ಪುಣೆ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದಾಗ ವಾಹನವನ್ನು ನಿಲ್ಲಿಸಿದ ಎಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸಿನ ಕೈಯನ್ನು ಕಚ್ಚಿ, ಬೆದರಿಕೆ ಹಾಕಿರುವ ಪ್ರಸಂಗ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ. ಈ ರೀತಿ ವರ್ತಿಸಿದ 29 ವರ್ಷ ವಯಸ್ಸಿನ ಮಂಗೇಶ್ ಶಮಾಕಾಂತ್ ಕಾಳೆ ಎಂಬುವ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತ ಕಾಳೆ, ಸೋಮವಾರ(ಸೆ.20) ಮಧ್ಯರಾತ್ರಿ ಎರಂಡ್ವಾನಾ ಪ್ರದೇಶದಲ್ಲಿ ತೆರಳುತ್ತಿದ್ದಾಗ ಪೊಲೀಸ್ ಸಿಬ್ಬಂದಿಯಾದ ಪರಮೇಶ್ವರ್ ಪದಳೆ ಎಂಬುವರು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಗಾಡಿ ನಿಲ್ಲಿಸಿದರು. ಆಗ ಕೋಪಗೊಂಡು ಅವರ ಮೇಲೆ ಕಲ್ಲೆಸೆದು, ಕೈಯನ್ನು ಕಚ್ಚಿದ್ದ ಆರೋಪಿ, ಕರ್ತವ್ಯನಿರತ ಪೊಲೀಸಿಗೆ ಬೆದರಿಕೆ ಕೂಡ ಹಾಕಿದ ಎನ್ನಲಾಗಿದೆ. ಡೆಕ್ಕನ್ ಜಿಮ್ಖಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)
“ಕೂಸಿಗೆ ಡೈಪರ್ ಬದಲಿಸುವುದಕ್ಕೂ ಹೆಚ್ಚು ಬಾರಿ ಆಟಗಾರರನ್ನ ಬದಲಾಯಿಸ್ತಾರೆ”