More

    ಅಪ್ಪನಿಗೆ ಹೊಡೆದವರನ್ನು ಮಕ್ಕಳು ಬಡಿದು ಕೊಂದರು; ಅಮಲಿನಲ್ಲಿ ನಡೆದಿದ್ದು ಕೊಲೆಯಲ್ಲಿ ಕೊನೆಗೊಂಡಿತು!

    ಬೆಂಗಳೂರು: ಮದ್ಯದ ಅಮಲಿನಲ್ಲಿ ಗಲಾಟೆಗಳು ನಡೆಯುವುದು ಸರ್ವೇಸಾಮಾನ್ಯ. ಆದರೆ ಪಾನಮತ್ತರ ನಡುವೆ ನಡೆದ ಈ ಗಲಾಟೆ ಕೊಲೆಯಲ್ಲಿ ಕೊನೆಗೊಂಡಿದೆ. ಅಷ್ಟಕ್ಕೂ ಆತ ಸ್ನೇಹಿತನ ಮಕ್ಕಳಿಂದಲೇ ಕೊಲೆಯಾದ ಅಪರೂಪದ ಪ್ರಕರಣವೊಂದು ಬೆಂಗಳೂರಿನಲ್ಲಿ ವರದಿಯಾಗಿದೆ.

    ಇರ್ಫಾನ್​ ಎಂಬಾತ ಕೊಲೆಗೀಡಾಗಿದ್ದು, ಆತನ ಸ್ನೇಹಿತ ಗೋಪಿ ಎಂಬಾತನ ಮಕ್ಕಳೇ ಆರೋಪಿಗಳು. ಬೆಂಗಳೂರಿನ ವಿವೇಕನಗರದ ನೀಲಸಂದ್ರದಲ್ಲಿ ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಬುಧವಾರ ರಾತ್ರಿ ಇರ್ಫಾನ್​, ಗೋಪಿ ಹಾಗೂ ಪುನೀತ್ ಎಂಬವರು ಜೊತೆಯಾಗಿ ಮದ್ಯಪಾನ ಮಾಡುತ್ತ ಕುಳಿತಿದ್ದರು. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಇವರ ಮಧ್ಯೆ ಗಲಾಟೆ ನಡೆದಿದೆ. ಸಿಟ್ಟಿನ ಭರದಲ್ಲಿ ಗೋಪಿ ಮತ್ತು ಪುನೀತ್ ಮೇಲೆ ಇರ್ಫಾನ್​ ಹಲ್ಲೆ ಮಾಡಿದ್ದ. ಇದು ಕೆಲವೇ ಕ್ಷಣಗಳಲ್ಲಿ ಗೋಪಿಯ ಪುತ್ರರಿಗೂ ತಿಳಿದಿದ್ದರಿಂದ ಪ್ರಕರಣ ವಿಕೋಪಕ್ಕೆ ತೆರಳಿತ್ತು.

    ಇದನ್ನೂ ಓದಿ: ವೀರ್ಯ ಉತ್ಪತ್ತಿಯಾಗದಿದ್ದರೆ ವೆರಿಕೋಸ್​ ಕೂಡ ಕಾರಣವಾಗಿರಬಹುದು, ನೋಡಿ…

    ತಂದೆ ಗೋಪಿಗೆ ಇರ್ಫಾನ್ ಹೊಡೆದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪುತ್ರರು, ಇರ್ಫಾನ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹೊಡೆತದ ತೀವ್ರತೆಗೆ ಇರ್ಫಾನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ತಕ್ಷಣವೇ ಇರ್ಫಾನ್​​ನನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕುಳಿಯಲಿಲ್ಲ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ವಿವೇಕನಗರ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

    ಪ್ರೀತಿಗೆ ಒಲ್ಲೆ ಎಂದವಳನ್ನು ಕೊಂದಿದ್ದ ಪಾಗಲ್​ ಪ್ರೇಮಿ ನೇಣಿಗೆ ಶರಣು! ಕೊಲೆಗಡುಕನನ್ನು ಸಾವಿನಿಂದ ರಕ್ಷಿಸಿದ್ದ ಮೃತಳ ಚಿಕ್ಕಪ್ಪ!

    ತನ್ನಿಂದ ಗರ್ಭಿಣಿಯಾದ ಬಾಲಕಿಯನ್ನು ಮದ್ವೆಯಾಗ್ತೇನೆಂದ ವಿವಾಹಿತ- ಅಮ್ಮನ ಸಮ್ಮತಿ; ಕೋರ್ಟ್​ ನೀಡಿತು ಜಾಮೀನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts