More

    ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧ

    ಹೊರ್ತಿ: ನಾಗಠಾಣ ಮತಕ್ಷೇತ್ರದ ಎಲ್ಲಾ ಗ್ರಾಮಗಳ ರಸ್ತೆಗಳನ್ನೂ ಸಂಪೂರ್ಣ ಡಾಂಬರೀಕರಣಗೊಳಿಸಲಾಗುತ್ತಿದೆ. ಜೊತೆಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ ಎಂದು ನಾಗಠಾಣ ಕ್ಷೇತ್ರದ ಶಾಸಕ ಡಾ. ದೇವಾನಂದ ಚವ್ಹಾಣ ಹೇಳಿದರು.
    ಮತಕ್ಷೇತ್ರದ ವ್ಯಾಪ್ತಿಯ ಮಕಣಾಪುರ ಗ್ರಾಮದಲ್ಲಿ 250.00 ಲಕ್ಷ ರೂ.ಗಳ ವೆಚ್ಚದ ಅನುದಾನದಲ್ಲಿ ಮಕಣಾಪುರ-ಕನ್ನೂರ ಶಾಂತಿಕುಟೀರ ಸಂಪರ್ಕ ರಸ್ತೆಗೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಭರವಸೆಯಂತೆ ಅವರ ಋಣ ತೀರಿಸುವ ಕಾರ್ಯವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇನೆ. ಹಂತಹಂತವಾಗಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
    ಇದೇ ಸಂದರ್ಭದಲ್ಲಿ ಕರ್ನಾಟಕ ಗ್ರಾಮಿಣ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಅನುದಾನದಲ್ಲಿ ರೂ. 478.33 ಲಕ್ಷ ರೂ.ಗಳ ವೆಚ್ಚದಲ್ಲಿ ಜುಮನಾಳದಿಂದ ಖತಿಜಾಪುರದವರೆಗಿನ ರಸ್ತೆ ಡಾಂಬರೀಕರಣಕ್ಕೂ ಚಾಲನೆ ನೀಡಿದರು.
    ಮುಖಂಡರಾದ ರಾಜು ಹಳ್ಳಿ, ಗ್ರಾಮಸ್ಥರಾದ ಹಣಮಂತಗೌಡ ಬಿರಾದಾರ, ಗೋಪಾಲ ಮಾದರ, ಸಂಗು ಹೊನ್ನುಟಗಿ, ಮುದುಕಣ್ಣ ಸಾರವಾಡ, ದಿಲೀಪ ಚವ್ಹಾಣ, ಆತ್ಮಾನಂದ ದೊಡ್ಡಮನಿ, ಡಿ.ಎಲ್. ಚವ್ಹಾಣ, ತಾ.ಪಂ. ಅಧ್ಯಕ್ಷ ಕಾಳಪ್ಪ ಬೆಳ್ಳುಂಡಗಿ, ಪ್ರಕಾಶ ಇಚ್ಚೂರ, ಕೆಂದೂಳಿ ಗೊಜ್ಜಿ, ದೇವೆಂದರ ರಾಠೊಡ, ಕಾಮಣ್ಣಗೌಡರು, ಮಲ್ಲಿಕಾರ್ಜುನ ಬರಕಾಡೆ, ಶಿವಾನಂದ ಬಂಡಿ ಇತರರಿದ್ದರು.

    ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts