More

    ಕುಡಿದ ಮತ್ತಿನಲ್ಲಿ ರಸ್ತೆ ಅಂದುಕೊಂಡು ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿದವನಿಗೆ ಕಾದಿತ್ತು ಶಾಕ್​!

    ಕಣ್ಣೂರು: ಕುಡಿದ ಮತ್ತಿನಲ್ಲಿ ರಸ್ತೆ ಅಂದುಕೊಂಡು ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ವ್ಯಕ್ತಿಯನ್ನು ಕಣ್ಣೂರು ನಗರ ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಜಯಪ್ರಕಾಶ್​ ಎಂದು ಗುರುತಿಸಲಾಗಿದೆ. ಈತ ಕೇರಳದ ಅಂಚರಕಂಡಿ ಮೂಲದ ನಿವಾಸಿ. ಥಾಜೆ ಛೋವಾ ರೈಲ್ವೆ ಗೇಟ್​ ಬಳಿ ಸುಮಾರು 15 ಮೀಟರ್​ ದೂರ ಹಳಿ ಮೇಲೆಯೇ ಕಾರು ಚಲಾಯಿಸಿದ್ದಾನೆ. ಈ ವೇಳೆ ಕಾರು, ಹಳಿಗಳ ನಡುವೆ ಸಿಲುಕಿದ ಪರಿಣಾಮ ಸ್ಥಳದಲ್ಲಿಯೇ ಆಫ್​ ಆಯಿತು.

    ಇದನ್ನೂ ಓದಿ: ಉಕ್ಕೇರಿದ ಕಾಗಿಣಾ-ಮುಲ್ಲಾಮಾರಿ ; ಮಳಖೇಡ ಸೇತುವೆ ಮುಳುಗಿ ಕಲಬುರಗಿ -ಸೇಡಂ ಸಂಚಾರ ಬಂದ್

    ರೈಲ್ವೆ ಗೇಟ್​ ಕೀಪರ್​ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಳಿಗಳ ನಡುವೆ ಸಿಲುಕಿದ್ದ ಕಾರನ್ನು ತೆಗೆದು, ಚಾಲಕ ಜಯಪ್ರಕಾಶ್​ನನ್ನು ಸ್ಥಳದಲ್ಲಿಯೇ ಬಂಧಿಸಿ, ಠಾಣೆಗೆ ಕರೆದೊಯ್ದರು.

    ಬಂಧಿಸಿದ ಕೆಲವೇ ಗಂಟೆಗಳಲ್ಲಿ ಜಯಪ್ರಕಾಶ್​ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ, ಆತನ ಕಾರನ್ನು ಬಿಡುಗಡೆ ಮಾಡದೇ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. (ಏಜೆನ್ಸೀಸ್​)

    ಬಾಗಿಲು ಬಡಿದ ಮೂವರು ಕಿಡಿಗೇಡಿಗಳು; ಹೊರಬಂದ ಮನೆ ಮಾಲೀಕನ ಮೇಲೆ ಗುಂಡಿನ ದಾಳಿ!

    ಈ ಮಹಿಳೆ, ಅಧ್ಯಕ್ಷರಾದದ್ದು ಪ್ರಧಾನಿ ಮೋದಿಯಂತೆ ಚಹಾ ಮಾರಿ!

    Heavy Rain All Over Karnataka | ರಾಜ್ಯದ ಹಲವೆಡೆ ವರುಣನ ಆರ್ಭಟ; ಜನಜೀವನ ಅಸ್ತವ್ಯಸ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts