ತಮಿಳುನಾಡು: ತೀವ್ರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಕಾಲ್ನಡಿಗೆಯಲ್ಲೇ 15 ಕಿ.ಮೀ ದೂರ ಹೆಗಲ ಮೇಲೆ ಹೊತ್ತುಕೊಂಡು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ತಿರುಪ್ಪೂರ್ನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಬ್ಯೂಟಿ ಸಲೂನ್ಗಳನ್ನು ಮುಚ್ಚುವಂತೆ ತಾಲಿಬಾನ್ ಆದೇಶ; ಬೀದಿಗಿಳಿದ ಮಹಿಳೆಯರು
ತಮಿಳುನಾಡಿನ ತಿರುಪ್ಪೂರ್ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ತಲುಪಲು ರಸ್ತೆ ಸರಿಯಾಗಿ ಇಲ್ಲದ ಕಾರಣ, ತೀವ್ರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಕುರುಮಲೈನ ಬುಡಕಟ್ಟು ವಸಾಹತು ಪ್ರದೇಶದ ಗ್ರಾಮಸ್ಥರು, ಬೊಂಬಿಗೆ ಬಟ್ಟೆಯನ್ನು ಕಟ್ಟಿ ಅದರೊಳಗೆ ಅವರನ್ನು ಮಲಗಿಸಿ, ತಮ್ಮ ಹೆಗಲ ಮೇಲೆ ಹೊತ್ತು ಸುಮಾರು ಮೂರು ಗಂಟೆಗಳ ಕಾಲ ಕೇವಲ ಕಾಲ್ನಡಿಗೆಯಲ್ಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಿದ್ದಾರೆ.
ಉಡುಮಲಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಪಳನಿಸ್ವಾಮಿ ಎಂಬ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ತಿರುಪ್ಪೂರ್ ಕಲೆಕ್ಟರ್ ಟಿ.ಕ್ರಿಸ್ತರಾಜ್, “ಈ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸುವ ಕೆಲಸ ಈಗಾಗಲೇ ನಡೆಯುತ್ತಿದೆ. ರಸ್ತೆ ನಿರ್ಮಾಣಕ್ಕೆ ಉಪವಿಭಾಗೀಯ ಸಮಿತಿ ಮತ್ತು ಜಿಲ್ಲಾ ಮಟ್ಟದ ಸಮಿತಿಯಿಂದ ಅನುಮತಿ ನೀಡಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ತಂದೆ-ಮಗಳ ನಡುವೆ ಗಲಾಟೆ; ಗುದ್ದಲಿಯಿಂದ ಅಪ್ಪನ ತಲೆಗೆ ಹೊಡೆದು ಪ್ರಾಣ ತೆಗದಳು
ಘಟನೆ ಬಗ್ಗೆ ಮಾತನಾಡಿದ ಉಡುಮಲಪೇಟೆಯ ಅಧಿಕಾರಿಗಳು, “ಕುರುಮಲೈ ಗುಡ್ಡಗಾಡು ಪ್ರದೇಶಗಳಲ್ಲಿ ಕಡಿದಾದ ಭೂಪ್ರದೇಶದ ಕಾರಣ ರಸ್ತೆ ಸೌಕರ್ಯವಿಲ್ಲ. ಈ ಕಾರಣದಿಂದಾಗಿ ಗ್ರಾಮಸ್ಥರು ಪಳನಿಸ್ವಾಮಿಯನ್ನು ಬಟ್ಟೆಯ ತೊಟ್ಟಿಲಲ್ಲಿ ಹೊತ್ತು, ಸುಮಾರು ಮೂರು ಗಂಟೆಗಳ ಕಾಲ ನಡೆದುಕೊಂಡು ಆಸ್ಪತ್ರೆ ತಲುಪುವಂತ ಪರಿಸ್ಥಿತಿ ಎದುರಾಯಿತು” ಎಂದು ಹೇಳಿದರು,(ಏಜೆನ್ಸೀಸ್).
ಸೂರ್ಯ ನಟನೆಯ ‘ಕಂಗುವ’ ಚಿತ್ರದ ಮಾಸ್ ಪೋಸ್ಟರ್ಗೆ ಫ್ಯಾನ್ಸ್ ಫಿದಾ; ಹೊಸ ಅಪ್ಡೇಟ್ ಕೊಟ್ಟ ಚಿತ್ರತಂಡ