More

    ಊಟ ಬಡಿಸಲ್ಲ ಎಂದಿದ್ದೇ ಈಕೆ ಮಾಡಿದ ತಪ್ಪಾ?

    ಜೈಪುರ: ಊಟ ಬಡಿಸಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಹೆಂಡತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಘಟನೆಯೂ ರಾವತ್​ ನಗರದ ಮಾತಾ ಕಾ ತನ್​ ಎಂಬ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯೂ ಕೊಲೆ ಮಾಡಿದ ನಂತರ ಶವದ ಜೊತೆ ರಾತ್ರಿಯಿಡಿ ಕಳೆದಿದ್ದಾನೆ.

    ಮೃತರನ್ನು ಸುಮನ್​ ಬೆನಿವಾಲ್​ ಎಂದು ಗುರುತಿಸಲಾಗಿದ್ದು, ಈಕೆಯ ಪತಿ ರಮೇಶ್​ ಬೆನಿವಾಲ್​ನನ್ನು(35) ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪ್ರಕರಣದ ಹಿನ್ನಲೆ

    ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೂರ್ವ ಡಿಸಿಪಿ ಅಮ್ರಿತಾ ದುಹಾನ್​ ರಮೇಶ್​ ಹಾಗೂ ಸುಮನ್​ ಜೋಡಿಗೆ 15 ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಯ ಮಕ್ಕಳಿಬ್ಬರನ್ನು ಹಾಸ್ಟೆಲ್​ನಲ್ಲಿ ಬಿಡಲಾಗಿತ್ತು. ಶನಿವಾರ ರಮೇಶ್​ ಹಾಗೂ ಸುಮನ್​ ನಡುವೆ ಉಟ ಬಡಿಸಲಿಲ್ಲ ಎಂಬ ಕಾರಣಕ್ಕೆ ಗಲಾಟೆಯಾಗಿದೆ.

    ಇದನ್ನೂ ಓದಿ: ವರುಣನ ಆರ್ಭಟಕ್ಕೆ ತತ್ತರಿಸಿದ ಗುಜರಾತ್​; ಪ್ರವಾಹದಲ್ಲಿ ಕೊಚ್ಚಿಹೋದ ವಾಹನ, ಜಾನುವಾರುಗಳು

    ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ರಮೇಶ್​ ಸುಮನ್​ ತಲೆಗೆ ಕಲ್ಲಿನಿಂದ ಹೊಡೆದಿದ್ದು, ಬಳಿಕ ಆಕೆಯನ್ನು ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ಈ ವಿಚಾರವನ್ನು ಪತ್ನಿಯ ಸಹೋದರನಿಗೆ ಕರೆ ಮಾಡಿ ತಿಳಿಸಿ ಶವದ ಜೊತೆ ರಾತ್ರಿಯಿಡಿ ಕಳೆದಿದ್ದಾನೆ.

    ಸಹೋದರಿಯನ್ನು ಕೊಂದ ವಿಚಾರ ತಿಳಿದ ಆಕೆಯ ಸಹೋದರ ಕೂಡಲೇ ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ನೀಡಿದ್ಧಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿ ಹಾಗೂ ಕೊಲೆ ಮಾಡಿದ ಆಯುಧವನ್ನು ವಶಕ್ಕೆ ಪಡೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೂರ್ವ ಡಿಸಿಪಿ ಅಮ್ರಿತಾ ದುಹಾನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts