ಕಣ್ಣೂರು: ಕುಡಿದ ಮತ್ತಿನಲ್ಲಿ ರಸ್ತೆ ಅಂದುಕೊಂಡು ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ವ್ಯಕ್ತಿಯನ್ನು ಕಣ್ಣೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಈತ ಕೇರಳದ ಅಂಚರಕಂಡಿ ಮೂಲದ ನಿವಾಸಿ. ಥಾಜೆ ಛೋವಾ ರೈಲ್ವೆ ಗೇಟ್ ಬಳಿ ಸುಮಾರು 15 ಮೀಟರ್ ದೂರ ಹಳಿ ಮೇಲೆಯೇ ಕಾರು ಚಲಾಯಿಸಿದ್ದಾನೆ. ಈ ವೇಳೆ ಕಾರು, ಹಳಿಗಳ ನಡುವೆ ಸಿಲುಕಿದ ಪರಿಣಾಮ ಸ್ಥಳದಲ್ಲಿಯೇ ಆಫ್ ಆಯಿತು.
ಇದನ್ನೂ ಓದಿ: ಉಕ್ಕೇರಿದ ಕಾಗಿಣಾ-ಮುಲ್ಲಾಮಾರಿ ; ಮಳಖೇಡ ಸೇತುವೆ ಮುಳುಗಿ ಕಲಬುರಗಿ -ಸೇಡಂ ಸಂಚಾರ ಬಂದ್
ರೈಲ್ವೆ ಗೇಟ್ ಕೀಪರ್ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಳಿಗಳ ನಡುವೆ ಸಿಲುಕಿದ್ದ ಕಾರನ್ನು ತೆಗೆದು, ಚಾಲಕ ಜಯಪ್ರಕಾಶ್ನನ್ನು ಸ್ಥಳದಲ್ಲಿಯೇ ಬಂಧಿಸಿ, ಠಾಣೆಗೆ ಕರೆದೊಯ್ದರು.
ಬಂಧಿಸಿದ ಕೆಲವೇ ಗಂಟೆಗಳಲ್ಲಿ ಜಯಪ್ರಕಾಶ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ, ಆತನ ಕಾರನ್ನು ಬಿಡುಗಡೆ ಮಾಡದೇ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. (ಏಜೆನ್ಸೀಸ್)
ಬಾಗಿಲು ಬಡಿದ ಮೂವರು ಕಿಡಿಗೇಡಿಗಳು; ಹೊರಬಂದ ಮನೆ ಮಾಲೀಕನ ಮೇಲೆ ಗುಂಡಿನ ದಾಳಿ!
ಈ ಮಹಿಳೆ, ಅಧ್ಯಕ್ಷರಾದದ್ದು ಪ್ರಧಾನಿ ಮೋದಿಯಂತೆ ಚಹಾ ಮಾರಿ!
Heavy Rain All Over Karnataka | ರಾಜ್ಯದ ಹಲವೆಡೆ ವರುಣನ ಆರ್ಭಟ; ಜನಜೀವನ ಅಸ್ತವ್ಯಸ್ತ