೇಶದ ಫಲಿತಾಂಶ ಎನ್​ಡಿಎ ಆಡಳಿತಕ್ಕೆ ವಿರುದ್ಧವಾಗಿ ಬಂದಿದೆ. ಆದರೂ ಸರ್ಕಾರ ರಚನೆ ಮಾಡುತ್ತಿದ್ದಾರೆ. ನಿತೀಶ್ ಕುಮಾರ್ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಪಕ್ಷದ ಯಾವುದೇ ನಾಯಕರು ಭಾಗಿಯಾಗುವುದಿಲ್ಲ ಎಂದು ರಾಷ್ಟ್ರೀಯ ಜನತಾದಳ (ಆರ್​ಜೆಡಿ ) ತಿಳಿಸಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಆರ್​ಜೆಡಿ, ಕೈಗೊಂಬೆ ಸರ್ಕಾರದ ಅಧಿಕಾರ ಸ್ವೀಕಾರ ಸಮಾರಂಭವನ್ನು ಆರ್​ಜೆಡಿ ಬಹಿಷ್ಕರಿಸುತ್ತದೆ. ಈ ಜನಾದೇಶ ಬದಲಾವಣೆಗೆ ಸಿಕ್ಕಿದ್ದಾಗಿತ್ತು. ಆಡಳಿತಾರೂಢ ಎನ್​ಡಿಎಗೆ ವಿರುದ್ಧವಾಗಿ ಬಂದಿತ್ತು. ಜನಾದೇಶವನ್ನು ಆಡಳಿತಾರೂಢರು ಬದಲಾಯಿಸಿದ್ದಾರೆ.

    ಇದನ್ನೂ ಓದಿ: ನಿತೀಶ್​ ಕುಮಾರ್​ ಪದಗ್ರಹಣಕ್ಕೆ ಕ್ಷಣಗಣನೆ: ಈ ಬಾರಿ ಬಿಹಾರ ಸರ್ಕಾರದಲ್ಲಿರಲಿದೆ ಹೊಸ ಬದಲಾವಣೆ

    ನಿರುದ್ಯೋಗಿಗಳನ್ನು, ಕೃಷಿಕರನ್ನು, ಗುತ್ತಿಗೆ ಕಾರ್ಮಿಕರನ್ನು, ಶಿಕ್ಷಕರನ್ನು ಕೇಳಿ ನೋಡಿ. ಅವರೆಷ್ಟು ಸಂಕಷ್ಟದಲ್ಲಿದ್ದಾರೆ ಅನ್ನೋದು ಗೊತ್ತಾಗುತ್ತೆ. ಎನ್​ಡಿಎಯ ವಂಚನೆ ಬಗ್ಗೆ ಜನರಿಗೆ ಆಕ್ರೋಶವಿದೆ. ನಾವು ಜನಪ್ರತಿನಿಧಿಗಳು, ಜನರೊಂದಿಗೆ ನಿಲ್ಲುತ್ತೇವೆ ಎಂದು ಹೇಳುತ್ತ, ಅಸಹಾಯಕ ಸರ್ಕಾರದಲ್ಲಿ ಎರಡು ಅಸಹಾಯಕ ಪಕ್ಷಗಳಿವೆ ಎಂದು ಟೀಕಿಸಿದೆ.

    ಭಾರತದ ರಾಷ್ಟ್ರೀಯ ಆಹಾರ ವೆಜ್ ಬಿರಿಯಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts