ಬೆಂಗಳೂರು: ಹಾರ್ಟ್ ಅಟ್ಯಾಕ್, ಪ್ಯಾರಾಲೈಸಿಸ್ ಇಲ್ಲವೇ ಸ್ಟ್ರೋಕ್ ಉಂಟಾದರೆ ಲಕ್ಷಾಂತರ ರೂಪಾಯಿಗಳನ್ನು ಚಿಕಿತ್ಸೆ ಖರ್ಚು ಮಾಡಬೇಕಾಗುತ್ತದೆ. ಆದರೂ, ಈ ಕಾಯಿಲೆಗಳು ಸಂಪೂರ್ಣ ವಾಸಿಯಾಗುತ್ತವೆ ಎಂದು ಹೇಳಲಾಗದು. ಆದರೆ, ಈ ಕಾಯಿಲೆಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಸುಲಭದ ವಿಧಾನವೊಂದಿದೆ. ಇದಕ್ಕಾಗಿ ನೀವು ಖರ್ಚು ಮಾಡಬೇಕಾಗಿರುವುದು ಒಂದು ದಿನಕ್ಕೆ ಒಂದು ರೂಪಾಯಿ ಮಾತ್ರ.
ಹಾರ್ಟ್ ಅಟ್ಯಾಕ್, ಪ್ಯಾರಾಲೈಸಿಸ್ (ಪಾರ್ಶ್ವ ವಾಯು) ಉಂಟಾಗಲು ಮುಖ್ಯ ಕಾರಣ ನಮ್ಮ ರಕ್ತನಾಳಗಳಲ್ಲಿ ಬ್ಲಾಕೇಜ್ ಆಗುವುದು. ಪೈಪ್ನಲ್ಲಿ ನೀರು ಸರಾಗವಾಗಿ ಹೋಗುತ್ತಿದ್ದರೆ ಏನೂ ಸಮಸ್ಯೆ ಇರುವುದಿಲ್ಲ. ಆದರೆ, ಪೈಪ್ನಲ್ಲಿ ಏನಾದರೂ ಸಿಕ್ಕಿಹಾಕಿಕೊಂಡು ಬ್ಲಾಕೇಜ್ ಉಂಟಾದರೆ ನೀರು ಸರಾಗವಾಗಿ ಹರಿದುಹೋಗುವುದಿಲ್ಲ. ಅದೇ ರೀತಿ ನಮ್ಮ ರಕ್ತನಾಳಗಳಲ್ಲಿ ಬ್ಲಾಕೇಜ್ ಉಂಟಾದರೆ ರಕ್ತ ಚಲನೆ ಸರಾಗವಾಗಿ ಆಗುವುದಿಲ್ಲ. ಈ ರೀತಿಯಾದರೆ ಹಾರ್ಟ್ ಅಟ್ಯಾಕ್, ಪಾರ್ಶ್ವ ವಾಯು ಸಮಸ್ಯೆಗಳು ತಲೆದೋರುತ್ತದೆ.
ಈ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸುಲಭದ ವಿಧಾನವಿದೆ. ನಿಂಬೆ ಹಣ್ಣು ಮತ್ತು ಬೆಳ್ಳುಳ್ಳಿ ಇದಕ್ಕೆ ಸಾಕು. ನಮ್ಮ ರಕ್ತ ಚಲನೆ ಸರಾಗ ಮಾಡುವ ಸಾಮರ್ಥ್ಯ ಈ ಎರಡು ಪದಾರ್ಥಗಳಲ್ಲಿದೆ. ನಿಂಬೆ ರಸ, ಬೆಳ್ಳುಳ್ಳಿಗಳಲ್ಲಿ ರಕ್ತಗಳನ್ನು ತಿಳಿಗೊಳಿಸುವ ಶಕ್ತಿ ಇರುವುದರಿಂದ ದೇಹದಲ್ಲಿ ರಕ್ತ ಸರಾಗವಾಗಿ ಹರಿದುಹೋಗಲು ಸಹಾಯವಾಗುತ್ತದೆ.
ಈ ಎರಡೂ ಪದಾರ್ಥಗಳನ್ನು ಬಳಸಿಕೊಂಡು ಮನೆ ಮದ್ದನ್ನು ತಯಾರಿಸುವ ವಿಧಾನ ಹೀಗಿದೆ.
ಎರಡು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಸಿಪ್ಪೆ ತೆಗೆಯಬೇಕು. ಇದನ್ನು ಕೈಯಲ್ಲಿ ಚೆನ್ನಾಗಿ ಉಜ್ಜಿ ಲೋಟಕ್ಕೆ ಹಾಕಿಕೊಳ್ಳಬೇಕು. ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸ ಹಿಂಡಿಕೊಳ್ಳಬೇಕು. ನಂತರ ಒಂದು ಗ್ಲಾಸ್ ನೀರನ್ನು ಬೆರೆಸಿ ಕಲಬೇಕು. ಈ ನಿಂಬೆ-ಬೆಳ್ಳುಳ್ಳಿ ರಸವನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ರೀತಿ ವಾರದಲ್ಲಿ ಕನಿಷ್ಠ ಮೂರು ದಿನ ಮಾಡಬೇಕು.
ನಿಮ್ಮ ರಕ್ತ ನಾಳಗಳಲ್ಲಿ ಏನಾದರೂ ಬ್ಲಾಕೇಜ್ ಇದ್ದರೆ ಈ ರಸ ಅದನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೆ, ರಕ್ತವನ್ನು ಕೂಡ ತಿಳಿಗೊಳಿಸುತ್ತದೆ. ಈ ಮೂಲಕ ರಕ್ತವು ಸರಾಗವಾಗಿ ಸಂಚರಿಸಲು ಅನುಕೂಲವಾಗುತ್ತದೆ. ಇದನ್ನು ಮಾಡುವ ಮೂಲಕ ಜೀವನಪೂರ್ತಿ ಹಾರ್ಟ್ ಅಟ್ಯಾಕ್, ಸ್ಟ್ರೋಕ್, ಪ್ಯಾರಾಲೈಸಿಸ್ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ.‘
ಎನ್ಸಿಎಲ್ಟಿ ನಿರ್ಧಾರದಿಂದ ರಿಲೀಫ್: ಐಟಿ ಕಂಪನಿ ಖರೀದಿಸಲು ಮುಂದಾಗಿದ್ದಾರೆ ಬಾಬಾ ರಾಮದೇವ್