More

    ಗ್ರಾಹಕರ ವಿಶ್ವಾಸ ಗಳಿಸಿ

    ಮಹಾಲಿಂಗಪುರ: ನಂಬಿಕೆ, ಪ್ರಾಮಾಣಿಕತೆ ಮತ್ತು ಪಾರದರ್ಶಕ ವ್ಯವಹಾರಗಳ ಮೂಲಕ ಸಹಕಾರ ಸಂಸ್ಥೆಗಳು ಗ್ರಾಹಕರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಸೇವೆ ಸಲ್ಲಿಸಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ಸ್ಥಳೀಯ ನಡುಚೌಕಿ ಹತ್ತಿರ ಶ್ರೀ ಮಹಾಲಕ್ಷ್ಮೀ ವೆಂಕಟೇಶ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು, ಕೃಷಿ, ಆರೋಗ್ಯ ರಕ್ಷಣೆ, ಹಣಕಾಸು, ಆಹಾರ ಎಲ್ಲ ಕ್ಷೇತ್ರಗಳನ್ನು ಸಹಕಾರಿ ಪ್ರತಿನಿಧಿಸುತ್ತಿದೆ. ಗ್ರಾಹಕರ ವಿಶ್ವಾಸ ಗಳಿಸಿ ಅವರ ಪ್ರಗತಿಗೆ ಪೂರಕವಾಗಿ ಸಹಕಾರಿ ಸಂಸ್ಥೆಗಳು ಬೆಳೆದು ದೇಶಕ್ಕೆ ಕೊಡುಗೆ ನೀಡಬೇಕು. ಸಾಲ ಸದುದ್ದೇಶಕ್ಕೆ ಬಳಕೆಯಾಗುತ್ತದೆಯೋ ಇಲ್ಲವೋ ಎಂದು ಸಾಲ ನೀಡುವ ಮುನ್ನ ಬ್ಯಾಂಕ್‌ಗಳು ತಿಳಿದುಕೊಳ್ಳಬೇಕು. ಸದುದ್ದೇಶಕ್ಕಾಗಿ ನೀಡಿದ ಸಾಲ ಗ್ರಾಹಕರ ಪ್ರಗತಿಗೆ ಮುನ್ನುಡಿ ಬರೆದು ಮರುಪಾವತಿ ಸರಳವಾಗಲಿದೆ ಎಂದು ಹೇಳಿದರು.

    ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಬೆಂಗಳೂರಿನ ಆರ್ಯವೈಶ್ಯ ಮಹಾಮಂಡಳ ಕಾರ್ಯಕಾರಿ ನಿರ್ದೇಶಕ ಶ್ರೀಪಾದ ಗುಂಡಾ ಆಗಮಿಸಿದ್ದರು. ಬ್ಯಾಂಕ್ ಅಧ್ಯಕ್ಷ ವೆಂಕಟೇಶ ಗುಂಡಾ ಅಧ್ಯಕ್ಷತೆ ವಹಿಸಿದ್ದರು.

    ಬ್ಯಾಂಕ್ ಉಪಾಧ್ಯಕ್ಷ ಈರಣ್ಣ ಹಲಗತ್ತಿ, ನಿರ್ದೇಶಕರಾದ ಮಂಜುನಾಥ ಗುಂಡಾ, ರಾಘವೇಂದ್ರಪ್ರಸಾದ ಗುಂಡಾ, ಹರೀಶ ಪೋಲಂಪಲ್ಲಿ, ಚೈತ್ರಲಕ್ಷ್ಮೀ ಗುಂಡಾ, ಸ್ಮೀತಾ ಗುಂಡಾ, ಮಹಾಲಿಂಗಯ್ಯ ಹಿಟ್ಟಿನಮಠ, ವಿಜಯಕುಮಾರ ಬಾಡನವರ, ಹುಚ್ಚೇಶ ವಡ್ಡರ, ಭರಮಪ್ಪ ಡುಮ್ಮಣ್ಣವರ, ಕರಿಯಪ್ಪ ಹಂಚಿನಾಳ, ಮುಖ್ಯ ಕಾರ್ಯನಿರ್ವಾಹಕ ಸತೀಶ ಜಮಖಂಡಿ, ರಾಜು ತಾಳಿಕೋಟಿ ಮುಂತಾದವರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts