More

    ಕಿಡ್ನಿ-ಲಿವರ್ ಮಾರಾಟಕ್ಕಿದೆ ಎಂದು ಜಾಹೀರಾತು ಫಲಕ ನೇತು ಹಾಕಿದ 50 ವರ್ಷದ ವ್ಯಕ್ತಿ: ಅಂಥ ಅನಿವಾರ್ಯತೆ ಏನು?

    ತಿರುವನಂತಪುರ: ಮನೆ ಮಾರಾಟಕ್ಕಿದೆ, ಸೈಟ್​ ಮಾರಾಟಕ್ಕಿದೆ, ತೋಟ ಮಾರಾಟಕ್ಕಿದೆ ಎಂದೆಲ್ಲ ಜಾಹೀರಾತು ಫಲಕ ನೇತು ಹಾಕುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಕಿಡ್ನಿ-ಲಿವರ್ ಮಾರಾಟಕ್ಕಿದೆ ಜಾಹೀರಾತು ಫಲಕ ನೇತು ಹಾಕಿರುವುದು ಗಮನ ಸೆಳೆದಿದೆ. ಮಾತ್ರವಲ್ಲ, ಇದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.

    ಇದನ್ನೂ ಓದಿ: ಪ್ರಿಯಕರನ ಭೇಟಿಗೆಂದು ಬಂದ ಗಗನಸಖಿ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವು; ಪರಿಚಯ-ಪ್ರೇಮವಾದ 6 ತಿಂಗಳಲ್ಲೇ ಮರಣ

    ಕೇರಳದ ತಿರುವನಂತಪುರದ 50 ವರ್ಷದ ವ್ಯಕ್ತಿ ಸಂತೋಷ್​ಕುಮಾರ್ ಎಂಬಾತ ಈ ಜಾಹೀರಾತು ಪ್ರದರ್ಶಿಸಿದ್ದಾನೆ. ಈತ ತನಗೆ ಸಂಬಂಧಿಸಿದ ವಿವಾದಿತ ಕಟ್ಟಡದಲ್ಲೇ ಈ ಫಲಕ ಹಾಕಿದ್ದು, ಅದರಲ್ಲಿ ಸಂಪರ್ಕಕ್ಕಾಗಿ ಎರಡು ಮೊಬೈಲ್​ಫೋನ್​ ನಂಬರ್​ಗಳನ್ನೂ ಹಾಕಿದ್ದಾನೆ. ಇದು ಸಾರ್ವಜನಿಕರ ಮೊಬೈಲ್​ಫೋನ್​ಗಳಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ.

    ಇದನ್ನೂ ಓದಿ: ಸರ್ಕಾರಕ್ಕೆ ಮತ್ತೊಂದು ತಲೆನೋವು; ಇನ್ನೊಂದು ಸರ್ಕಾರಿ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನ

    ಹಣ್ಣಿನ ಅಂಗಡಿ ಇಟ್ಟುಕೊಂಡಿರುವ ಸಂತೋಷ್​ ಕುಮಾರ್ ಅಲ್ಲಿ ಅತಿಯಾದ ಭಾರವನ್ನು ಎತ್ತುವಾಗ ಅವಘಡಕ್ಕೆ ಒಳಗಾಗಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಅದಕ್ಕಾಗಿ ಚಿಕಿತ್ಸೆಗೆ ದುಬಾರಿ ಖರ್ಚು ಮಾಡಬೇಕಾಗಿದೆ. ಚಿಕಿತ್ಸೆ ಖರ್ಚಿಗೆ ಬೇಕಾದ ಹಣವನ್ನು ಆಸ್ತಿ ಮಾರಿ ಹೊಂದಿಸಬೇಕು ಎಂದುಕೊಂಡ ಸಂತೋಷ್​ಗೆ ಆತನ ಸಹೋದರ ತಕರಾರು ತೆಗೆದಿದ್ದಾನೆ. ಹೀಗಾಗಿ ಆತ ಆ ಮೂಲಕ ಹಣ ಹೊಂದಿಸುವುದು ಸಾಧ್ಯವಾಗಿಲ್ಲ. ಸಂತೋಷ್​ ಪತ್ನಿ ಟ್ಯೂಷನ್​ ನೀಡಿ ಜೀವನ ನಿರ್ವಹಿಸುತ್ತಿದ್ದು, ಆಕೆಯ ಬಳಿಯೂ ಹಣವಿಲ್ಲ. ಹೀಗಾಗಿ ಕೊನೆಗೆ ಬೇರೆ ದಾರಿ ಇಲ್ಲದೆ ಆ ವಿವಾದಿತ ಕಟ್ಟಡದ ಮೇಲೇ ಕಿಡ್ನಿ-ಲಿವರ್​ ಮಾರಾಟಕ್ಕಿದೆ ಎಂಬ ಫಲಕ ಹಾಕಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts