More

    ಸತ್ತೇಗಾಲದಲ್ಲಿ ಬೆಳೆಹಾನಿ ವೀಕ್ಷಣೆ

    ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಇತ್ತೀಚೆಗೆ ಬಿರುಗಾಳಿ ಸಹಿತ ಮಳೆಯಿಂದ ಹಾನಿಯಾದ ಬೆಳೆ ಹಾಗೂ ಮನೆಗಳನ್ನು ಹನೂರು ಶಾಸಕ ಎಂ.ಆರ್.ಮಂಜುನಾಥ್ ಪರಿಶೀಲಿಸಿದರು.


    ಸತ್ತೇಗಾಲ ಗ್ರಾಮ ವ್ಯಾಪ್ತಿಯ ಗೋರಿಪಾಳ್ಯ, ಅಗ್ರಹಾರ ಬೀದಿಗಳಲ್ಲಿ ಜೋರು ಗಾಳಿಗೆ ಅನೇಕ ಮನೆಗಳ ಛಾವಣಿ ಹಾರಿ ಹೋಗಿತ್ತು. ಹಾಗೇ ಗ್ರಾಮ ವ್ಯಾಪ್ತಿಯಲ್ಲಿ ಬಾಳೆ ಗಿಡಗಳು ನೆಲಕ್ಕುರುಳಿತ್ತು. ಮಾರಮ್ಮನ ದೇವಾಲಯ ಮೇಲೆ ಅರಳಿ ಮರ ಉರುಳಿ ದೇವಾಲಯ ಭಾಗಶಃ ಹಾನಿಗೊಳಾಗಾಗಿತ್ತು.
    ಈ ಹಿನ್ನಲೆ ಶನಿವಾರ ಶಾಸಕ ಎಂ.ಆರ್.ಮಂಜುನಾಥ್ ಗ್ರಾಮಕ್ಕೆ ಭೇಟಿ ನೀಡಿ, ಹಾನಿಗೊಳಗಾದ ಮನೆಗಳು ಹಾಗೂ ಬೆಳೆ ಪರಿಶೀಲಿಸಿದರಲ್ಲದೆ, ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿದ ಬಳಿಕ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.


    ಸತ್ತೇಗಾಲ ಗ್ರಾಪಂ ಅಧ್ಯಕ್ಷ ಕೆಂಪರಾಜು, ಮುಖಂಡ ಕೋಟೆ ಶಾಂತರಾಜು, ಮಂಜೇಶ್‌ಗೌಡ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts