ಮುಂಬೈ: ಪ್ರೀತಿಯಿಂದ ಸಾಕಿದ್ದ ತಂಗಿಗೆ ಆಕೆಯ ಮಾಜಿ ಪ್ರೇಮಿ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಕಾರಣಕ್ಕೆ ಅಣ್ಣ ಕಾನೂನನ್ನು ಕೈಗೆ ತೆಗೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ: ಆತನ ಹೊಟ್ಟೆಯೊಳಗಿತ್ತು 4 ಕೋಟಿ ಮೌಲ್ಯದ ಡ್ರಗ್ಸ್! ಕಳ್ಳಸಾಗಣೆಗೆ ಬೇರೆಯದ್ದೇ ಮಾರ್ಗ ಕಂಡುಕೊಂಡ ಕದೀಮರು!
ಥಾಣೆಯ ದೀಪಕ್ ಮಹಂಕಲ್ ಹೆಸರಿನ ಆರೋಪಿಯ ತಂಗಿ ಮಂಗೇಶ್ ಕೇದಾರ್ ಹೆಸರಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಬಂದಿದ್ದು ಪ್ರೀತಿ ಮುರಿದುಬಿದ್ದಿದೆ. ಅಷ್ಟಾದರೂ ಮಂಗೇಶ್ ಯುವತಿಯನ್ನು ಸುಮ್ಮನೆ ಬಿಟ್ಟಿಲ್ಲ. ಆಗಾಗ ಕರೆ ಮಾಡಿ ಕಿರುಕುಳ ನೀಡುತ್ತಿದ್ದನಂತೆ. ಈ ರೀತಿ ಮಂಗೇಶ್ ತನ್ನ ತಂಗಿಗೆ ಕಾಡಿಸುತ್ತಿರುವ ವಿಚಾರ ದೀಪಕ್ಗೆ ತಿಳಿದುಬಂದಿದೆ. ಮಂಗೇಶ್ಗೆ ಬುದ್ಧಿ ಕಲಿಸುವ ನಿರ್ಧಾರವನ್ನು ಆತ ಮಾಡಿದ್ದಾನೆ.
ಮಂಗೇಶ್ ಡಿಸೆಂಬರ್ 31ರಂದು ಕುಟುಂಬದೊಂದಿಗೆ ಇರದೆ ತನ್ನ ಇನ್ನೊಂದು ಮಲಗುವ ನಿರ್ಧಾರ ಮಾಡಿದ್ದು, ಅಲ್ಲಿಗೆ ಹೋಗಿದ್ದಾನೆ. ಆ ದಿನದಂದು ಹೊಂಚು ಹಾಕಿ ಮಂಗೇಶ್ನ ಹಿಂದೆ ಹೋದ ದೀಪಕ್ ಕಲ್ಲಿನಿಂದ ಆತನಿಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಮನೆಗೆ ವಾಪಾಸು ಬಂದಿದ್ದಾನೆ. ಇತ್ತ ಮಂಗೇಶ್ ಎಷ್ಟು ಹೊತ್ತಾದರೂ ಮನೆಗೆ ವಾಪಾಸು ಬರದಿದ್ದನ್ನು ಕಂಡು ಗಾಬರಿಗೊಂಡ ಕುಟುಂಬ ಮತ್ತೊಂದು ಮನೆಗೆ ತೆರಳಿ ನೋಡಿದಾಗ ಅಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ.
ಇದನ್ನೂ ಓದಿ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: 200 ಕ್ವಿಂಟಾಲ್ ಜೋಳ ಸುಟ್ಟ ದುಷ್ಕರ್ಮಿಗಳು
ಕೊಲೆ ಮಾಡಿ ಬಂದ ದೀಪಕ್ ಸುಮ್ಮನೆ ಕುಳಿತಿಲ್ಲ. ನಾನು ಕೊಲೆ ಮಾಡಿದೆ, ಇನ್ನು ನನ್ನ ತಂಗಿಗೆ ತೊಂದರೆಯಿಲ್ಲ ಎಂದು ನೆರೆಮನೆಯರ ಬಳಿ ಹೇಳಿಕೊಂಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಲು ನೋಡಿದ್ದಾನೆ. ಆದರೆ ಅಷ್ಟರಲ್ಲಾಗಲೇ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ದೀಪಕ್ ಬಳಿ ಬಂದಿದ್ದು, ಆತನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. (ಏಜೆನ್ಸೀಸ್)
ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ
ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ