ಮಾಡೆಲಿಂಗ್ ಮತ್ತು ಸಿನಿಮಾ ನೆಪದಲ್ಲಿ ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳುವುದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗ ಹಿರಿಯ ನಿರ್ದೇಶಕ ಮಹೇಶ್ ಭಟ್, ನಟಿ ಮೌನಿ ರಾಯ್ ಮತ್ತು ಊರ್ವಶಿ ರೌಟೇಲ್ಗೆ ನೋಟಿಸ್ ನೀಡಿತ್ತು. ಇವರಷ್ಟೇ ಅಲ್ಲದೆ ರಣ್ವಿಜಯ್ ಸಿಂಗ್, ಪ್ರಿನ್ಸ್ ನರುಲಾ ಅವರ ಹೆಸರೂ ಸಹ ಪಟ್ಟಿಯಲ್ಲಿತ್ತು. ಇದೀಗ ಆ ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ನಿರ್ದೇಶಕ ಮಹೇಶ್ ಭಟ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಸಾಧನೆ ಕಡೆಗಣಿಸಬೇಡಿ: ವಿವಾದಗಳಿಗೆ ಉತ್ತರ ಕೊಟ್ಟ ಕಾರ್ಗಿಲ್ಗರ್ಲ್
‘ನಾನು ಈ ಮೂಲಕ ನಿಮಗೆ ತಿಳಿಸುವುದೇನೆಂದರೆ, ಆ ನವೆಂಬರ್ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದಕ್ಕೆ ಮಾತ್ರ ಒಪ್ಪಿದ್ದೆ. ಶೋದ ಇನ್ನಿತರ ಚಟುವಟಿಕೆಗಳಲ್ಲಿ ನಾನು ಪಾಲುದಾರನಲ್ಲ. ಆ ಬಗ್ಗೆ ನನ್ನ ಬಳಿ ಒಪ್ಪಂದದ ಪತ್ರವಿದೆ. ಆದರೆ, ಇದೆಲ್ಲದರ ನಡುವೆ ನನ್ನ ಹೆಸರನ್ನೂ ತಳುಕು ಹಾಕಿ ನನ್ನನ್ನು ತಪ್ಪಿತಸ್ಥನಂತೆ ನೋಡಲಾಗುತ್ತಿದೆ’ ಎಂದಿದ್ದಾರೆ’
ಇತ್ತೀಚೆಗಷ್ಟೇ ಸಾಮಾಜಿಕ ಹೋರಾಟಗಾರ್ತಿ ಯೋಗಿತಾ ಭಯಾನಾ, ಕಿರು ವಿಡಿಯೋವೊಂದನ್ನು ಮಾಡಿ, ಮಾಡೆಲಿಂಗ್ ಹೆಸರಿನಲ್ಲಿ ಮಹಿಳೆಯರನ್ನು ಕಾಮದ ಕೆಲಸಕ್ಕೆ ಬಳಸಿಕೊಳ್ಳುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಈ ದಂಧೆಯಲ್ಲಿ ಬಾಲಿವುಡ್ನ ಘಟಾನುಘಟಿಗಳು ಪಾಲುದಾರರಿದ್ದಾರೆ ಎಂದಿದ್ದರು.
ಇದನ್ನೂ ಓದಿ: ಗಾಳಿಪಟದ ನೆರಳಿನ ಜತೆ ಮತ್ತೆ ಬಂದ ಶ್ರುತಿ
ಐಎಂಜಿ ಸಂಸ್ಥೆಯ ಸನ್ನಿ ವರ್ಮಾ ಮಾಡೆಲಿಂಗ್ ನೆಪದಲ್ಲಿ ಮುಗ್ದ ಯುವತಿಯರನ್ನು ಬೇರೆ ರೀತಿಯಲ್ಲಿಯೇ ಬಳಸಿಕೊಳ್ಳುತ್ತಿದ್ದಾನೆಂದು ಆರೋಪಿಸಿದ್ದು, ಆತನ ಕಂಪನಿಗೆ ಮತ್ತು ಆತನ ಜಾಹೀರಾತಿಗಳಿಗೆ ಮಹೇಶ್ ಭಟ್, ಮೌನಿ ರಾಯ್, ಊರ್ವಶಿ ರೌಟೇಲ್ ಸೇರಿ ಅನೇಕ ಬಾಲಿವುಡ್ ಮಂದಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಕೈವಾಡವೂ ಇದೆ ಎಂದು ಯೋಗಿತಾ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. (ಏಜೆನ್ಸೀಸ್)