ಬೆಂಗಳೂರು: ಜೆಡಿಎಸ್ಗೆ ಮತ ನೀಡಿದರೆ ಅದು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದಂತೆ, ಅದರ ಬದಲು ಬಿಜೆಪಿಗೇ ಮತ ಹಾಕಿ ಬಹುಮತದಿಂದ ಗೆಲ್ಲಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಕರೆ ನೀಡಿದ್ದಾರೆ. ದೇವನಹಳ್ಳಿಯಲ್ಲಿ ಇಂದು ವಿಜಯ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇದನ್ನೂ ಓದಿ: ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿ, ಬೈಕ್ ಸವಾರ ಸಾವು; ಅಪಘಾತದ ಬಗ್ಗೆ ತಿಳಿದೂ ಹಾಗೇ ಹೋದ್ರಾ ಹೋಂ ಮಿನಿಸ್ಟರ್?
ಜನರು ಜೆಡಿಎಸ್ಗೆ ಮತ ನೀಡಿದರೆ ಅದು ಕೆಲವೇ ಕೆಲವು ಸ್ಥಾನಗಳಲ್ಲಿ ಗೆದ್ದು, ಕಾಂಗ್ರೆಸ್ಗೆ ಬೆಂಬಲ ನೀಡುತ್ತದೆ. ಇದರಿಂದ ಮತ್ತೆ ಭ್ರಷ್ಟಾಚಾರಿ ಜೆಡಿಎಸ್-ಕಾಂಗ್ರೆಸ್ಗಳು ಅಧಿಕಾರಕ್ಕೆ ಬಂದಂತಾಗುತ್ತದೆ. ಅದರ ಬದಲು ಬಿಜೆಪಿಯನ್ನೇ ಇನ್ನೊಮ್ಮೆ ನಂ. 1 ಆಗಿಸುವಂತೆ ಗೆಲ್ಲಿಸಿ, ನಾವು ಕರ್ನಾಟಕವನ್ನು ಭಾರತದಲ್ಲೇ ನಂ. 1 ಮಾಡುತ್ತೇವೆ ಎಂಬುದಾಗಿ ಹೇಳಿದರು.
ಇದನ್ನೂ ಓದಿ: ಟ್ರಾಫಿಕ್ ಫೈನ್, ಮತ್ತೆ 50% ಆಫರ್: ಎಷ್ಟು ದಿನಗಳವರೆಗೆ ಅವಕಾಶ?
ಎಫ್ಡಿಐನಲ್ಲಿ ನಂಬರ್ ಒನ್ ಇರುವ ಬಿಜೆಪಿಯನ್ನು ಗೆಲ್ಲಿಸುತ್ತೀರೋ ಇಲ್ಲ ಭ್ರಷ್ಟಾಚಾರದಲ್ಲಿ ನಂ. 1 ಇರುವ ಕಾಂಗ್ರೆಸ್-ಬಿಜೆಪಿಗೆ ಮತ ನೀಡುತ್ತೀರೋ ಯೋಚಿಸಿ. ಏವಿಯೇಷನ್-ಸ್ಪೇಸ್ ಟೆಕ್ನಾಲಜಿಯಲ್ಲಿ ನಂ. 1 ಇರುವ ಬಿಜೆಪಿಯನ್ನು ಗೆಲ್ಲಿಸುತ್ತೀರೋ ತಂತಮ್ಮ ಪರಿವಾರವನ್ನು ನಂ. 1 ಮಾಡುವ ಜೆಡಿಎಸ್-ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತೀರೋ ಚಿಂತಿಸಿ. ಯುನಿಕಾರ್ನ್ ಸ್ಟಾರ್ಟಪ್ಗಳಲ್ಲಿ ನಂ. 1 ಆಗಿಸುವ ಬಿಜೆಪಿಗೆ ಮತ ನೀಡುತ್ತೀರೋ ಇಲ್ಲ ಕುಟುಂಬದ ಪ್ರತಿಯೊಬ್ಬರಿಗೆ ಟಿಕೆಟ್ ನೀಡುವ ಜೆಡಿಎಸ್ಗೆ ಮತ ನೀಡುತ್ತೀರೋ ಯೋಚನೆ ಮಾಡಿ. ಪಿಎಫ್ಐ ಬ್ಯಾನ್ ಮಾಡುವ ಬಿಜೆಪಿಗೆ ವೋಟ್ ನೀಡುತ್ತಿರೋ ಇಲ್ಲ ಭಯೋತ್ಪಾದನೆಗೆ ಬೆಂಬಲ ನೀಡುವ ಕಾಂಗ್ರೆಸ್ಗೆ ಮತ ನೀಡುತ್ತೀರೋ ಯೋಚಿಸಿ ಎಂದ ಷಾ, ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಕೇಳಿಕೊಂಡರು. ಆ ಮೂಲಕ ಮೋದಿ-ಬೊಮ್ಮಾಯಿ ಕೈ ಬಲಪಡಿಸುವಂತೆ ಮನವಿ ಮಾಡಿಕೊಂಡರು.
ಕಲ್ಯಾಣ ಮಂಟಪದಲ್ಲೇ ಕುಸಿದು ಬಿದ್ದ ವರ; ಆಸ್ಪತ್ರೆಯ ಮಾರ್ಗಮಧ್ಯೆ ಸಾವು